ಜರ್ಮನಿಗೆ 3ನೇ ಹಾಕಿ ವಿಶ್ವಕಪ್‌; ಪ್ರಶಸ್ತಿ ಉಳಿಸಿಕೊಳ್ಳದ ಬೆಲ್ಜಿಯಂ

ಶೂಟೌಟ್‌ನಲ್ಲಿ ಜರ್ಮನಿಗೆ ಜಯ

Team Udayavani, Jan 29, 2023, 10:24 PM IST

ಜರ್ಮನಿಗೆ 3ನೇ ಹಾಕಿ ವಿಶ್ವಕಪ್‌; ಪ್ರಶಸ್ತಿ ಉಳಿಸಿಕೊಳ್ಳದ ಬೆಲ್ಜಿಯಂ

ಭುವನೇಶ್ವರ: ಜರ್ಮನಿ 3ನೇ ಬಾರಿಗೆ ಹಾಕಿ ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಭಾನು ವಾರ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಅದು ಹಾಲಿ ಚಾಂಪಿಯನ್‌ ಬೆಲ್ಜಿಯಂ ವಿರುದ್ಧ ಶೂಟೌಟ್‌ನಲ್ಲಿ ಮೇಲುಗೈ ಸಾಧಿಸಿತು.

ನಿಗದಿತ ಅವಧಿಯಲ್ಲಿ ಪಂದ್ಯ 3-3 ಸಮಬಲದಲ್ಲಿ ನೆಲೆಸಿತ್ತು. ಶೂಟೌಟ್‌ನಲ್ಲಿ ಜರ್ಮನಿ 5-4 ಅಂತರದಿಂದ ಗೆದ್ದು ಬಂದಿತು. ಇದು 2006ರ ಬಳಿಕ ಜರ್ಮನಿಗೆ ಒಲಿದ ಮೊದಲ ಹಾಕಿ ವಿಶ್ವಕಪ್‌. 2002ರಲ್ಲೂ ಚಾಂಪಿಯನ್‌ ಆಗಿದ್ದ ಜರ್ಮನ್‌ ಪಡೆ ಕಪ್‌ ಉಳಿಸಿಕೊಂಡ 3 ತಂಡಗಳಲ್ಲಿ ಒಂದಾಗಿತ್ತು.

ಬೆಲ್ಜಿಯಂ ಆರಂಭದಲ್ಲಿ ಮುನ್ನುಗ್ಗಿ 11 ನಿಮಿಷಗಳಲ್ಲಿ 2 ಗೋಲು ಸಿಡಿಸಿತು. ಜರ್ಮನಿ 29ನೇ, 41ನೇ ಹಾಗೂ 48ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ಸಾಧಿಸಿತು. ಪಂದ್ಯದ ಮುಕ್ತಾಯಕ್ಕೆ ಇನ್ನೇನು ಒಂದು ನಿಮಿಷ ಉಳಿದಿರುವಾಗ ಬೆಲ್ಜಿಯಂನ ಟಾಮ್‌ ಬೂನ್‌ ಗೋಲೊಂದನ್ನು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಶೂಟೌಟ್‌ನಲ್ಲಿ ಜರ್ಮನಿಗೆ ಅದೃಷ್ಟ ಕೈ ಹಿಡಿಯಿತು. ಈ ಕೂಟದಲ್ಲಿ ಜರ್ಮನಿ 0-2 ಹಿನ್ನಡೆ ಬಳಿಕ ಸಾಧಿಸಿದ 3ನೇ ಗೆಲುವು ಇದಾಗಿದೆ.

ನೆದರ್ಲೆಂಡ್ಸ್‌ಗೆ ಕಂಚು

ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಕಂಚಿನ ಪದಕ ನೆದರ್ಲೆಂಡ್ಸ್‌ಗೆ ಒಲಿಯಿತು. ಫೈನಲ್‌ಗ‌ೂ ಮೊದಲು ನಡೆದ ತೃತೀಯ ಸ್ಥಾನದ ಸ್ಪರ್ಧೆಯಲ್ಲಿ ಡಚ್‌ ಪಡೆ 3-1 ಗೋಲುಗಳಿಂದ ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯವನ್ನು ಹಿಮ್ಮೆಟ್ಟಿಸಿ ಸತತ 4ನೇ ಸಲ ಪೋಡಿಯಂ ಏರಿತು.

ನೆದರ್ಲೆಂಡ್ಸ್‌ ನಾಯಕ ಥಿಯರಿ ಬ್ರಿಂಕ್‌ಮ್ಯಾನ್‌ 2 ಗೋಲು ಸಿಡಿಸಿ ಗೆಲುವಿನ ಹೀರೋ ಎನಿಸಿದರು (35ನೇ ಹಾಗೂ 40ನೇ ನಿಮಿಷ). ಇದಕ್ಕೂ ಮುನ್ನ ಪೆನಾಲ್ಟಿ ಕಾರ್ನರ್‌ ಎಕ್ಸ್‌ಪರ್ಟ್‌ ಜಿಪ್‌ ಜಾನ್ಸೆನ್‌ ಖಾತೆ ತೆರೆದಿದ್ದರು.

ಆಸ್ಟ್ರೇಲಿಯ 13ನೇ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ಸಾಧಿಸಿತ್ತು. ಆದರೆ ಕಾಂಗರೂ ತಾಕತ್ತು ಮೊದಲ ಕ್ವಾರ್ಟರ್‌ಗಷ್ಟೇ ಮೀಸಲಾಯಿತು.

ಎರಡೂ ತಂಡಗಳು 3 ಸಲ ವಿಶ್ವಕಪ್‌ ಗೆದ್ದಿವೆ. ನೆದರ್ಲೆಂಡ್ಸ್‌ 2010ರಲ್ಲಿ ಕಂಚು, 2014 ಮತ್ತು 2018ರಲ್ಲಿ ಬೆಳ್ಳಿ ಜಯಿಸಿತ್ತು. ಆಸ್ಟ್ರೇಲಿಯ 1998ರ ಬಳಿಕ ಬರಿಗೈಯಲ್ಲಿ ಮನೆಗೆ ಮರಳಿತು.

ಟಾಪ್ ನ್ಯೂಸ್

ಈಶಾನ್ಯ ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ

ಈಶಾನ್ಯ ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ

ಪರಿಸರ ತಡೆಗೆ ಕಠಿಣ ಕಾನೂನು ಅಗತ್ಯ: ಸಚಿವ ಆನಂದ್‌ ಸಿಂಗ್‌

ಪರಿಸರ ತಡೆಗೆ ಕಠಿಣ ಕಾನೂನು ಅಗತ್ಯ: ಸಚಿವ ಆನಂದ್‌ ಸಿಂಗ್‌

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಕೋಲಾಹಲ

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಕೋಲಾಹಲ

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಚಾರ್ಮಾಡಿ: ಅರಣ್ಯ ಸಿಬಂದಿ ಶ್ರಮ; ಕಾಳ್ಗಿಚ್ಚು ಹತೋಟಿಯತ್ತ

ಚಾರ್ಮಾಡಿ: ಅರಣ್ಯ ಸಿಬಂದಿ ಶ್ರಮ; ಕಾಳ್ಗಿಚ್ಚು ಹತೋಟಿಯತ್ತ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mousin khan

ಮೊಹ್ಸಿನ್‌ ಖಾನ್‌ ಐಪಿಎಲ್‌ಗೆ ಅನುಮಾನ

T20 World Cup-winning England team met British Prime Minister Rishi Sunak

ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ

Lionel Messi Scores 800 Career Goals

ವೃತ್ತಿಜೀವನದ 800ನೇ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ; ವಿಡಿಯೋ ನೋಡಿ

Asia Cup 2023:

ಪಾಕಿಸ್ಥಾನದಲ್ಲೇ ನಡೆಯಲಿದೆ ಏಷ್ಯಾಕಪ್ ಕೂಟ; ಭಾರತಕ್ಕೆ ವಿಶೇಷ ವ್ಯವಸ್ಥೆ?

MUMBAI WPL

ಮಹಿಳಾ ಪ್ರೀಮಿಯರ್‌ ಲೀಗ್‌: ಇಂದು ಪ್ಲೇಆಫ್- ಮುಂಬೈಗೆ ಯುಪಿ ಎದುರಾಳಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಈಶಾನ್ಯ ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ

ಈಶಾನ್ಯ ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ

ಪರಿಸರ ತಡೆಗೆ ಕಠಿಣ ಕಾನೂನು ಅಗತ್ಯ: ಸಚಿವ ಆನಂದ್‌ ಸಿಂಗ್‌

ಪರಿಸರ ತಡೆಗೆ ಕಠಿಣ ಕಾನೂನು ಅಗತ್ಯ: ಸಚಿವ ಆನಂದ್‌ ಸಿಂಗ್‌

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಕೋಲಾಹಲ

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಕೋಲಾಹಲ

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.