
ಘಾನಾ ತಂಡದ ನಾಕೌಟ್ ಆಸೆ ಜೀವಂತ; ದ.ಕೊರಿಯಕ್ಕೆ 2-3 ಗೋಲುಗಳಿಂದ ಸೋಲು
Team Udayavani, Nov 28, 2022, 10:50 PM IST

ಅಲ್ ರಯಾನ್: ಸೋಮವಾರ ನಡೆದ ಎಚ್ ಗುಂಪಿನ ಪಂದ್ಯದಲ್ಲಿ ದ.ಕೊರಿಯ ಎದುರು ಘಾನಾ ಗೆಲುವು ಸಾಧಿಸಿದೆ.
3-2 ಗೋಲುಗಳ ರೋಚಕ ಗೆಲುವು ಘಾನಾವನ್ನು ನಾಕೌಟ್ ಪೈಪೋಟಿಯಲ್ಲಿ ಉಳಿಸಿದೆ. ಇನ್ನೊಂದು ಕಡೆ ಸೋತಿರುವುದರಿಂದ ದ.ಕೊರಿಯ ಬಾಗಿಲು ಬಹುತೇಕ ಬಂದ್ ಆಗಿದೆ.
ಈ ಎರಡೂ ತಂಡಗಳಿಗೆ ಉಳಿದಿರುವುದು ತಲಾ ಒಂದು ಪಂದ್ಯ ಮಾತ್ರ. ಘಾನಾ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಮೇಲೇರುವ ಅವಕಾಶವಿದೆ. ದ.ಕೊರಿಯ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ ಮುಂದಿನ ಹಂತ ಕಷ್ಟವಿದೆ.
ನೀವು ಈ ವರದಿಯನ್ನು ಓದುವ ಹೊತ್ತಿಗೆ ಪೋರ್ಚುಗಲ್ ಮತ್ತು ಉರುಗ್ವೆ ನಡುವೆ ಸೋಮವಾರ ತಡರಾತ್ರಿ ಪಂದ್ಯವೊಂದು ಮುಗಿದಿರುತ್ತದೆ. ಇಲ್ಲಿನ ಫಲಿತಾಂಶ ಬಹಳ ಮುಖ್ಯ. ಈ ಫಲಿತಾಂಶದ ಮೂಲಕ ಎಚ್ ಗುಂಪಿನಲ್ಲಿ ಅಗ್ರಸ್ಥಾನಿ ತಂಡ ಯಾವುದೆಂದು ನಿರ್ಣಯಕ್ಕೆ ಬರಬಹುದು.
ಹಾಗೆಯೇ ಪೋರ್ಚುಗಲ್ ಮತ್ತು ಉರುಗ್ವೆ ನಡುವೆ ಸೋತ ತಂಡದೊಂದಿಗೆ ಘಾನಾ ಇನ್ನೊಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಿ ಬರಬಹುದು.
ನಿಕಟ ಕಾದಾಟ: ಪಂದ್ಯದ 24ನೇ ನಿಮಿಷದಲ್ಲಿ ಘಾನಾದ ರಕ್ಷಣಾ ಆಟಗಾರ ಮೊಹಮ್ಮದ್ ಸಲಿಸು ಆಕರ್ಷಕ ಗೋಲು ಬಾರಿಸಿದರು. 34ನೇ ನಿಮಿಷದಲ್ಲಿ ಮೊಹಮ್ಮದ್ ಕುಡುಸ್ ಇನ್ನೊಂದು ಗೋಲು ಬಾರಿಸಿ, ಘಾನಾ ಸ್ಥಿತಿಯನ್ನು ಮಜಬೂತುಗೊಳಿಸಿದರು.
ದ್ವಿತೀಯಾರ್ಧದಲ್ಲಿ ಅಂದರೆ 58ನೇ ನಿಮಿಷದಲ್ಲಿ ದ.ಕೊರಿಯ ತಿರುಗಿಬಿತ್ತು. ಸ್ಟ್ರೈಕರ್ ಚೊ ಗೆ ಸಂಗ್ ಗೋಲು ಬಾರಿಸಿ, ಅಂತರ 1-2ಕ್ಕಿಳಿಸಿದರು. 61ನೇ ನಿಮಿಷದಲ್ಲಿ ಸಂಗ್ ಮತ್ತೂಮ್ಮೆ ಅಬ್ಬರಿಸಿ ಗೋಲುಗಳನ್ನು 2-2ಕ್ಕೆ ಸಮಗೊಳಿಸಿದರು!
ದ.ಕೊರಿಯ ಈ ಸಂಭ್ರಮದಲ್ಲಿದ್ದಾಗಲೇ ಘಾನಾ ಮತ್ತೊಂದು ಹೊಡೆತ ನೀಡಿತು. 68ನೇ ನಿಮಿಷದಲ್ಲಿ ಮಿಡ್ಫಿಲ್ಡರ್ ಮೊಹಮ್ಮದ್ ಕುಡುಸ್ ಇನ್ನೊಂದು ಗೋಲು ಬಾರಿಸಿದರು! ಅಲ್ಲಿಗೆ ಘಾನಾ 3-2ಕ್ಕೆ ಗೋಲಿನ ಅಂತರವನ್ನು ಹೆಚ್ಚಿಸಿಕೊಂಡಿತು. ಅಲ್ಲಿಂದ ನಂತರ ಇತ್ತಂಡಗಳಿಗೆ ಗೋಲನ್ನು ದಾಖಲಿಸಲು ಸಾಧ್ಯವೇ ಆಗಲಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್-ಸಿಸಿಪಸ್ ಪ್ರಶಸ್ತಿ ರೇಸ್

ಇಂಡೋನೇಷ್ಯಾ ಮಾಸ್ಟರ್: ಲಕ್ಷ್ಯ ಸೇನ್ ಪರಾಭವ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್

ವಂದೇ ಭಾರತ್ ರೈಲಿನೊಳಗೆ ಕಸದ ರಾಶಿ: ಫೋಟೋ ವೈರಲ್

ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್ ‘ ಇನ್ನು ‘ಅಮೃತ್ ಉದ್ಯಾನ್’ ಆಗಿ ಮರುನಾಮಕರಣ