ಮತ್ತೆ ಗಾಯದ ನಡುವೆ ಒಂದೇ ಕೈಯಲ್ಲಿ ಆಡಿ ಹೃದಯ ಗೆದ್ದ ಹನುಮ ವಿಹಾರಿ


Team Udayavani, Feb 3, 2023, 1:31 PM IST

ಮತ್ತೆ ಗಾಯದ ನಡುವೆ ಒಂದೇ ಕೈಯಲ್ಲಿ ಆಡಿ ಹೃದಯ ಗೆದ್ದ ಹನುಮ ವಿಹಾರಿ

ಇಂದೋರ್‌: ಮಧ್ಯಪ್ರದೇಶ-ಆಂಧ್ರ ವಿರುದ್ಧ ಇಂದೋರ್‌ನಲ್ಲಿ ಇನ್ನೊಂದು ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯ ನಡೆಯುತ್ತಿದೆ. ಇದು ಅತ್ಯಂತ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಆಂಧ್ರ ತಂಡದ ನಾಯಕ ಹನುಮ ವಿಹಾರಿ ಮೊದಲ ಇನಿಂಗ್ಸ್‌ ನಲ್ಲೇ ಗಾಯಗೊಂಡು 16 ರನ್‌ ಗಳಾಗಿದ್ದಾಗ ಹೊರ ನಡೆದಿದ್ದರು. ಅವರ ಎಡಗೈ ಮಣಿಕಟ್ಟಿಗೆ ಬೌನ್ಸರ್‌ ಏಟು ಬಿದ್ದು, ಮೂಳೆ ಬಿರುಕುಬಿಟ್ಟಿತ್ತು. ಆದರೂ ಬಹಳ ಹೊತ್ತಿನ ನಂತರ ಕ್ರೀಸ್‌ಗೆ ಮರಳಿದ್ದ ಅವರು ಎಡಗೈನಲ್ಲಿ ಬ್ಯಾಟ್‌ ಮಾಡಿ ಒಟ್ಟು 27 ರನ್‌ ಗಳಿಸಿದ್ದರು. ತಂಡ 379 ರನ್‌ ಗಳಿಸಿತ್ತು.

ಇಂತಹ ನೋವಿನ ಸ್ಥಿತಿಯಲ್ಲೂ ಆಂಧ್ರಪ್ರದೇಶದ 2ನೇ ಇನಿಂಗ್ಸ್‌ನಲ್ಲಿ 11ನೇ ಬ್ಯಾಟರ್‌ ಆಗಿ ಕಣಕ್ಕಿಳಿದರು. ಮತ್ತೆ ಎಡಗೈನಲ್ಲಿ ಆಡಿ 3 ಬೌಂಡರಿ ಬಾರಿಸಿದರು. ವಿಶೇಷವೆಂದರೆ ಈ ಬಾರಿ ಅವರು ಒಂದೇ ಕೈನಲ್ಲಿ ಆಡಿದ್ದು. ಒಂದೇ ಕೈನಲ್ಲಿ ರಿವರ್ಸ್‌ ಸ್ವೀಪ್‌ ಮಾಡಿ ಅದ್ಭುತವಾಗಿ ಬೌಂಡರಿ ಬಾರಿಸಿದರು. ತಂಡ ಒಟ್ಟು 93 ರನ್‌ಗಳಿಗೆ ಆಲೌಟಾದರೂ, ವಿಹಾರಿ 16 ಎಸೆತಗಳಲ್ಲಿ 15 ರನ್‌ ಬಾರಿಸಿದರು. ಇದು ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ:ಟ್ರೇಲರ್ ನಲ್ಲಿ ಸದ್ದು ಮಾಡುತ್ತಿದೆ ‘ಹೊಂದಿಸಿ ಬರೆಯಿರಿ’

ಅವರ ಅಮೋಘ ಹೋರಾಟಕಾರಿ ಆಟ ಭಾರೀ ಸುದ್ದಿ ಮಾಡಿದೆ. ಅವರ ಇಂತಹ ಆಟ ಇದೇ ಮೊದಲಲ್ಲ. 2021ರಲ್ಲಿ ಆಸೀಸ್‌ ವಿರುದ್ಧ ಸಿಡ್ನಿಯಲ್ಲಿ ವಿಹಾರಿ ತೀರಾ ಮಂಡಿನೋವಿನಲ್ಲಿದ್ದರು. ಆಗ ಭಾರತಕ್ಕೆ 407 ರನ್‌ಗಳ ದೊಡ್ಡ ಗುರಿಯಿತ್ತು. ಅಂತಹ ಹೊತ್ತಿನಲ್ಲೂ ಪಂದ್ಯವನ್ನುಳಿಸಿಕೊಳ್ಳಲು 6ನೇ ವಿಕೆಟ್‌ಗೆ ಅಶ್ವಿ‌ನ್‌ ಜೊತೆಗೂಡಿ 62 ರನ್‌ ಸೇರಿಸಿದರು. ಈ ಹೊತ್ತಿನಲ್ಲಿ 161 ಎಸೆತ ಎದುರಿಸಿದ್ದ ಅವರು 23 ರನ್‌ ಗಳಿಸಿ ಅಜೇಯರಾಗಿದ್ದರು. ಇದರಿಂದ ಪಂದ್ಯ ಡ್ರಾ ಆಯಿತು. ಭಾರತ ಸೋಲು ತಪ್ಪಿಸಿಕೊಂಡಿತು.

ಟಾಪ್ ನ್ಯೂಸ್

1-wqweqeqwe

ಅಪೂರ್ಣ ಮೆಟ್ರೋ ಕಾಮಗಾರಿ; ಪ್ರಧಾನಿ ಉದ್ಘಾಟನೆಗೆ ಕಾಂಗ್ರೆಸ್‌ ಆಕ್ಷೇಪ

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

klasss

ದಕ್ಷಿಣ ಆಫ್ರಿಕಾಕ್ಕೆ 4 ವಿಕೆಟ್‌ ಗೆಲುವು

r ashok 1

ಯಾವ ಮುಖ ಇಟ್ಟುಕೊಂಡು ಚಿಂಚನಸೂರ್‌ ಕಾಂಗ್ರೆಸ್‌ಗೆ ಹೋಗ್ತಾರೆ? : ಆರ್‌.ಅಶೋಕ್‌

tdy-19

ಹೊಸ ಬದುಕಿನ ಆರಂಭ ಯುಗಾದಿ

ಹೊಸ ಮಾದರಿ ವೆರ್ನಾ ರಿಲೀಸ್‌; ನಾಲ್ಕು ವಿಧಗಳಲ್ಲಿ, ಒಂಬತ್ತು ಬಣ್ಣಗಳಲ್ಲಿ ಲಭ್ಯ

ಹೊಸ ಮಾದರಿ ವೆರ್ನಾ ರಿಲೀಸ್‌; ನಾಲ್ಕು ವಿಧಗಳಲ್ಲಿ, ಒಂಬತ್ತು ಬಣ್ಣಗಳಲ್ಲಿ ಲಭ್ಯ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

klasss

ದಕ್ಷಿಣ ಆಫ್ರಿಕಾಕ್ಕೆ 4 ವಿಕೆಟ್‌ ಗೆಲುವು

boxing

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ನಿತು, ಮನೀಷಾ ಕ್ವಾರ್ಟರ್‌ಫೈನಲಿಗೆ

vinesh

ಬಜರಂಗ್‌, ವಿನೇಶ್‌ ವಿದೇಶಿ ತರಬೇತಿಗೆ ಒಪ್ಪಿಗೆ

RCB MUMBA

ಮುಂಬೈ ಇಂಡಿಯನ್ಸ್‌ಗೆ 4 ವಿಕೆಟ್‌ ಗೆಲುವು: ಸೋಲಿನೊಂದಿಗೆ ಡಬ್ಲೂಪಿಎಲ್‌ ಮುಗಿಸಿದ ಮಂಧನಾ ಪಡೆ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-wqweqeqwe

ಅಪೂರ್ಣ ಮೆಟ್ರೋ ಕಾಮಗಾರಿ; ಪ್ರಧಾನಿ ಉದ್ಘಾಟನೆಗೆ ಕಾಂಗ್ರೆಸ್‌ ಆಕ್ಷೇಪ

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

1-csdsadsad

ಗ್ರಾಮದಲ್ಲಿ ಸುತ್ತಾಡಿದ ಪಂಚಾಯತ್‌ರಾಜ್‌ ಇಲಾಖೆಯ ಸಿಎಸ್‌;ಮಾತುಕತೆ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

klasss

ದಕ್ಷಿಣ ಆಫ್ರಿಕಾಕ್ಕೆ 4 ವಿಕೆಟ್‌ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.