ಪಾಂಡ್ಯ ಪುನರಾಗಮನಕ್ಕೆ ಹಿನ್ನಡೆ

ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಪ್ರವಾಸಕ್ಕೆ ಇಂದು ತಂಡ ಪ್ರಕಟ

Team Udayavani, Jan 11, 2020, 10:50 PM IST

HARDIK-PANDYA

ಮುಂಬಯಿ: ಭಾರತದ ಮುಂದೆ ಪೂರ್ಣ ಪ್ರಮಾಣದ ಕ್ರಿಕೆಟ್‌ ಸರಣಿಯೊಂದು ಕಾದಿದೆ. ಇದೇ ತಿಂಗಳು ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಳ್ಳಲಿರುವ ಟೀಮ್‌ ಇಂಡಿಯಾ ಅಲ್ಲಿ 5 ಟಿ20, 3 ಏಕದಿನ, 2 ಟೆಸ್ಟ್‌ ಪಂದ್ಯ ಗಳನ್ನಾಡಲಿದೆ. ಇದಕ್ಕಾಗಿ ರವಿವಾರ ಮುಂಬಯಿಯಲ್ಲಿ ತಂಡಗಳನ್ನು ಪ್ರಕಟಿಸಲಾಗುವುದು.

ಇದು ಸುದೀರ್ಘ‌ ಪ್ರವಾಸವಾದ್ದರಿಂದ 15ರ ಬದಲು 16 ಅಥವಾ 17 ಆಟಗಾರರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

ಶಸ್ತ್ರಚಿಕಿತ್ಸೆಗೊಳಗಾಗಿ ಸುದೀರ್ಘ‌ ವಿಶ್ರಾಂತಿಯಲ್ಲಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಏಕದಿನ ಕ್ರಿಕೆಟಿಗೆ ಮರಳಬಹುದೇ ಎಂಬ ನಿರೀಕ್ಷೆಗೆ ಹಿನ್ನಡೆಯಾಗಿದೆ. ಅವರು ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದು, ಭಾರತ “ಎ’ ತಂಡದೊಂದಿಗಿನ ನ್ಯೂಜಿಲ್ಯಾಂಡ್‌ ಪ್ರವಾಸದಿಂದಲೂ ಹೊರಬಿದ್ದಿದ್ದಾರೆ. ಪಾಂಡ್ಯ ಬದಲು ವಿಜಯ್‌ ಶಂಕರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ಟಿ20ಗೆ ಹೆಚ್ಚಿನ ಆದ್ಯತೆ
ಇದು ಟಿ20 ವಿಶ್ವಕಪ್‌ ವರ್ಷವಾದ್ದರಿಂದ ಭಾರತ ಈ ತಂಡದ ಆಯ್ಕೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದರಲ್ಲಿ ಅನುಮಾನವಿಲ್ಲ. ಶುಕ್ರವಾರವಷ್ಟೇ ಶ್ರೀಲಂಕಾ ವಿರುದ್ಧ ಸರಣಿ ಜಯಿಸಿದ ತಂಡವನ್ನೇ ಮುಂದುವರಿಸುವುದು ಬಹುತೇಕ ಖಚಿತ. ಹೆಚ್ಚುವರಿ ಯಾಗಿ ಯಾರು ಸೇರ್ಪಡೆಯಾಗಬಹುದು ಎಂಬು ದೊಂದು ಕುತೂಹಲ.

ಸೂರ್ಯಕುಮಾರ್‌ ಯಾದವ್‌ಗೆ ಅವಕಾಶ?
ಟಿ20 ತಂಡವನ್ನೇ ಏಕದಿನ ಸರಣಿಗೆ ಮುಂದುವರಿಸುವ ಸಾಧ್ಯತೆ ಇದೆ. ಇಲ್ಲಿ ಸದ್ಯ ಕೇದಾರ್‌ ಜಾಧವ್‌ ಲೆಕ್ಕದ ಭರ್ತಿಯ ಆಟಗಾರನಾಗಿ ಉಳಿದುಕೊಂಡಿದ್ದು, ಇವರನ್ನು ಮುಂದುವರಿಸಬೇಕೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಲ್ಲವಾ ದರೆ ಮುಂಬಯಿಯ “ಪವರ್‌ ಹಿಟ್ಟರ್‌’ ಸೂರ್ಯಕುಮಾರ್‌ ಯಾದವ್‌ ಅವರಿಗೆ ಬಾಗಿಲು ತೆರೆಯಲೂಬಹುದು.

ಸಂಜು ಸ್ಯಾಮ್ಸನ್‌ ಏಕದಿನ ಹಾಗೂ ಟಿ20 ತಂಡಗಳಲ್ಲಿ ಮೀಸಲು ಕೀಪರ್‌ ಆಗಿ ಉಳಿದುಕೊಳ್ಳುವುದು ಖಚಿತ. ಯಾದವ್‌ ಮತ್ತು ಸ್ಯಾಮ್ಸನ್‌ ಇಬ್ಬರೂ ನ್ಯೂಜಿಲ್ಯಾಂಡ್‌ ಪ್ರವಾಸದ ಭಾರತ “ಎ’ ತಂಡದಲ್ಲಿದ್ದಾರೆ.

ಕುಲದೀಪ್‌ ಅಥವಾ ಸೈನಿ?
ಹಾಗೆಯೇ ತೃತೀಯ ಸ್ಪಿನ್ನರ್‌ ಬೇಕೋ ಅಥವಾ ಹೆಚ್ಚುವರಿಯಾಗಿ 5ನೇ ಪೇಸ್‌ ಬೌಲರ್‌ನನ್ನು ಸೇರಿಸಿಕೊಳ್ಳುವುದೋ ಎಂಬ ಪ್ರಶ್ನೆ ಇದೆ. ನ್ಯೂಜಿಲ್ಯಾಂಡ್‌ ಟ್ರ್ಯಾಕ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಭಾರತ ಈಗಾಗಲೇ ಪ್ರಬಲ ಪಡೆಯೊಂದನ್ನು ಹೊಂದಿದೆ. ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ ಮತ್ತು ಉಮೇಶ್‌ ಯಾದವ್‌ ಆಯ್ಕೆಯಲ್ಲಿ ಯಾವ ಅನುಮಾನವೂ ಇಲ್ಲ. ಇವರ ಸಾಲಿಗೆ ನವದೀಪ್‌ ಸೈನಿ ಸೇರಲೂಬಹುದು. ಆಗ ಸ್ಪಿನ್‌ ವಿಭಾಗದಲ್ಲಿ ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ ಮಾತ್ರ ಉಳಿಯುತ್ತಾರೆ.

ಮೂರನೇ ಓಪನರ್‌ ಯಾರು?
ಭಾರತದ ಟೆಸ್ಟ್‌ ತಂಡದ ಆಯ್ಕೆಯ ವೇಳೆ ಎರಡು ಮುಖ್ಯ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮೊದಲನೆಯದು ತೃತೀಯ ಓಪನರ್‌ ಯಾರು ಎಂಬುದು. ರೋಹಿತ್‌ ಶರ್ಮ, ಮಾಯಾಂಕ್‌ ಅಗರ್ವಾಲ್‌ ಈಗಾಗಲೇ ಸೆಟ್‌ ಆಗಿದ್ದಾರೆ. ಮೀಸಲು ಆರಂಭಿಕನಾಗಿ ಕೆ.ಎಲ್‌. ರಾಹುಲ್‌ ಸ್ಥಾನ ಸಂಪಾದಿಸಬಹುದು. ಇಲ್ಲಿ ಪಂಜಾಬ್‌ನ ಶುಭಮನ್‌ ಗಿಲ್‌ ಕೂಡ ರೇಸ್‌ನಲ್ಲಿದ್ದಾರೆ.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.