ಐಸಿಸಿಯ ಬೌಂಡರಿ ಕೌಂಟ್ ನಿಯಮಕ್ಕೆ ಭಾರೀ ಟೀಕೆ
Team Udayavani, Jul 16, 2019, 5:51 AM IST
ಲಂಡನ್: ಅಂತಾ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ “ಬೌಂಡರಿ ಕೌಂಟ್’ ನಿಯಮವನ್ನು ರೋಹಿತ್ ಸಹಿತ ಹಾಲಿ ಮತ್ತು ಮಾಜಿ ಕ್ರಿಕೆಟಿಗ ರನೇಕರು ಟೀಕಿಸಿದ್ದಾರೆ. ವಿಶ್ವಕಪ್ ಪ್ರಶಸ್ತಿ ವಿಜೇತರನ್ನು ಬೌಂಡರಿ ಕೌಂಟ್ ನಿಯಮದಡಿ ನಿರ್ಧರಿಸುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
ಗಂಭೀರ ಚಿಂತನೆ
ಕ್ರಿಕೆಟ್ನ ಕೆಲವೊಂದು ನಿಯಮಗಳ ಬಗ್ಗೆ ಖಂಡಿತವಾಗಿಯೂ ಗಂಭೀರ ಚಿಂತನೆ ಹರಿಸಬೇಕಾದ ಅಗತ್ಯವಿದೆ ಎಂದು ಭಾರತೀಯ ಆರಂಭಿಕ ರೋಹಿತ್ ಟ್ವೀಟ್ ಮಾಡಿದ್ದಾರೆ.
ರೋಹಿತ್ ಮಾತಿಗೆ ಗೌತಮ್ ಗಂಭೀರ್ ಧ್ವನಿಗೂಡಿಸಿದ್ದಾರೆ. ವಿಶ್ವಕಪ್ ಫೈನಲ್ನ ಫಲಿತಾಂಶವನ್ನು ಯಾವ ತಂಡ ಗರಿಷ್ಠ ಬೌಂಡರಿ ಬಾರಿಸಿದೆ ಎಂಬ ಮೂಲಕ ನಿರ್ಧರಿಸಿರುವುದು ನನಗೆ ಅರ್ಥವಾಗುತ್ತಿಲ್ಲ. ಇದೊಂದು ಐಸಿಸಿಯ ಹಾಸ್ಯಾಸ್ಪದ ನಿಯಮ. ಪಂದ್ಯ ಟೈ ಆಗಿದ್ದರಿಂದ ನಾನು ಅದ್ಭುತ ರೀತಿಯಲ್ಲಿ ಫೈನಲ್ ಪಂದ್ಯ ಆಡಿದ ಎರಡೂ ತಂಡಗಳನ್ನು ಅಭಿನಂದಿಸುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನು ಒಪ್ಪಲಾರೆ: ಯುವಿ
ಬೌಂಡರಿ ಕೌಂಟ್ ಮೂಲಕ ವಿಜೇತರನ್ನು ನಿರ್ಧರಿಸಿದ ಐಸಿಸಿ ನಿಯಮವನ್ನು ನಾನು ಒಪ್ಪುವುದಿಲ್ಲ. ಆದರೆ ನಿಯಮವೆಂದರೆ ನಿಯಮ. ಕೊನೆಗೂ ವಿಶ್ವಕಪ್ ಗೆದ್ದ ಇಂಗ್ಲೆಂಡಿಗೆ ಅಭಿನಂದನೆಗಳು. ಕೊನೆ ಕ್ಷಣದವರೆಗೂ ಗೆಲುವಿಗಾಗಿ ಹೋರಾಡಿದ ಕಿವೀಸ್ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಯುವರಾಜ್ ಹೇಳಿದ್ದಾರೆ.
ಯು ಆರ್ ಎ ಜೋಕ್ !
ನ್ಯೂಜಿಲ್ಯಾಂಡಿನ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಐಸಿಸಿಯನ್ನು ಜೋಕ್ ಎಂದು ಕರೆದಿದ್ದಾರೆ. ನೈಸ್ ವರ್ಕ್ ಎಟ್ ಐಸಿಸಿ… ಯು ಆರ್ ಎ ಜೋಕ್ ಎಂದು ಬರೆದಿದ್ದಾರೆ.
ಭಾರತೀಯ ಸ್ಪಿನ್ ಲೆಜೆಂಡ್ ಬಿಷನ್ ಸಿಂಗ್ ಬೇಡಿ ಕೂಡ ಐಸಿಸಿ ನಿಯಮವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಕಲ್ಪನಾಶೂನ್ಯ ಐಸಿಸಿ ನಿಯಮವು ಇಂಗ್ಲೆಂಡ್ ವಿಶ್ವಕಪ್ ಗೆಲ್ಲಲು ನೆರವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿದರೆ ಒಳ್ಳೆಯದಿತ್ತು.
ನ್ಯೂಜಿಲ್ಯಾಂಡ್ ಫೈನಲ್ನಲ್ಲಿ ಆ ರೀತಿಯಲ್ಲಿ ಅಮೋಘವಾಗಿ ಆಡಿತ್ತು. ಐಸಿಸಿ ಈ ಬಗ್ಗೆ ಆಲೋಚಿಸಲಿ ಎಂದು ಬೇಡಿ ಟ್ವೀಟ್ ಮಾಡಿದ್ದಾರೆ.
ನ್ಯಾಯೋಚಿತವಲ್ಲ: ಜೋನ್ಸ್
ಡಿ-ಎಲ್ ನಿಯಮದಲ್ಲಿ ತಂಡ ಗಳಿಸಿದ ರನ್ ಮತ್ತು ಕಳೆದುಕೊಂಡ ವಿಕೆಟ್ಗಳನ್ನು ಪರಿಗಣಿಸಲಾಗುತ್ತದೆ. ಆದರೆ ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶವನ್ನು ಕೇವಲ ಬೌಂಡರಿಗಳ ಆಧಾರದಲ್ಲಿ ನಿರ್ಧರಿಸಿರುವುದು ನ್ಯಾಯೋಚಿತವಲ್ಲ ಎಂದು ಆಸ್ಟ್ರೇಲಿ ಯದ ಮಾಜಿ ಆಟಗಾರ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ