ಅಂಡರ್‌ 19 ವನಿತಾ ಟಿ20 ವಿಶ್ವಕಪ್‌: ಸತತ ನಾಲ್ಕು ವಿಕೆಟ್‌ ಕಿತ್ತ ಹೆನ್ರಿಟ್‌ ಐಶಿಮ್ವೆ


Team Udayavani, Jan 18, 2023, 12:23 AM IST

ಅಂಡರ್‌ 19 ವನಿತಾ ಟಿ20 ವಿಶ್ವಕಪ್‌: ಸತತ ನಾಲ್ಕು ವಿಕೆಟ್‌ ಕಿತ್ತ ಹೆನ್ರಿಟ್‌ ಐಶಿಮ್ವೆ

ಪೊಚೆಫ್ಸೂಮ್‌: ಸೀಮರ್‌ ಹೆನ್ರಿಟ್‌ ಐಶಿಮ್ವೆ ಅವರ ಅಮೋಘ ದಾಳಿಯಿಂದಾಗಿ ರುವಾಂಡ ತಂಡವು ಅಂಡರ್‌ 19 ವನಿತಾ ಟಿ20 ವಿಶ್ವಕಪ್‌ ಕೂಟದಲ್ಲಿ ಐತಿಹಾಸಿಕ ಮೊದಲ ಗೆಲುವು ದಾಖಲಿಸಿದೆ.

ಮಂಗಳವಾರ ನಡೆದ “ಬಿ’ ಬಣದ ಪಂದ್ಯದಲ್ಲಿ ರುವಾಂಡ ತಂಡವು ಜಿಂಬಾಬ್ವೆ ತಂಡವನ್ನು 39 ರನ್ನುಗಳಿಂದ ಸೋಲಿಸಿ ಈ ಸಾಧನೆ ಮಾಡಿದೆ.ಮೊದಲು ಬ್ಯಾಟಿಂಗ್‌ ಮಾಡಿದ ರುವಾಂಡ ತಂಡವು ಅಗ್ರ ಆಟಗಾರ್ತಿಯರ ಉತ್ತಮ ಆಟ ದಿಂದಾಗಿ 8 ವಿಕೆಟಿಗೆ 119 ರನ್‌ ಗಳಿಸಿತ್ತು.

ಇದಕ್ಕುತ್ತವಾಗಿ ಜಿಂಬಾಬ್ವೆ ತಂಡವು 18.4 ಓವರ್‌ಗಳಲ್ಲಿ 80 ರನ್ನಿಗೆ ಆಲೌಟಾಗಿ ಶರಣಾಯಿತು. ರುವಾಂಡ ತಂಡವು ಜಿಂಬಾಬ್ವೆಯ ಕೊನೆಯ ಐದು ವಿಕೆಟ್‌ಗಳನ್ನು ಆರು ಎಸೆತಗಳ ಅಂತರದಲ್ಲಿ ಉರುಳಿಸಿತ್ತು. ಇದರಲ್ಲಿ ಸೀಮರ್‌ ಹೆನ್ರಿಟ್‌ ಐಶಿಮ್ವೆ ಸತತ ನಾಲ್ಕು ಎಸೆತಗಳಲ್ಲಿ ವಿಕೆಟ್‌ ಹಾರಿಸಿದ ಸಾಧನೆಯೂ ಸೇರಿದೆ. ಇದು ಈ ವಿಶ್ವಕಪ್‌ನಲ್ಲಿ ದಾಖಲಾದ ಎರಡನೇ ಹ್ಯಾಟ್ರಿಕ್‌ ಸಾಧನೆ. ಈ ಮೊದಲು ದಕ್ಷಿಣ ಆಫ್ರಿಕಾದ ಲ್ಯಾಂಡ್ಸ್‌ಮನ್‌ ಹ್ಯಾಟ್ರಿಕ್‌ ಸಾಧಿಸಿದ್ದರು.

ನ್ಯೂಜಿಲ್ಯಾಂಡಿಗೆ ಜಯ
ಈ ಮೊದಲು ನಡೆದ “ಸಿ’ ಬಣದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವು ಐರ್ಲೆಂಡ್‌ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ, ಮೊದಲು ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌ ತಂಡವು 18.1 ಓವರ್‌ಗಳಲ್ಲಿ ಕೇವಲ 74 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್‌ ತಂಡವು ಕೇವಲ 6.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 75 ರನ್‌ ಗಳಿಸಿ ಜಯ ಸಾಧಿಸಿತು.

ಲ್ಯಾಂಡ್ಸ್‌ಮನ್‌ ಗೆ ಹ್ಯಾಟ್ರಿಕ್‌ ವಿಕೆಟ್‌
ಬೆನೋನಿ: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಮ್ಯಾಡಿಸನ್‌ ಲ್ಯಾಂಡ್ಸ್‌ ಮನ್‌ ಅವರು “ಡಿ’ ಬಣದ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಇದು ಅಂಡರ್‌ 19 ವನಿತಾ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್‌ ಆಗಿದೆ.

ಲ್ಯಾಂಡ್ಸ್‌ಮನ್‌ ತನ್ನ ಮೂರನೇ ಓವರಿನಲ್ಲಿ ಅನುಕ್ರಮವಾಗಿ ಮರ್ಯಮ್‌ ಫೈಸಲ್‌, ನಿಯಮ್‌ ಮತ್ತು ಒರ್ಲಾ ಮೊಂಟಗೊಮೆರಿ ಅವರ ವಿಕೆಟನ್ನು ಕಿತ್ತು ಹ್ಯಾಟ್ರಿಕ್‌ ಸಾಧಿಸಿದರು. ಲ್ಯಾಂಡ್ಸ್‌ಮನ್‌ ಈ ಪಂದ್ಯದಲ್ಲಿ 16 ರನ್ನಿಗೆ 4 ವಿಕೆಟ್‌ ಕಿತ್ತರು. ಇದರಿಂದಾಗಿ ಸ್ಕಾಟ್ಲೆಂಡ್‌ 68 ರನ್ನಿಗೆ ಆಲೌಟಾಗಿ 44 ರನ್ನಿನಿಂದ ಸೋತಿತ್ತು. ಈ ಮೊದಲು ದಕ್ಷಿಣ ಆಫ್ರಿಕಾ 7 ವಿಕೆಟಿಗೆ 112 ರನ್‌ ಗಳಿಸಿತ್ತು.

ಇಂದು ಭಾರತಕ್ಕೆ ಸ್ಕಾಟ್ಲೆಂಡ್‌ ಎದುರಾಳಿ
ಬೆನೋನಿ: ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸುವ ಶಫಾಲಿ ವರ್ಮ ನಾಯಕತ್ವದ ಭಾರತೀಯ ವನಿತಾ ತಂಡವು ಬುಧವಾರ ನಡೆಯುವ “ಡಿ’ ಬಣದ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ತಂಡವನ್ನು ಎದುರಿಸಲಿದೆ.

ಆರಂಭಿಕ ಆಟಗಾರ್ತಿಯರಾದ ಶ್ವೇತಾ ಸೆಹ್ರಾವತ್‌ ಮತ್ತು ಶಫಾಲಿ ವರ್ಮ ಅವರ ಅಮೋಘ ಆಟದಿಂದಾಗಿ ಭಾರತ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸಿದೆ.

ಸ್ಕಾಟ್ಲೆಂಡ್‌ ವಿರುದ್ಧವೂ ಶ್ವೇತಾ ಮತ್ತು ಶಫಾಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಇದೇ ವೇಳೆ ಸ್ಕಾಟ್ಲೆಂಡ್‌ ಈ ಮೊದಲು ಆಡಿದ ಎರಡು ಪಂದ್ಯಗಳಲಿ ಸೋತಿದೆ.

ದಿನದ ಇನ್ನೊಂದು “ಡಿ’ ಬಣದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಯುಎಇ ತಂಡವನ್ನು ಎದುರಿಸಲಿದೆ.

ಟಾಪ್ ನ್ಯೂಸ್

ಜಡೇಜ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

IPL 2023 Final: ಜಡೇಜಾ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

1-sadas

Srinagar ದಾಲ್ ಸರೋವರದಿಂದ 21 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು

1-sasd

T Narasipura ಭೀಕರ ಅಪಘಾತ: ಮೈಸೂರು ಆಸ್ಪತ್ರೆಗೆ ಸಚಿವ ನಾಗೇಂದ್ರ ಭೇಟಿ

1-sadsa-d

IPL Final ; ಚೆನ್ನೈಗೆ ದೊಡ್ಡ ಸವಾಲು ಮುಂದಿಟ್ಟ ಗುಜರಾತ್; ಸುದರ್ಶನ್ ಸೆಂಚುರಿ ಮಿಸ್

ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

ಮೈಸೂರು: ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಡೇಜ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

IPL 2023 Final: ಜಡೇಜಾ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

1-sadsa-d

IPL Final ; ಚೆನ್ನೈಗೆ ದೊಡ್ಡ ಸವಾಲು ಮುಂದಿಟ್ಟ ಗುಜರಾತ್; ಸುದರ್ಶನ್ ಸೆಂಚುರಿ ಮಿಸ್

IPL 2023 Final: Dhoni won the toss against GT

GTvsCSK ಮೀಸಲು ದಿನದ ಐಪಿಎಲ್ ಫೈನಲ್: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ

wtc

World Test Championship final ಪಂದ್ಯಕ್ಕೆ ಅಂತಿಮ ತಂಡ ಪ್ರಕಟಿಸಿದ ಭಾರತ- ಆಸ್ಟ್ರೇಲಿಯಾ

thumb-1

ಮೀಸಲು ದಿನದಲ್ಲಿ IPL Final: ಇಂದೂ ಮಳೆ ಬಂದು ಪಂದ್ಯ ರದ್ದಾದರೆ ಯಾರು ವಿನ್ನರ್?

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಜಡೇಜ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

IPL 2023 Final: ಜಡೇಜಾ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

1-sadas

Srinagar ದಾಲ್ ಸರೋವರದಿಂದ 21 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು

1-sadss

ಬಡವರ ಕೆಲಸದ ಬಗ್ಗೆ ನಿರ್ಲಕ್ಷ್ಯ ತರವಲ್ಲ: ಶಾಸಕ ಹರೀಶ್‌ ಗೌಡ ಎಚ್ಚರಿಕೆ

1-sad-sa

Hunsur ಟ್ರಾಕ್ಟರ್ ಕಳ್ಳತನ ಮಾಡಿದ್ದ ಆರೋಪಿ ಬಂಧನ