Super 8; ಮೊದಲ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಭಾರತ ಜಯಭೇರಿ


Team Udayavani, Jun 20, 2024, 11:39 PM IST

1-aaaawee

ಬ್ರಿಜ್‌ಟೌನ್‌: ಟಿ20 ವಿಶ್ವಕಪ್‌ನ ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ
47 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕ, ಹಾರ್ದಿಕ್ ಪಂದ್ಯ ಅವರ 32 ರನ್ ನೆರವಿನಿಂದ ಭಾರತೀಯ ತಂಡವುಎಂಟು ವಿಕೆಟಿಗೆ 181 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಅಫ್ಘಾನ್ 20 ಓವರ್ ಗಳಲ್ಲಿ 134 ರನ್ ಗಳಿಗೆ ಆಲೌಟಾಯಿತು. ಅಜ್ಮತುಲ್ಲಾ ಒಮರ್ಜಾಯ್ 26 ರನ್ ಗರಿಷ್ಠ ಗಳಿಕೆ.

ಬುಮ್ರಾ ಬಿಗಿ ದಾಳಿ ನಡೆಸಿದ ಬುಮ್ರಾ 3 ವಿಕೆಟ್ ಕಬಳಿಸಿದರು(4-1-7-3). ಅರ್ಶದೀಪ್ ಕೂಡ ದುಬಾರಿ ಎನಿಸಿದರೂ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2, ಜಡೇಜ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ನಾಯಕ ರೋಹಿತ್‌ ಶರ್ಮ ಔಟಾದ ಬಳಿಕ ವಿರಾಟ್‌ ಕೊಹ್ಲಿ ಮತ್ತು ರಿಷಭ್‌ ಪಂತ್‌ ಎಚ್ಚರಿಕೆಯಿಂದ ಆಡಿದರು. ಇವರಿಬ್ಬರು ದ್ವಿತೀಯ ವಿಕೆಟಿಗೆ 43 ರನ್‌ ಪೇರಿಸಿ ಬೇರ್ಪಟ್ಟರು. 20 ರನ್‌ ಗಳಿಸಿದ ರಿಷಭ್‌ ಅವರು ರಶೀದ್‌ಗೆ ವಿಕೆಟ್‌ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಕೊಹ್ಲಿ ಕೂಡ ಪೆವಿಲಿಯನ್‌ ಸೇರಿಕೊಂಡರು.

ಈ ನಡುವೆ ಸೂರ್ಯಕುಮಾರ್‌ ಯಾದವ್‌ ಅಫ್ಘಾನಿಸ್ಥಾನದ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಅವರು ಹಾರ್ದಿಕ್‌ ಪಾಂಡ್ಯ ಜತೆ ಐದನೇ ವಿಕೆಟಿಗೆ 60 ರನ್‌ ಪೇರಿಸಿದರು. ರನ್‌ ಗಳಿಸಲು ಕಷ್ಟವಾಗುತ್ತಿದ್ದ ಈ ಪಿಚ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಸೂರ್ಯ 28 ಎಸೆತಗಳಿಂದ 53 ರನ್‌ ಗಳಿಸಿ ಐದನೆಯವರಾಗಿ ಔಟಾದರು. 5 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು.

ಬಿಗು ದಾಳಿ ಸಂಘಟಿಸಿದ ರಶೀದ್‌ ಖಾನ್‌ 26 ರನ್ನಿಗೆ ಮೂರು ವಿಕೆಟ್‌ ಉರುಳಿಸಿದರೆ ಫಾಜಲ್‌ಹಕ್‌ ಫಾರೂಖಿ 33 ರನ್ನಿಗೆ 3 ವಿಕೆಟ್‌ ಪಡೆದರು.

ಭಾರತೀಯ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವೇಗಿ ಮೊಹಮ್ಮದ್‌ ಸಿರಾಜ್‌ ಅವರ ಬದಲಿಗೆ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಅಫ್ಘಾನಿಸ್ಥಾನ ಕೂಡ ಒಂದು ಬದಲಾವಣೆ ಮಾಡಿದ್ದು ಕರೀಮ್‌ ಜನತ್‌ ಅವರ ಬದಲಿಗೆ ಹಜ್ರತುಲ್ಲ ಜಜಾರಿ ಅವರನ್ನು ಸೇರಿಸಿಕೊಂಡಿತ್ತು.

200 ಬೌಂಡರಿ ಸೂರ್ಯ ದಾಖಲೆ

ಟಿ20 ರ್‍ಯಾಂಕಿಂಗ್‌ನ ನಂ. 1 ಬ್ಯಾಟರ್‌, ಸೂರ್ಯಕುಮಾರ್‌ ಯಾದವ್‌, ಟಿ20 ಕ್ರಿಕೆಟ್‌ನಲ್ಲಿ 200 ಬೌಂಡರಿಗಳ ದಾಖಲೆ ನಿರ್ಮಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ 53 ರನ್‌ ಸಿಡಿಸುವ ಮೂಲಕ ಸೂರ್ಯ, ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ 64 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 200 ಬೌಂಡರಿಗಳ ಸಾಧನೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬೌಂಡರಿಗಳನ್ನು ಬಾರಿಸಿರುವ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ಥಾನ ತಂಡದ ಬಾಬರ್‌ ಆಜಮ್‌, 123 ಪಂದ್ಯಗಳಲ್ಲಿ 440 ಬೌಂಡರಿ ಬಾರಿಸಿದ್ದಾರೆ. ದ್ವಿತೀಯ ಸ್ಥಾನಿ ಐರ್ಲೆಂಡ್‌ನ‌ ಪೌಲ್‌ ಸ್ಟರ್ಲಿಂಗ್‌, 418 ಬೌಂಡರಿ ಬಾರಿಸಿದ್ದರೆ, ತೃತೀಯ ಸ್ಥಾನಿ ಭಾರತದ ನಾಯಕ ರೋಹಿತ್‌ ಶರ್ಮ, 365 ಬೌಂಡರಿ ಬಾರಿಸಿದ್ದಾರೆ.

33 ವರ್ಷದ ಸೂರ್ಯಕುಮಾರ್‌, ಒಟ್ಟು 284 ಟಿ20 ಪಂದ್ಯಗಳಲ್ಲಿ 7,373 ರನ್‌ ಬಾರಿಸಿದ್ದಾರೆ. ಇದರಲ್ಲಿ 6 ಶತಕ, 50 ಅರ್ಧಶತಕಗಳು ಸೇರಿವೆ.

ಕಪ್ಪುಪಟ್ಟಿ ಧರಿಸಿ ಆಟ

ಗುರುವಾರ ನಿಧನ ಹೊಂದಿದ ಮಾಜಿ ವೇಗಿ ಡೇವಿಡ್‌ ಜಾನ್ಸನ್‌ ಅವರ ಗೌರವಾರ್ಥ ಭಾರತೀಯ ಕ್ರಿಕೆಟ್‌ ತಂಡದ ಸದಸ್ಯರು ಅಫ್ಘಾನಿಸ್ಥಾನ ತಂಡದೆದುರಿನ ಸೂಪರ್‌ 8 ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿ ಆಟವಾಡಿದರು.

ಜಾನ್ಸನ್‌ ಅವರ ಗೌರವಾರ್ಥ ಭಾರತೀಯ ತಂಡದ ಸದಸ್ಯರು ಕಪ್ಪುಪಟ್ಟಿ ಧರಿಸಿ ಆಡಲಿದ್ದಾರೆ ಎಂದು ಪಂದ್ಯ ಆರಂಭಕ್ಕಿಂತ ಮೊದಲು ಭಾರತೀಯ ಕ್ರಿಕೆಟ್‌ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಸಚಿನ್‌ ತೆಂಡುಲ್ಕರ್‌, ವೆಂಕಟೇಶ್‌ ಪ್ರಸಾದ್‌, ಅನಿಲ್‌ ಕುಂಬ್ಳೆ ಸಹಿತ ಮಾಜಿ ಕ್ರಿಕೆಟಿಗರು ಜಾನ್ಸನ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

Ad

ಟಾಪ್ ನ್ಯೂಸ್

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ಚಾಮರಾಜನಗರ: ಚಿರತೆಗೆ ವಿಷಪ್ರಾಶನ?

ಚಾಮರಾಜನಗರ: ಚಿರತೆಗೆ ವಿಷಪ್ರಾಶನ?

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

KEA; ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

ಹೈಕೋರ್ಟ್‌

ಸಿಬಿಎಸ್‌ಸಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್‌ ಸೂಚನೆ

High Court: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಆರೋಪ; ಸಿಎಂ ವಿರುದ್ಧದ ವಿಚಾರಣೆಗೆ ತಡೆ

High Court: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಆರೋಪ; ಸಿಎಂ ವಿರುದ್ಧದ ವಿಚಾರಣೆಗೆ ತಡೆ

High Court; ಅಕ್ರಮ ಆಸ್ತಿ: ಕೆ.ಎಸ್‌.ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ತಡೆ

High Court; ಅಕ್ರಮ ಆಸ್ತಿ: ಕೆ.ಎಸ್‌.ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

Rohit Sharma may lose ODI captaincy

Team India: ರೋಹಿತ್ ಶರ್ಮಾ ಕೈ ತಪ್ಪುತ್ತಾ ಏಕದಿನ ನಾಯಕತ್ವ? ಏನಿದು ಹೊಸ ಬೆಳವಣಿಗೆ

England v India: ಲಾರ್ಡ್ಸ್‌ ಟೆಸ್ಟ್‌: ಇಂಗ್ಲೆಂಡಿಗೆ ರೂಟ್‌ ಆಸರೆ

England v India: ಲಾರ್ಡ್ಸ್‌ ಟೆಸ್ಟ್‌: ಇಂಗ್ಲೆಂಡಿಗೆ ರೂಟ್‌ ಆಸರೆ

FIFA Rankings: 133ಕ್ಕೆ ಭಾರತ ಕುಸಿತ,9 ವರ್ಷಗಳಲ್ಲೇ ಕನಿಷ್ಠ

FIFA Rankings: 133ಕ್ಕೆ ಭಾರತ ಕುಸಿತ,9 ವರ್ಷಗಳಲ್ಲೇ ಕನಿಷ್ಠ

ಐದು ಎಸೆತಗಳಲ್ಲಿ 5 ವಿಕೆಟ್‌: ಐರ್ಲೆಂಡಿನ ಕರ್ಟಿಸ್‌ ಕ್ಯಾಂಪರ್‌ ದಾಖಲೆ

ಐದು ಎಸೆತಗಳಲ್ಲಿ 5 ವಿಕೆಟ್‌: ಐರ್ಲೆಂಡಿನ ಕರ್ಟಿಸ್‌ ಕ್ಯಾಂಪರ್‌ ದಾಖಲೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ಚಾಮರಾಜನಗರ: ಚಿರತೆಗೆ ವಿಷಪ್ರಾಶನ?

ಚಾಮರಾಜನಗರ: ಚಿರತೆಗೆ ವಿಷಪ್ರಾಶನ?

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

KEA; ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

ಹೈಕೋರ್ಟ್‌

ಸಿಬಿಎಸ್‌ಸಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.