ಅರ್ಹತಾ ಸುತ್ತು: ನೆದರ್ಲೆಂಡ್ಸ್ಗೆ ಎರಡನೇ ಗೆಲುವು
ಯುಎಇ ವಿರುದ್ಧ ಶ್ರೀಲಂಕಾ ಜಯಭೇರಿ
Team Udayavani, Oct 18, 2022, 11:15 PM IST
ಗೀಲಾಂಗ್ (ಆಸ್ಟ್ರೇಲಿಯ): ಟಿ20 ವಿಶ್ವಕಪ್ನ ಸೂಪರ್ 12 ಹಂತಕ್ಕೆ ಅರ್ಹತೆ ಗಳಿಸಲು ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ನಮೀಬಿಯಾ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದೆ. ಇದು ನೆದರ್ಲೆಂಡ್ಸ್ ತಂಡದ ಸತತ ಎರಡನೇ ಗೆಲುವು ಆಗಿದೆ.
ಆಲ್ರೌಂಡ್ ಆಟದ ಪ್ರದರ್ಶನ ನೀಡಿದ ನೆದರ್ಲೆಂಡ್ಸ್ ತಂಡವು ಸುಲಭವಾಗಿ ಈ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ನಿಖರ ದಾಳಿಯಿಂದ ನಮೀಬಿಯಾದ ಮೊತ್ತವನ್ನು 6 ವಿಕೆಟಿಗೆ 121 ರನ್ನಿಗೆ ನಿಯಂತ್ರಿಸಿದ ನೆದರ್ಲೆಂಡ್ಸ್ ತಂಡವು ಆಬಲಿಕ 19.3 ಓವರ್ಗಳಲ್ಲಿ ಐದು ವಿಕೆಟಿಗೆ 122 ರನ್ ಗಳಿಸಿ ಜಯ ಸಾಧಿಸಿತು.
ನೆದರ್ಲೆಂಡ್ ಒಂದು ಹಂತದಲ್ಲಿ ಒಂದು ವಿಕೆಟಿಗೆ 92 ರನ್ ಗಳಿಸಿ ಭರ್ಜರಿ ಗೆಲುವಿನ ಸನಿಹದಲ್ಲಿತ್ತು. ತಂಡ ಆಬಳಿಕ ಕೆಲವು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ಸದ್ಯ ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದಿರುವ ನೆದರ್ಲೆಂಡ್ “ಎ’ ಬಣದಲ್ಲಿ ಅಗ್ರಸ್ಥಾನದಲ್ಲಿದೆ. ನಮೀಬಿಯಾ ಮತ್ತು ಶ್ರೀಲಂಕಾ ತಲಾ ಒಂದರಲ್ಲಿ ಗೆದ್ದಿದ್ದರೆ ಯುಎಇ ಎರಡು ಪಂದ್ಯಗಳಲ್ಲಿ ಸೋತಿದೆ. ನೆದರ್ಲೆಂಡ್ಸ್ ಗುರುವಾರ ನಡೆಯುವ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದರೆ ನಮೀಬಿಯಾ ತಂಡವು ಯುಎಇ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳ ಫಲಿತಾಂಶಗಳ ಆಧಾರದಲ್ಲಿ ಯಾವ ತಂಡ ಸೂಪರ್ 12 ಹಂತಕ್ಕೆ ಅರ್ಹತೆ ಗಳಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.
ಶ್ರೀಲಂಕಾ ಜಯಭೇರಿ
ನಮೀಬಿಯಾ ಕೈಯಲ್ಲಿ ಸೋತಿದ್ದ ಶ್ರೀಲಂಕಾವು ಎರಡನೇ ಪಂದ್ಯದಲ್ಲಿ ಯುಎಇ ತಂಡವನ್ನು 79 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಸೂಪರ್ 12 ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಿಕೊಂಡಿತು.
ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕ ಅವರ ಉತ್ತಮ ಆಟದಿಂದಾಗಿ ಶ್ರೀಲಂಕಾ ತಂಡವು 8 ವಿಕೆಟಿಗೆ 152 ರನ್ ಗಳಿಸಿತು. ನಿಸ್ಸಾಂಕ 60 ಎಸೆತಗಳಿಂದ ಆರು ಬೌಂಡರಿ ನೆರವಿನಿಂದ 74 ರನ್ ಹೊಡೆದಿದ್ದರು. ಇದಕ್ಕುತ್ತರವಾಗಿ ಯುಎಇ ತಂಡವು 17.1 ಓವರ್ಗಳಲ್ಲಿ ಕೇವಲ 73 ರನ್ನಿಗೆ ಆಲೌಟಾಗಿ ಶರಣಾಯಿತು. ವನಿಂದು ಹಸರಂಗ ಡಿಸಿಲ್ವ 8 ರನ್ನಿಗೆ 3 ವಿಕೆಟ್ ಉರುಳಿಸಿದರೆ ಮಹೀಶ್ ತೀಕ್ಷಣ 15 ರನ್ನಿಗೆ 2 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್