ಅಂಡರ್‌-19 ವನಿತಾ ವಿಶ್ವಕಪ್‌ : ಪಾರ್ಶವಿ ಪರಾಕ್ರಮ; ಭಾರತಕ್ಕೆ ಜಯ


Team Udayavani, Jan 22, 2023, 10:55 PM IST

1-ffsfaf

ಪೊಚೆಫ್ ಸ್ಟ್ರೂಮ್‌: ಅಂಡರ್‌-19 ಟಿ20 ವಿಶ್ವಕಪ್‌ ಸೂಪರ್‌ ಸಿಕ್ಸ್‌ “ಎ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಸುಲಭದಲ್ಲಿ ಮಣಿಸುವ ಮೂಲಕ ಭಾರತ ಗೆಲುವಿನ ಹಳಿ ಏರಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾಕ್ಕೆ 20 ಓವರ್‌ಗಳಲ್ಲಿ ಗಳಿಸಲು ಸಾಧ್ಯವಾದದ್ದು 9 ವಿಕೆಟಿಗೆ 59 ರನ್‌ ಮಾತ್ರ. ಭಾರತ 7.2 ಓವರ್‌ಗಳಲ್ಲಿ 3 ವಿಕೆಟಿಗೆ 60 ರನ್‌ ಬಾರಿಸಿತು.

ಶ್ರೀಲಂಕಾ ಪತನದಲ್ಲಿ ಲೆಗ್‌ಸ್ಪಿನ್ನರ್‌ ಪಾರ್ಶವಿ ಚೋಪ್ರಾ ಪ್ರಮುಖ ಪಾತ್ರ ವಹಿಸಿದರು. ನಿಗದಿತ 4 ಓವರ್‌ಗಳಲ್ಲಿ ಒಂದು ಮೇಡನ್‌ ಮಾಡಿದ ಅವರು ಕೇವಲ 5 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕೆಡವಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಮನ್ನತ್‌ ಕಶ್ಯಪ್‌ 2 ವಿಕೆಟ್‌, ತಿತಾಸ್‌ ಸಾಧು ಮತ್ತು ಅರ್ಚನಾ ದೇವಿ ತಲಾ ಒಂದು ವಿಕೆಟ್‌ ಕಿತ್ತರು.

25 ರನ್‌ ಮಾಡಿದ ನಾಯಕಿ ವಿಶ್ಮಿ ಗುಣರತ್ನೆ ಶ್ರೀಲಂಕಾ ಸರದಿಯ ಟಾಪ್‌ ಸ್ಕೋರರ್‌. ಎರಡಂಕೆಯ ಗಡಿ ತಲುಪಿದ ಮತ್ತೋರ್ವ ಆಟಗಾರ್ತಿ ಉಮಯಾ ರತ್ನಾಯಕೆ (13).

ಚೇಸಿಂಗ್‌ ವೇಳೆ ನಾಯಕಿ ಶಫಾಲಿ ವರ್ಮ 15, ಶ್ವೇತಾ ಸೆಹ್ರಾವತ್‌ 13 ಮಾಡಿದರೆ, ವನ್‌ಡೌನ್‌ನಲ್ಲಿ ಬಂದ ರಿಚಾ ಘೋಷ್‌ ಕೇವಲ ಒಂದು ರನ್‌ ಮಾಡಿ ವಾಪಸಾದರು. ಮೂರೂ ವಿಕೆಟ್‌ ದೇವಿ¾ ವಿಹಂಗಾ ಉರುಳಿಸಿದರು. ಭಾರತದ ಗೆಲುವಿನ ವೇಳೆ ಸೌಮ್ಯಾ ತಿವಾರಿ 28 ರನ್‌ ಮಾಡಿ ಅಜೇಯರಾಗಿದ್ದರು.

ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ 87ಕ್ಕೆ ಉದುರಿದ ಭಾರತ 7 ವಿಕೆಟ್‌ಗಳಿಂದ ಸೋತಿತ್ತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-20 ಓವರ್‌ಗಳಲ್ಲಿ 9 ವಿಕೆಟಿಗೆ 59 (ವಿಶ್ಮಿ ಗುಣರತ್ನೆ 25, ಉಮಯಾ ರತ್ನಾಯಕೆ 13, ಪಾರ್ಶವಿ ಚೋಪ್ರಾ 5ಕ್ಕೆ 4, ಮನ್ನತ್‌ ಕಶ್ಯಪ್‌ 16ಕ್ಕೆ 2). ಭಾರತ-7.2 ಓವರ್‌ಗಳಲ್ಲಿ 3 ವಿಕೆಟಿಗೆ 60 (ಸೌಮ್ಯಾ ತಿವಾರಿ ಔಟಾಗದೆ 28, ಶಫಾಲಿ ವರ್ಮ 15, ಶ್ವೇತಾ ಸೆಹ್ರಾವತ್‌ 13, ದೇವಿ¾ ವಿಹಂಗಾ 34ಕ್ಕೆ 3). ಪಂದ್ಯಶ್ರೇಷ್ಠ: ಪಾರ್ಶವಿ ಚೋಪ್ರಾ.

ಟಾಪ್ ನ್ಯೂಸ್

Odisha Train Accident; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

Odisha ಭೀಕರ ರೈಲು ಅವಘಡ; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

DAIRY FARMING

Milk : 8 ತಿಂಗಳಿಂದ ಸಿಗದ ಹಾಲಿನ ಪ್ರೋತ್ಸಾಹ ಧನ

ADITHYA ROA

Mangalore ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಟ್ಟಿದ್ದ ಆದಿತ್ಯ ವಿರುದ್ಧ ಮತ್ತೂಂದು ದೂರು

WORLD CYCLE

World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್‌ ತುಳಿಯೋಣ

power lines

FAC, ದರ ಏರಿಕೆ ಸೇರಿ ಜೂನ್‌ ಬಿಲ್‌ ಇನ್ನಷ್ಟು ಭಾರ

new parliament interior

New Parliament: ಸಂಸತ್‌ ಭವನ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್‌ ಅಂಗಡಿ ಕೈಚಳಕ

manipur fire

Manipur: ಮಣಿಪುರ ಸಂಘರ್ಷದ ಇತಿಹಾಸ- ಇನ್ನೂ ಆರದ ಗಲಭೆಯ ಬೆಂಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC INDIA

ICC WTC Final: ಫೈನಲ್‌ ಭಾರತದ ಸ್ಪಿನ್‌ ದಾಳಿ ಕುರಿತು ಆಸೀಸ್‌ ಚಿಂತನೆ

AFGHAN ONE DAY

ಏಕದಿನ: ಲಂಕೆಯನ್ನು ಮಣಿಸಿದ ಅಫ್ಘಾನ್‌

hockey

Junior Asia Cup hockey: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

1-sada-dsad

Wrestlers protest : 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಬೆಂಬಲ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

Odisha Train Accident; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

Odisha ಭೀಕರ ರೈಲು ಅವಘಡ; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

DAIRY FARMING

Milk : 8 ತಿಂಗಳಿಂದ ಸಿಗದ ಹಾಲಿನ ಪ್ರೋತ್ಸಾಹ ಧನ

ADITHYA ROA

Mangalore ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಟ್ಟಿದ್ದ ಆದಿತ್ಯ ವಿರುದ್ಧ ಮತ್ತೂಂದು ದೂರು

WORLD CYCLE

World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್‌ ತುಳಿಯೋಣ

power lines

FAC, ದರ ಏರಿಕೆ ಸೇರಿ ಜೂನ್‌ ಬಿಲ್‌ ಇನ್ನಷ್ಟು ಭಾರ