ಸರಣಿ ಕೈ ತಪ್ಪಿದರೂ ಬಾಂಗ್ಲಾ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ
ಇಶಾನ್ ಕಿಶನ್ ಅತ್ಯಮೋಘ ದ್ವಿಶತಕ ; ಮೂರನೇ ಏಕದಿನ ಪಂದ್ಯ ಸ್ಮರಣೀಯ
Team Udayavani, Dec 10, 2022, 7:14 PM IST
ಚತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ದದ ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲೆರಡನ್ನು ಸೋತು ಸರಣಿ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಶನಿವಾರ ನಡೆದ ಮೂರನೇ ಏಕದಿನ ಪಂದ್ಯ ವನ್ನು ಭರ್ಜರಿಯಾಗಿ ಗೆದ್ದು ವೈಟ್ವಾಶ್ ತಪ್ಪಿಸಿಕೊಂಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶದ ಬೌಲಿಂಗ್ ಇಂದು ಕೈಕೊಟ್ಟಿತು. ಭಾರತದ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ಅಬ್ಬರಕ್ಕೆ ತತ್ತರಿಸಿ ಹೋಯಿತು. ನಿಗದಿತ 50 ಓವರ್ ಗಳಲ್ಲಿ ಇಶಾನ್ ಅವರ ಅಮೋಘ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್ ಗಳ ನಷ್ಟಕ್ಕೆ ಬರೋಬ್ಬರಿ 409 ರನ್ ಗಳನ್ನು ಕಲೆ ಹಾಕಿತು.
131 ಎಸೆತಗಳಲ್ಲಿ ಇಶಾನ್ 10 ಸಿಕ್ಸರ್ ಮತ್ತು 24 ಬೌಂಡರಿಗಳ ನೆರವಿನಿಂದ 210 ರನ್ ಗಳಿಸಿ ಔಟಾದರು. ತಂಡದ ಮೊತ್ತ 15 ಆಗಿದ್ದ ವೇಳೆ ಶಿಖರ್ ಧವನ್ ನಿರ್ಗಮಿಸಿದ ಬಳಿಕ ಭರ್ಜರಿ ಜೊತೆಯಾಟವಾಡಿದ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ 250 ರನ್ ಗಳ ನ್ನು ಎರಡನೇ ವಿಕೆಟ್ ಗೆ ಕಲೆ ಹಾಕಿದರು. ಕೊಹ್ಲಿ 91 ಎಸೆತಗಳಿಂದ 113 ರನ್ ಗಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ ಅವರ 72ನೇ ಶತಕವಾಗಿದೆ. ಏಕದಿನದಲ್ಲಿ ಅವರ 44ನೇ ಶತಕವಾಗಿದೆ.
ಶ್ರೇಯಸ್ ಅಯ್ಯರ್ 3, ರಾಹುಲ್ 8, ಅಕ್ಪರ್ ಪಟೇಲ್ 20 ,ವಾಷಿಂಗ್ಟನ್ ಸುಂದರ್ 37, ಶಾರ್ದೂಲ್ ಠಾಕೂರ್ 3 ಮತ್ತು ಕುಲದೀಪ್ ಯಾದವ್ ಔಟಾಗದೆ 3 ರನ್ ಗಳಿಸಿದರು.
ಭಾರಿ ಗುರಿ ಬೆನ್ನಟ್ಟಿದ ಬಾಂಗ್ಲಾ ದೇಶ 34 ಓವರ್ ಗಳಲ್ಲೇ 182 ರನ್ ಗಳಿಗೆ ಆಲೌಟಾಗುವ ಮೂಲಕ 227 ದಾಖಲೆಯ ಅಂತರದ ಸೋಲು ಅನುಭವಿಸಿತು. ಪುರುಷರ ಏಕದಿನ ಪಂದ್ಯದಲ್ಲಿ ಭಾರತ ಮೂರನೇ ಅತಿ ದೊಡ್ಡ ಅಂತರದ ಗೆಲುವನ್ನು ದಾಖಲಿಸಿದೆ.
ನಾಯಕ ಲಿಟ್ಟನ್ ದಾಸ್ 29 , ಯಾಸಿರ್ ಅಲಿ 25, ಶಕೀಬ್ ಅಲ್ ಹಸನ್ 43,ಮಹಮುದುಲ್ಲಾ20, ತಸ್ಕಿನ್ ಅಹ್ಮದ್ 17 ಮತ್ತು ಮುಸ್ತಾಫಿಜುರ್ ರೆಹಮಾನ್ 13 ರನ್ ಗಳಿಸಿದರು. ಉಳಿದ ಆಟಗಾರರು ಒಂದಂಕಿ ದಾಟಲಿಲ್ಲ. ಭಾರತದ ಪರ ಬೌಲಿಂಗ್ ನಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದು ಮಿಂಚಿದರು. ಅಕ್ಪರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರೆ, ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ