![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಹಾಕಿ ಸರಣಿ: ಭಾರತಕ್ಕೆ 1-4 ಸೋಲು
Team Udayavani, Dec 4, 2022, 8:22 PM IST
![ಹಾಕಿ ಸರಣಿ: ಭಾರತಕ್ಕೆ 1-4 ಸೋಲು](https://www.udayavani.com/wp-content/uploads/2022/12/TDY-7-2-620x372.jpg)
ಅಡಿಲೇಡ್: ನಾಯಕ ಹರ್ಮನ್ಪ್ರೀತ್ ಸಿಂಗ್ ಅವಳಿ ಗೋಲು ದಾಖಲಿಸಿದರೂ ಭಾರತ ತಂಡವು ಭಾನುವಾರ ನಡೆದ ಹಾಕಿ ಸರಣಿಯ ಐದನೇ ಪಂದ್ಯದಲ್ಲಿ 4-5 ಗೋಲುಗಳಿಂದ ಸೋಲನ್ನು ಕಂಡಿತು. ಈ ಮೂಲಕ ವಿಶ್ವದ ನಂಬರ್ ವನ್ ತಂಡದೆದುರು ನಡೆದ ಐದು ಪಂದ್ಯಗಳ ಹಾಕಿ ಸರಣಿಯನ್ನು ಭಾರತ 1-4 ಅಂತರದಿಂದ ಕಳೆದುಕೊಂಡಿತು.
ಟಾಮ್ ವಿಖಮ್ ಎರಡನೇ ಮತ್ತು 17ನೇ ನಿಮಿಷದಲ್ಲಿ ಗೋಲು ಹೊಡೆದಿದ್ದರೆ ಅರನ್ ಜಲೆವಿಸ್ಕಿ (30ನೇ), ಜಾಕಬ್ ಆ್ಯಂಡರ್ಸನ್ (40ನೇ) ಮತ್ತು ಜ್ಯಾಕ್ ವೆಟನ್ 54ನೇ ನಿಮಿಷದಲ್ಲಿ ಗೋಲು ಹೊಡೆದಿದ್ದರು. ಭಾರತದ ಪರ ಹರ್ಮನ್ಪ್ರೀತ್ 24ನೇ ಮತ್ತು 60ನೇ ನಿಮಿಷದಲ್ಲಿ ಗೋಲು ಹೊಡೆದಿದ್ದರೆ ಅಮಿತ್ ರೋಹಿದಾಸ್ 34ನೇ ಮತ್ತು ಸುಖ್ಜೀತ್ ಸಿಂಗ್ 55ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ 4-5 ಮತ್ತು 4-7 ಗೋಲುಗಳಿಂದ ಸೋಲನ್ನು ಕಂಡಿದ್ದರೆ ಮೂರನೇ ಪಂದ್ಯವನ್ನು 4-3 ಅಂತರದಿಂದ ಜಯಿಸಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಭಾರತ ಮತ್ತೆ 1-5ರಿಂದ ಸೋಲನ್ನು ಕಂಡಿತ್ತು. ಐದನೇ ಪಂದ್ಯದಲ್ಲಿ ಸೋತಿದ್ದರೂ ತೀವ್ರ ಪೈಪೋಟಿಯ ಹೋರಾಟ ನೀಡಿತ್ತು.
ಈ ಪಂದ್ಯದಲ್ಲಿ ಆಸ್ಟ್ರೇಲಿಯ ಪ್ರಬಲ ಹೋರಾಟ ನೀಡಿತ್ತು. ಹೆಚ್ಚಿನ ಸಮಯ ಚೆಂಡಿನ ನಿಯಂತ್ರಣ ಸಾಧಿಸಿದ್ದ ಆಸ್ಟ್ರೇಲಿಯ ಎರಡನೇ ನಿಮಿಷದಲ್ಲಿ ಗೋಲು ಖಾತೆ ತೆರೆಯಿತು. ಟಾಮ್ ವಿಖಮ್ ಬಲವಾಗಿ ಹೊಡೆದು ಗೋಲು ಖಾತೆ ತೆರೆದರು. ವಿಖಮ್ ಮತ್ತೆ 17ನೇ ನಿಮಿಷದಲ್ಲಿ ಇನ್ನೊಂದು ಗೋಲು ಹೊಡೆದು ಮುನ್ನಡೆಯನ್ನು 2ಕ್ಕೇರಿಸಿದರು. ಆಬಳಿಕ ಭಾರತೀಯ ಆಟಗಾರರೂ ಆಕ್ರಮಣಕಾರಿ ಆಟಕ್ಕೆ ಮುಂದಾದರು.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.