ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  


Team Udayavani, Oct 24, 2021, 8:48 AM IST

bfnbvcx

ದುಬೈ: ಅರಬ್‌ ನಾಡಿನಲ್ಲಷ್ಟೇ ಅಲ್ಲ, ಕ್ರಿಕೆಟ್‌ ಜಗತ್ತಿನಲ್ಲೇ ಟಿ20 ಕಾವು ಒಮ್ಮೆಲೇ ಏರಿದೆ. ಕ್ರಿಕೆಟ್‌ ಮಾತ್ರವಲ್ಲ, ಕ್ರೀಡಾಲೋಕವೇ ದುಬೈನತ್ತ ಮುಖ ಮಾಡಿ “ಭಾನುವಾರದ ಮಹಾ ಹೋರಾಟದ’ ಕ್ಷಣ ಗಣನೆಯಲ್ಲಿ ತೊಡಗಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆ ಯನ್ನು ಮೀರಿವೆ.

ಎಲ್ಲ ಚಟುವಟಿಕೆಗಳೂ ಸ್ತಬ್ಧಗೊಳ್ಳುವ ಸಮಯವೊಂದು ಸಮೀಪಿ ಸುತ್ತಿದೆ. ಇದಕ್ಕೆಲ್ಲ ಒಂದೇ ಕಾರಣ, ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯ! ಟಿ20 ವಿಶ್ವಕಪ್‌ ಕೂಟದ 2ನೇ ವಿಭಾಗದ ಪಂದ್ಯದಲ್ಲಿ ಭಾನುವಾರ ರಾತ್ರಿ ಭಾರತ- ಪಾಕಿಸ್ತಾನ ಮುಖಾಮುಖೀಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂತ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಉತ್ಸಾಹ ದೊಡ್ಡಮಟ್ಟದಲ್ಲೇ ಇರುತ್ತದೆ.

ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಪಾಕ್‌ ಎದುರಿನ ಎಲ್ಲ ವಿಶ್ವಕಪ್‌ ಸಮರಗಳಲ್ಲೂ ಜಯಭೇರಿ ಮೊಳಗಿಸಿದ್ದು ಭಾರತದ ಗರಿಮೆಗೆ ಸಾಕ್ಷಿ. ಹೀಗಾಗಿ ಭಾನುವಾರವೂ ಭಾರತ ತಂಡದ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಪಾಕಿಸ್ತಾನದ ಮೇಲಿನ ಒತ್ತಡವೂ!

 ಗೆದ್ದರೆ ಕಪ್‌ ಎತ್ತಿದಷ್ಟೇ ಖುಷಿ!: ಐಸಿಸಿ ಕೂಟ ಗಳಲ್ಲಿ ಭಾರತ-ಪಾಕಿಸ್ತಾನಗಳ ನಡುವಿನ ಪಂದ್ಯ ಕ್ಕಿಂತ ಮಿಗಿಲಾದ ಪಂದ್ಯ ಖಂಡಿತ ಇಲ್ಲ. ಇದು ಸೃಷ್ಟಿಸುವ ರೋಚಕತೆಗೆ ಮಿತಿ ಇಲ್ಲ. ಇತ್ತಂಡಗಳೂ ಜಿದ್ದಿಗೆ ಬಿದ್ದು ಆಡುವ ಪಂದ್ಯವಿದು. ಕಪ್‌ ಗೆಲ್ಲ ಬೇಕೆಂದಿಲ್ಲ, ಪಾಕಿಸ್ತಾನವನ್ನು ಸೋಲಿಸಿದರೆ ಸಾಕು… ಕಪ್‌ ಎತ್ತಿದಷ್ಟೇ ಖುಷಿ.

ಗಡಿಯಾಚೆಯೂ ಅಷ್ಟೇ. ಈ ಸಲದ ವಿಶ್ವಕಪ್‌ ವಿಶೇಷವೆಂದರೆ ಭಾರತ-ಪಾಕಿಸ್ತಾನ ಲೀಗ್‌ ಹಂತದ ಮೊದಲ ಪಂದ್ಯದಲ್ಲೇ ಎದುರಾಗಿರುವುದು. ಕೂಟದ 2ನೇ ದಿನವೇ ವೋಲ್ಟೆàಜ್‌ ಮೀಟರ್‌ ಗರಿಷ್ಠ ಮಟ್ಟಕ್ಕೇರ ಲಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಸಶಕ್ತ. ಆದರೆ ಯುಎಇಯಲ್ಲೇ ಆಡಿದ ಐಪಿಎಲ್‌ ಅನುಭವ ಕೊಹ್ಲಿ ಪಡೆಗೊಂದು ವರದಾನ.

ಪಾಕ್‌ ಸವಾಲನ್ನು ಎಂದೂ ಒತ್ತಡವಾಗಿ ತೆಗೆದುಕೊಳ್ಳದೆ, ಬಿಂದಾಸ್‌ ಹಾಗೂ ಜಾಲಿಯಾಗಿ ಆಡುವುದೇ ಭಾರತದ ರಣತಂತ್ರ. ಪಾಕಿಸ್ತಾನದ ಸ್ಥಿತಿ ಇದಕ್ಕೆ ತದ್ದಿರುದ್ಧ. ಅದು ಸದಾ ಒತ್ತಡದಲ್ಲೇ ಮುಳುಗಿರುತ್ತದೆ. ಮತ್ತು ಈ ಒತ್ತಡ ಎಲ್ಲ ದಿಕ್ಕುಗಳಿಂದಲೂ ಮುನ್ನುಗ್ಗಿ ಬರುತ್ತದೆ. ಆದರೆ ಎರಡನೇ ತವರಾಗಿರುವ ಯುಎಇಯಲ್ಲಿ ಟಿ20 ದಾಖಲೆ ಉತ್ತಮ ಮಟ್ಟದಲ್ಲಿರುವುದು ಪಾಕ್‌ ಪಾಲಿಗೊಂದು ಸಮಾಧಾನ.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

1-wwewqe

Lok Sabha ಅಖಾಡಕ್ಕೆ ಲಾಲು ಪ್ರಸಾದ್‌ ಪುತ್ರಿ ಡಾ| ರೋಹಿಣಿ ಹೆಜ್ಜೆ

RBI

Cyber ​​attack: ಭದ್ರತೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

K-Kavitha

ED; ದಿಲ್ಲಿ ಲಿಕ್ಕರ್‌ ಕೇಸ್‌ ಡೀಲ್‌ಗೆ ಕೆಸಿಆರ್‌ ಪುತ್ರಿ ಕವಿತಾ ಸಂಚು

supreem

Himachal Pradesh; 6 ಕೈ ಶಾಸಕರ ಅನರ್ಹತೆ ಆದೇಶಕ್ಕೆ ತಡೆ ಇಲ್ಲ: ಸುಪ್ರೀಂ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.