ಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
Team Udayavani, Feb 24, 2022, 10:34 PM IST
ಲಕ್ನೋ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಭಾರತ ಭರ್ಜರಿಯಾಗಿ ಆರಂಭಿಸಿದೆ. ಗುರುವಾರದ ಮೊದಲ ಮುಖಾಮುಖೀಯನ್ನು 62 ರನ್ನುಗಳ ಭಾರೀ ಅಂತರದಿಂದ ಗೆದ್ದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಎರಡೇ ವಿಕೆಟಿಗೆ 199 ರನ್ ಪೇರಿಸಿದರೆ, ಮೊದಲ ಎಸೆತದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿದ ಶ್ರೀಲಂಕಾ 6ಕ್ಕೆ 137 ರನ್ ಮಾಡಿ ಶರಣಾಯಿತು.
ಇಶಾನ್ ಪವರ್ ಗೇಮ್ :
ಆರಂಭದಲ್ಲಿ ಇಶಾನ್ ಕಿಶನ್, ಕೊನೆಯಲ್ಲಿ ಶ್ರೇಯಸ್ ಅವರ ಸ್ಫೋಟಕ ಬ್ಯಾಟಿಂಗ್ ಭಾರತ ಸರದಿಯ ಹೈಲೈಟ್ ಆಗಿತ್ತು. ಪವರ್ ಪ್ಲೇಯಲ್ಲಿ ಹತ್ತರ ಸರಾಸರಿಯಲ್ಲಿ ರನ್ ಬರತೊಡಗಿತು. ಇಶಾನ್ ಕಿಶನ್ ಅವರಂತೂ ಪವರ್ಫುಲ್ ಬ್ಯಾಟಿಂಗ್ ತೋರ್ಪಡಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಮಂಕಾಗಿದ್ದ ಅವರು ಲಂಕಾ ಬೌಲರ್ಗಳ ಮೇಲೆ ಘಾತಕವಾಗಿ ಎರಗಿದರು. ಬೌಂಡರಿ-ಸಿಕ್ಸರ್ಗಳ ಸುರಿಮಳೆಯಾಗತೊಡಗಿತು. 6 ಓವರ್ಗಳಲ್ಲಿ 58 ರನ್ ಹರಿದು ಬಂತು. ಇದರಲ್ಲಿ ಇಶಾನ್ ಪಾಲೇ 39 ರನ್.
ಅರ್ಧ ಹಾದಿ ಮುಗಿಯುವಾಗ ಭಾರತದ ಮೊತ್ತ 98ಕ್ಕೆ ಏರಿತ್ತು. ಶ್ರೀಲಂಕಾ ಬ್ರೇಕ್ತೂÅ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಭಾರತವನ್ನು ಬ್ಯಾಟಿಂಗಿಗೆ ಇಳಿಸಿದ್ದಕ್ಕೆ ಪರಿತಪಿಸತೊಡಗಿತು. ಅವರ ಎಲ್ಲ ಬೌಲರ್ಗಳೂ ಚೆನ್ನಾಗಿ ದಂಡಿಸಿಕೊಂಡರು. ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು.
ಈ ನಡುವೆ 30 ಎಸೆತಗಳಲ್ಲಿ ಇಶಾನ್ ಕಿಶನ್ ಅವರ 2ನೇ ಅರ್ಧ ಶತಕ ಪೂರ್ತಿಗೊಂಡಿತು. 10.3 ಓವರ್ಗಳಲ್ಲಿ ಮೊದಲ ವಿಕೆಟಿಗೆ 100 ರನ್ ಹರಿದು ಬಂತು. ಕೊನೆಗೂ 12ನೇ ಓವರ್ನಲ್ಲಿ ಶ್ರೀಲಂಕಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಯಿತು. 32 ಎಸೆತಗಳಿಂದ 44 ರನ್ (2 ಫೋರ್, 1 ಸಿಕ್ಸರ್) ಮಾಡಿದ ರೋಹಿತ್ ಅವರನ್ನು ಲಹಿರು ಕುಮಾರ ಬೌಲ್ಡ್ ಮಾಡಿದರು. ಭಾರತ ಆಗ 111 ರನ್ ಪೇರಿಸಿತ್ತು.
ಶತಕದ ಹಾದಿಯಲ್ಲಿದ್ದ ಇಶಾನ್ ಕಿಶನ್ 89ರ ಮೊತ್ತದಲ್ಲಿ ನಾಯಕ ದಸುನ್ ಶಣಕ ಮೋಡಿಗೆ ಸಿಲುಕಿದರು. 56 ಎಸೆತಗಳ ಈ ಬ್ಯಾಟಿಂಗ್ ಆರ್ಭಟದ ವೇಳೆ 10 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಯಿತು.
15 ಓವರ್ ಅಂತ್ಯಕ್ಕೆ ಭಾರತದ ಮೊತ್ತ 130ಕ್ಕೆ ಏರಿತ್ತು. ಇಶಾನ್ ನಿರ್ಗಮಿಸುವಾಗ 17 ಓವರ್ ಪೂರ್ತಿಗೊಂಡಿತ್ತು. ಅಂತಿಮ 3 ಓವರ್ಗಳಲ್ಲಿ ಶ್ರೇಯಸ್ ಅಯ್ಯರ್-ರವೀಂದ್ರ ಜಡೇಜ ಜತೆಗೂಡಿದರು. ರನ್ ಪ್ರವಾಹ ಮುಂದುವರಿಯಿತು. ಅಯ್ಯರ್ ಅತ್ಯಂತ ಆಕ್ರಮಣಕಾರಿ ಮೂಡ್ನಲ್ಲಿದ್ದರು. 28 ಎಸೆತಗಳಿಂದ ಅಜೇಯ 57 ರನ್ ಬಾರಿಸಿ ಅಬ್ಬರಿಸಿದರು. ಸಿಡಿಸಿದ್ದು 5 ಬೌಂಡರಿ, 2 ಸಿಕ್ಸರ್. ಅಯ್ಯರ್-ಜಡೇಜ 18 ಎಸೆತಗಳಿಂದ 44 ರನ್ ಸೂರೆಗೈದರು. ಕೊನೆಯ 5 ಓವರ್ಗಳಲ್ಲಿ 69 ರನ್ ಹರಿದು ಬಂತು.
ಲಂಕಾ ಪರ ಚರಿತ ಅಸಲಂಕ ಔಟಾಗದೆ 53 ರನ್ ಹೊಡೆದರು. ಭುವನೇಶ್ವರ್ ಮತ್ತು ವೆಂಕಟೇಶ್ ಅಯ್ಯರ್ ತಲಾ 2 ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?