ಗಾಲೆ: ಭಾರತಕ್ಕೆ ಬೃಹತ್‌ ಗೆಲುವು


Team Udayavani, Jul 30, 2017, 6:50 AM IST

AP7_29_2017_000032B.jpg

ಗಾಲೆ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತ ತಂಡವು ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಲಂಕಾ ತಂಡವನ್ನು 304 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.

ಈ ಗೆಲುವಿನಿಂದ ಭಾರತ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಕೊಲಂಬೋದಲ್ಲಿ ಆ. 3ರಿಂದ 7ರ ವರೆಗೆ ನಡೆಯಲಿದೆ.

ಗೆಲ್ಲಲು 550 ರನ್‌ ಗಳಿಸುವ ಅಸಾಧ್ಯ ಗುರಿ ಪಡೆದ ಶ್ರೀಲಂಕಾ ತಂಡವು ರವೀಂದ್ರ ಜಡೇಜ ಮತ್ತು ಆರ್‌. ಅಶ್ವಿ‌ನ್‌ ದಾಳಿಗೆ ನೆಲಕಚ್ಚಿ ನಾಲ್ಕನೇ ದಿನವೇ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 245 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ  ಮೂಲಕ ಎರಡು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಲಂಕಾ ವಿರುದ್ದ ನಡೆದ ಟೆಸ್ಟ್‌ನಲ್ಲಿನ ಆಘಾತಕಾರಿ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದರೂ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಂಡು 63 ರನ್ನುಗಳಿಂದ ಸೋತಿತ್ತು.

ಈ ಮೊದಲು ನಾಯಕ ವಿರಾಟ್‌ ಕೊಹ್ಲಿ ಅವರ 17ನೇ ಟೆಸ್ಟ್‌ ಶತಕದ ನೆರವಿನಿಂದ ಭಾರತ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟಿಗೆ 240 ರನ್‌ ಪೇರಿಸಿ ಡಿಕ್ಲೇರ್‌ ಮಾಡಿಕೊಂಡಿತಲ್ಲದೇ ಲಂಕಾ ಗೆಲುವಿಗೆ 550 ರನ್‌ ಗಳಿಸುವ ಗುರಿ ನಿಗದಿಪಡಿಸಿತ್ತು.

ಇದು ರನ್‌ ಅಂತರದಲ್ಲಿ ವಿದೇಶದಲ್ಲಿ ಭಾರತದ ಬಲುದೊಡ್ಡ ಗೆಲುವು ಆಗಿದೆ. 1986ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 279 ರನ್ನುಗಳಿಂದ ಗೆದ್ದಿರುವುದು ಈ ಹಿಂದಿನ ದೊಡ್ಡ ಗೆಲುವು ಆಗಿತ್ತು. ಶ್ರೀಲಂಕಾಕ್ಕೆ ಕೂಡ ಇದು ರನ್‌ ಅಂತರದಲ್ಲಿ ಬಲುದೊಡ್ಡ ಸೋಲು ಆಗಿದೆ. 1994ರಲ್ಲಿ ಪಾಕಿಸ್ಥಾನ ವಿರುದ್ಧ 3-1 ರನ್ನಿನಿಂದ ಸೋತಿರುವುದು ಈ ಹಿಂದಿನ ದೊಡ್ಡ ಸೋಲು ಆಗಿತ್ತು.

ಗುಣರತ್ನೆ ಹೋರಾಟ
ಗೆಲ್ಲಲು ಕಠಿನ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಟಗಾರ ದಿಮುತ್‌ ಗುಣರತ್ನೆ ಆಧಾರವಾಗಿದ್ದರು. ಅವರ ಹೋರಾಟದ 97 ರನ್ನಿನಿಂದಾಗಿ ಶ್ರೀಲಂಕಾ ಬೇಗನೇ ಕುಸಿಯುವುದು ತಪ್ಪಿತು. ಕುಸಲ್‌ ಮೆಂಡಿಸ್‌ ಮತ್ತು ನಿರೋಶಾನ್‌ ಡಿಕ್ವೆಲ್ಲ ಅವರ ಜತೆ ಎರಡು ಉತ್ತಮ ಜತೆಯಾಟದಲ್ಲಿ ಪಾಲ್ಗೊಂಡ ಗುಣರತ್ನೆ ಎರಡು ಅವಧಿಯ ಆಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಇದರಿಂದಾಗಿ ಶ್ರೀಲಂಕಾ ಟೀ ವಿರಾಮದ ವೇಳೆಗೆ 4 ವಿಕೆಟಗೆ 192 ರನ್‌ ತಲುಪಿತ್ತು.

ಟೀ ಬಳಿಕ ಗುಣರತ್ನೆ ಅವರನ್ನು ಅಶ್ವಿ‌ನ್‌ ಉರುಳಿಸಿದ ಬಳಿಕ ಶ್ರೀಲಂಕಾ ಹಠಾತ್‌ ಕುಸಿಯಿತಲ್ಲದೇ 245 ರನ್ನಿಗೆ ಆಲೌಟಾಯಿತು. ಮೆಂಡಿಸ್‌ ಜತೆ 3ನೇ ವಿಕೆಟಿಗೆ 79 ಮತ್ತು ಡಿಕ್ವೆಲ್ಲ ಜತೆ 5ನೇ ವಿಕೆಟಿಗೆ 101 ರನ್ನುಗಳ ಜತೆಯಾಟ ನಡೆಸಿದ್ದ ಗುಣರತ್ನೆ ಒಟ್ಟಾರೆ 208 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ 97 ರನ್‌ ಗಳಿಸಿ ಔಟಾದರು. ಕೇವಲ 3 ರನ್ನಿನಿಂದ ಶತಕ ದಾಖಲಿಸಲು ಅವರು ವಿಫ‌ಲರಾದರು. ಕುಸಲ್‌ ಮೆಂಡಿಸ್‌ 36 ಮತ್ತು ಡಿಕ್ವೆಲ್ಲ 67 ರನ್‌ ಹೊಡೆದರು.
ಬಿಗು ದಾಳಿ ಸಂಘಟಿಸಿದ ಆರ್‌. ಅಶ್ವಿ‌ನ್‌ 65 ರನ್ನಿಗೆ 3 ಮತ್ತು ರವೀಂದ್ರ ಜಡೇಜ 71 ರನ್ನಿಗೆ 3 ವಿಕೆಟ್‌ ಉರುಳಿಸಿದರು.

ಕೊಹ್ಲಿ 17ನೇ ಶತಕ
ಈ ಮೊದಲು ನಾಯಕ ಕೊಹ್ಲಿ ಟೆಸ್ಟ್‌ನಲ್ಲಿ 17ನೇ ಶತಕ ಬಾರಿಸಿದ ಬಳಿಕ ಭಾರತ ತನ್ನ ದ್ವಿತೀಯ ಇನ್ನಿಂಗÕನ್ನು ಡಿಕ್ಲೇರ್‌ ಮಾಡಿಕೊಂಡಿತು. ಮೂರು ವಿಕೆಟಗೆ 183 ರನ್ನಿನಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಶೀಘ್ರ 51 ರನ್‌ ಪೇರಿಸಿ 3 ವಿಕೆಟಿಗೆ 240 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತಲ್ಲದೇ ಶ್ರೀಲಂಕಾ ಗೆಲುವಿಗೆ 550 ರನ್ನುಗಳ ಕಠಿನ ಗುರಿಯನ್ನು ನಿಗದಿಪಡಿಸಿತು.

ದಿನದಾಟ ಆರಂಭಿಸಿದ ಕೊಹ್ಲಿ ಮತ್ತು ರಹಾನೆ ಶೀಘ್ರ ರನ್‌ ಪೇರಿಸಲು ತೊಡಗಿದರು. ಲಂಕೆಗೆ ಗೆಲುವಿನ ಗುರಿ ನೀಡುವ ಮೊದಲು ಕೊಹ್ಲಿ ಶತಕ ದಾಖಲಿಸಲು ಭಾರತ ಕಾಯುತ್ತಿತ್ತು. ಹಾಗಾಗಿ ಹೆಚ್ಚಿನ ಸಮಯ ವ್ಯರ್ಥ ಮಾಡದ ಕೊಹ್ಲಿ ದಿನದ ಆರನೇ ಓವರಿನಲ್ಲಿ ಶತಕ ಪೂರ್ತಿಗೊಳಿಸಿ ಸಂಭ್ರಮಿಸಿದರು. 136 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 103 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಕೊಹ್ಲಿ ತನ್ನ 58ನೇ ಟೆಸ್ಟ್‌ನಲ್ಲಿ 17 ಶತಕ ಸಿಡಿಸಿದ ಸಾಧನೆಗೈದರಲ್ಲದೇ ಮಾಜಿ ನಾಯಕ ದಿಲೀಪ್‌ ವೆಂಗ್‌ಸರ್ಕಾರ್‌ (115 ಟೆಸ್ಟ್‌) ಮತ್ತು ವಿವಿಎಸ್‌ ಲಕ್ಷ್ಮಣ್‌ (134 ಟೆಸ್ಟ್‌) ಅವರ ಸಾಧನೆ ಸಮಬಲಗೊಳಿಸಿದರು. ವೆಂಗ್‌ಸರ್ಕಾರ್‌ ಮತ್ತು ಲಕ್ಷ್ಮಣ್‌ ಕೂಡ 17 ಶತಕ ಸಿಡಿಸಿದ್ದಾರೆ. ಆದರೆ ಅವರಿಬ್ಬರು ನೂರಕ್ಕಿಂತ ಹೆಚಿjನ ಟೆಸ್ಟ್‌ ಆಡಿ ಈ ಸಾಧನೆ ಮಾಡಿದ್ದರು.
ಕೊಹ್ಲಿ ಮತ್ತು ರಹಾನೆ ನಾಲ್ಕನೇ ವಿಕೆಟಿಗೆ 51 ರನ್‌ ಪೇರಿಸುವ ಮೂಲಕ ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 2 ಸಾವಿರ ಪ್ಲಸ್‌ ಪೇರಿಸಿದ 14ನೇ ಜೋಡಿ ಎನಿಸಿಕೊಂಡಿದ್ದಾರೆ. ಕೊಹ್ಲಿ ವಿದೇಶದಲ್ಲಿ ಒಂದು ಸಾವಿರ ಟೆಸ್ಟ್‌ ರನ್‌ ಗಳಿಸಿದ ಅತೀ ವೇಗದ ನಾಯಕರಾಗಿದ್ದಾರೆ. ಅವರು 17 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ ಸಚಿನ್‌ ತೆಂಡುಲ್ಕರ್‌ ಈ ಹಿಂದೆ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಆಡಿದ್ದರು.

ಸ್ಕೋರುಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌:    600
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌    291

ಭಾರತ ದ್ವಿತೀಯ ಇನ್ನಿಂಗ್ಸ್‌
(ಮೂರನೇ ದಿನ 3 ವಿಕೆಟಿಗೆ 189)
ವಿರಾಟ್‌ ಕೊಹ್ಲಿ ಔಟಾಗದೆ    103
ಅಜಿಂಕ್ಯ ರಹಾನೆ    ಔಟಾಗದೆ    23
ಇತರ:        4
ಒಟ್ಟು (ಮೂರು ವಿಕೆಟಿಗೆ ಡಿಕ್ಲೇರ್‌)    240
ವಿಕೆಟ್‌ ಪತನ: 1-19, 2-56, 3-189
ಬೌಲಿಂಗ್‌:
ನುವಾನ್‌ ಪ್ರದೀಪ್‌        12-2-63-0
ದಿಲುÅವಾನ್‌ ಪೆರೆರ        15-0-67-1
ಲಹಿರು ಕುಮಾರ        12-1-59-1
ರಂಗನ ಹೆರಾತ್‌        9-0-34-0
ದನುಷ್ಕ ಗುಣತಿಲಕ        5-0-16-1

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌
ದಿಮುತ್‌ ಕರುಣರತ್ನೆ    ಬಿ   ಅಶ್ವಿ‌ನ್‌    97
ಉಪುಲ್‌ ತರಂಗ    ಬಿ ಮೊಹಮ್ಮದ್‌ ಶಮಿ    10
ದನುಷ್ಕ ಗುಣತಿಲಕ    ಸಿ ಪೂಜಾರ ಬಿ ಯಾದವ್‌    2
ಕುಶಲ್‌ ಮೆಂಡಿಸ್‌    ಸಿ ಸಾಹ ಬಿ ಜಡೇಜ    36
ಏ. ಮ್ಯಾಥ್ಯೂಸ್‌    ಸಿ ಪಾಂಡ್ಯ ಬಿ ಜಡೇಜ    2
ನಿರೋಶಾನ್‌ ಡಿಕ್ವೆಲ್ಲ    ಸಿ ಸಾಹ ಬಿ ಅಶ್ವಿ‌ನ್‌    67
ದಿಲುÅವಾನ್‌ ಪೆರೆರ    ಔಟಾಗದೆ    21
ನುವಾನ್‌ ಪ್ರದೀಪ್‌    ಸಿ ಕೊಹ್ಲಿ ಬಿ ಅಶ್ವಿ‌ನ್‌    0
ಲಹಿರು ಕುಮಾರ    ಸಿ ಶಮಿ ಬಿ ಜಡೇಜ    0
ಇತರ;        10
ಒಟ್ಟು (ಆಲೌಟ್‌)    245
ವಿಕೆಟ್‌ ಪತನ: 1-22, 2-29, 3-108, 4-116, 5-217, 6-240, 7-240, 8-245
ಬೌಲಿಂಗ್‌:
ಮೊಹಮ್ಮದ್‌ ಶಮಿ        9-0-43-1
ಉಮೇಶ್‌ ಯಾದವ್‌        9-0-42-1
ರವೀಂದ್ರ ಜಡೇಜ        24.5-4-71-3
ಆರ್‌. ಅಶ್ವಿ‌ನ್‌        27-4-66-3
ಹಾರ್ದಿಕ್‌ ಪಾಂಡ್ಯ        7-0-21-0

ಪಂದ್ಯಶ್ರೇಷ್ಠ: ಶಿಖರ್‌ ಧವನ್‌    

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.