ಈಜು, ಕುಸ್ತಿಯಲ್ಲಿ ಭಾರತೀಯರ ಪ್ರಾಬಲ್ಯ

Swimmers, wrestlers shine on Day 6 as India wins 49 medals to pull ahead in overall tally

Team Udayavani, Dec 8, 2019, 12:41 AM IST

asian-games

ಕಾಠ್ಮಂಡು: ಈಜು ಮತ್ತು ಕುಸ್ತಿಪಟುಗಳ ಅಮೋಘ ನಿರ್ವಹಣೆಯಿಂದ ಭಾರತವು ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲುತ್ತಿದೆ. ಆರನೇ ದಿನ ಭಾರತೀಯ ಆಟಗಾರರು 29 ಚಿನ್ನ ಸಹಿತ 49 ಪದಕ ಗೆದ್ದುಕೊಂಡಿದ್ದಾರೆ.

ಈಜು ಮತ್ತು ಕುಸ್ತಿ ಪಟುಗಳ ಗಮನಾರ್ಹ ನಿರ್ವಹಣೆ ಯಿಂದಾಗಿ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾ ನಕ್ಕೇರಿದೆ. 110 ಚಿನ್ನ, 69 ಬೆಳ್ಳಿ ಸಹಿತ ಒಟ್ಟು 214 ಪದಕ ಗೆದ್ದಿರುವ ಭಾರತ ಆತಿಥೇಯ ನೇಪಾಲವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ. 43 ಚಿನ್ನ ಸಹಿತ 142 ಪದಕ ಗೆದ್ದಿರುವ ನೇಪಾಲ ದ್ವಿತೀಯ ಮತ್ತು ಲಂಕಾ (170 ಪದಕ) 3ನೇ ಸ್ಥಾನದಲ್ಲಿದೆ. ಇನ್ನು ಮೂರು ದಿನದ ಸ್ಪರ್ಧೆಗಳು ಬಾಕಿ ಉಳಿದಿವೆೆ.

ಈಜಿನಲ್ಲಿ ಪ್ರಾಬಲ್ಯ
ಈಜುಕೊಳದಲ್ಲಿ ಭಾರತೀಯ ಈಜುತಾರೆಯರು ಪ್ರಾಬಲ್ಯ ಮೆರೆದಿದ್ದಾರೆ. 7 ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಶ್ರೀಹರಿ ನಟರಾಜ್‌, ರಿಚಾ ಮಿಶ್ರಾ, ಶಿವಾ, ಮಾನ ಪಟೇಲ್‌, ಚಹತ್‌ ಅರೋರ, ಲಿಕಿತ್‌, ರುಜುತಾ ಭಟ್‌ ಚಿನ್ನ ಗೆದ್ದ ಈಜುಪಟುಗಳಾಗಿದ್ದಾರೆ. ಜಯವೀಣ ಮತ್ತು ರಿಧಿಮಾ ವೀರೇಂದ್ರ ಬೆಳ್ಳಿ ಜಯಿಸಿದ್ದಾರೆ. ಈಜು ಸ್ಪರ್ಧೆ ಯ ಎರಡು ದಿನ ಭಾರತ ಒಟ್ಟು 30 ಪದಕ ಜಯಿಸಿದೆ.

ಕುಸ್ತಿಪಟುಗಳು ಕೂಡ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಸತ್ಯವರ್ತ್‌ ಕದಿಯನ್‌, ಸುಮಿತ್‌ ಮಲಿಕ್‌, ಗುರ್ಶನ್‌ಪ್ರೀತ್‌ ಕೌರ್‌ ಮತ್ತು ಸರಿತಾ ಮೋರ್‌ ತಮ್ಮ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತ ಕದಿಯನ್‌ ತನ್ನ ಎದುರಾಳಿ ಪಾಕಿಸ್ಥಾನದ ತಬಿಯರ್‌ ಖಾನ್‌ ಅವರನ್ನು ಸುಲಭವಾಗಿ ನೆಲಕ್ಕುರುಳಿಸಿ ಚಿನ್ನ ಪಡೆದರು.
ಶೂಟಿಂಗ್‌ನಲ್ಲೂ ಭಾರತೀಯ ಶೂಟರ್‌ಗಳು ಗಮನಾರ್ಹ ನಿರ್ವಹಣೆ ನೀಡಿ ಮೂರು ಚಿನ್ನ ಗೆದ್ದರು. ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಎರಡು ಚಿನ್ನ ಬಂದಿದೆ.

ಮಾಲ್ದೀವ್ಸ್‌ 8 ರನ್ನಿಗೆ ಆಲೌಟ್‌
ಕಾಠ್ಮಂಡು: ಸೌತ್‌ ಏಶ್ಯನ್‌ ಗೇಮ್ಸ್‌ನ ವನಿತಾ ಕ್ರಿಕೆಟ್‌ ಪಂದ್ಯದಲ್ಲಿ ಮಾಲ್ದೀವ್ಸ್‌ ತಂಡ ಕೇವಲ 8 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ನೇಪಾಲ ಕೇವಲ 7 ಎಸೆತಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಜಯಭೇರಿ ಬಾರಿಸಿತು. ಇದು ಟಿ20 ಇತಿಹಾಸದ ನಾಲ್ಕನೇ ಅತೀವೇಗದ ಚೇಸ್‌ ಗೆಲುವು ಆಗಿದೆ.

ಮಾಲ್ದೀವ್ಸ್‌ ತಂಡದ 9 ಮಂದಿ ಆಟಗಾರ್ತಿಯರು ಶೂನ್ಯಕ್ಕೆ ಔಟಾಗಿದ್ದರು. ಆರಂಭಿಕ ಆಟಗಾರ್ತಿ ಐಮಾ ಅಶಥ್‌ 12 ಎಸೆತ ಎದುರಿಸಿ 1 ರನ್‌ ಗಳಿಸಿದರು. ಉಳಿದ ಏಳು ರನ್‌ ಇತರ ರನ್‌ ಮೂಲಕ ಬಂದಿತ್ತು. ಹೀಗಾಗಿ ಮಾಲ್ದೀವ್ಸ್‌ 8 ರನ್ನಿಗೆ ಆಲೌಟಾಯಿತು.

ಟಾಪ್ ನ್ಯೂಸ್

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

shirwa

ಕುರ್ಕಾಲು:ಯುವತಿ ನಾಪತ್ತೆ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

cm-bommai

ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ

ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್

ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

hd-kumarswamy

26ರಂದು ಪಂಚರತ್ನ ಸಮಾರೋಪ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ

ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ

ಏಕದಿನ ಸರಣಿ ಗೆದ್ದರಷ್ಟೇ ಭಾರತ ನಂ. 1

ಏಕದಿನ ಸರಣಿ ಗೆದ್ದರಷ್ಟೇ ಭಾರತ ನಂ. 1

ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್‌ ಹ್ಯಾರಿಸ್‌, ಮೆಕ್‌ಗ್ರಾತ್‌ ಗ್ರೇಟ್‌ ಬ್ಯಾಟಿಂಗ್‌

ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್‌ ಹ್ಯಾರಿಸ್‌, ಮೆಕ್‌ಗ್ರಾತ್‌ ಗ್ರೇಟ್‌ ಬ್ಯಾಟಿಂಗ್‌

ವನಿತಾ ವಿಶ್ವ ಬಾಕ್ಸಿಂಗ್‌: ಕ್ವಾರ್ಟರ್‌ ಫೈನಲ್‌ಗೆ ಲವ್ಲಿನಾ ಬೊರ್ಗೊಹೇನ್‌

ವನಿತಾ ವಿಶ್ವ ಬಾಕ್ಸಿಂಗ್‌: ಕ್ವಾರ್ಟರ್‌ ಫೈನಲ್‌ಗೆ ಲವ್ಲಿನಾ ಬೊರ್ಗೊಹೇನ್‌

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು

ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು

shirwa

ಕುರ್ಕಾಲು:ಯುವತಿ ನಾಪತ್ತೆ

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತಸ್ವೀಪ್‌ ಚಿತ್ತ!

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್‌ ಚಿತ್ತ!

ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.