World Wrestling Championships: ಭಾರತೀಯ ಕುಸ್ತಿಪಟುಗಳಿಗೆ ನಿರಾಶೆ


Team Udayavani, Sep 18, 2023, 11:05 PM IST

World Wrestling Championships: ಭಾರತೀಯ ಕುಸ್ತಿಪಟುಗಳಿಗೆ ನಿರಾಶೆ

ಬೆಲ್‌ಗ್ರೇಡ್: ಭಾರತೀಯ ಪುರುಷರ ಫ್ರೀಸ್ಟೈಲ್‌ ಕುಸ್ತಿಪಟುಗಳು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ನಿರ್ವಹಣೆ ನೀಡಿ ನಿರಾಶೆಗೊಳಿಸಿದ್ದಾರೆ. ಪದಕ ಗೆಲ್ಲಲು ವಿಫ‌ಲರಾದರಲ್ಲದೇ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲೂ ಅಸಮರ್ಥರಾದರು.

ಇದಕ್ಕಿಂತಲೂ ನಿರಾಶೆಯ ಸಂಗತಿ ಯೆಂದರೆ ಕುಸ್ತಿಪಟುಗಳು ಅಷ್ಟೊಂದು ಬಲಿಷ್ಠವಲ್ಲದ ರಾಷ್ಟ್ರಗಳ ಕುಸ್ತಿಪಟುಗ ಳೆದುರು ಸೋತಿರುವುದು ಆಗಿದೆ. ಇದರಿಂದ ಕುಸ್ತಿಪಟುಗಳ ಫಿಟ್‌ನೆಸ್‌ ಸಾಮರ್ಥ್ಯದ ಬಗ್ಗೆಯೆ ಸಂಶಯ ಕಾಣುತ್ತಿದೆ.
79 ಕೆ.ಜಿ. ವಿಭಾಗದಲ್ಲಿ ಸಚಿನ್‌ ಮೋರ್‌ ಅವರು ಉತ್ತರ ಮಸೆಡೋನಿ ಯದ ಅಹ್ಮದ್‌ ಮಗೊಮೆಡೋವ್‌ ಅವರ ವಿರುದ್ಧ ರೆಪಚೇಜ್‌ ಸುತ್ತಿನಲ್ಲಿ ಸೋತರು. 65 ಕೆ.ಜಿ. ವಿಭಾಗದಲ್ಲಿ ಅನುಜ್‌ ಕುಮಾರ್‌ ಅರ್ಹತಾ ಸುತ್ತಿನಲ್ಲಿಯೇ ಮೆಕ್ಸಿಕೋದ ಆಸ್ಟಿನ್‌ ಕ್ಲೀ ಗೊಮೆಜ್‌ ವಿರುದ್ಧ 7-8 ಅಂತರದಿಂದ ಸೋತು ಹೊರಬಿದ್ದರು.

ಭಾರತದ ಪದಕದ ಭರವಸೆ ಅಮಾನ್‌ ಸೆಹ್ರಾವತ್‌ 57 ಕೆ.ಜಿ. ವಿಭಾ ಗದ ಕ್ವಾರ್ಟರ್‌ಫೈನಲ್‌ ಹಂತದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಅಲ್ಬನಿಯಾದ ಝೆಲಿಮ್‌ಖಾನ್‌ ಅಬಕರೋವ್‌ ಅವರ ವಿರುದ್ಧ ಸೋತು ಆಘಾತಕ್ಕೆ ಒಳ ಗಾದರು. ಆಬಳಿಕ ರಷ್ಯದ ಕುಸ್ತಿಪಟು ಫೈನಲಿಗೇರು ವಿಫ‌ಲರಾದ ಕಾರಣ ಭಾರತೀಯ ಕುಸ್ತಿಪಟುವಿಗೆ ರೆಪಚೇಜ್‌ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ.

70 ಕೆ.ಜಿ.ಯಲ್ಲಿ ಅಭಿಮನ್ಯು ಅರ್ಮೇನಿಯದ ಅರ್ಮಾಭ್‌ ಆ್ಯಂಡ್ರೆ ಸ್ಯಾನ್‌ ಅವರ ವಿರುದ್ಧ ತಾಂತ್ರಿಕ ಹಂತದಲ್ಲಿ ಸೋತು ಹೊರಬಿದ್ದರು. ಅವರ ಜತೆ ಆಕಾಶ್‌ ದಹಿಯ, ನವೀನ್‌, ಸಂದೀಪ್‌ ಸಿಂಗ್‌ ಮಾನ್‌, ಪೃಥ್ವಿರಾಜ್‌, ಸಾಹಿಲ್‌ ಮತ್ತು ಸುಮಿತ್‌ ಕೂಡ ಸ್ಫರ್ಧೆಯ ವಿವಿಧ ಹಂತಗಳಲ್ಲಿ ಸೋತು ಹೊರಬಿದ್ದರು.

ಭಾರತೀಯ ಕುಸ್ತಿಪಟುಗಳು ತಟಸ್ಥ ಆ್ಯತ್ಲೀಟ್‌ಗಳಾಗಿ ಈ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು. ಕುಸ್ತಿಯ ವಿಶ್ವ ಆಡಳಿತ ಮಂಡಳಿ ಭಾರತೀಯ ಫ‌ುಟ್‌ಬಾಲ್‌ ಫೆಡರೇಶನ್‌ ಅನ್ನು ನಿಷೇಧಿಸಿದ್ದರಿಂದ ಕುಸ್ತಿಪಟುಗಳು ಭಾರತೀಯ ಧ್ವಜದಡಿ ಸ್ಪರ್ಧಿಸಿಲ್ಲ.

ತಂಡದ ಕೆಲವು ಕುಸ್ತಿಪಟುಗಳು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಸಂಶಯ ಇದೀಗ ಕಾಡುತ್ತಿದೆ. ಸ್ಪರ್ಧೆಗೆ ಆಯ್ಕೆಯಾದ ಕುಸ್ತಿಪಟುಗಳ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಭಾರತೀಯ ಕುಸ್ತಿ ಫೆಡರೇಶನ್‌ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿತ್ತು ಎಂದು ತಿಳಿದುಬಂದಿದೆ. 65 ಕೆ.ಜಿ. ವಿಭಾಗದ ಕುಸ್ತಿ ಪಟುವೊಬ್ಬರು ಗಾಯಗೊಂಡಿದ್ದರು ಎಂದು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿಎನ್‌ ಪ್ರಸೂದ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.