![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
ಅಂತರ್ ಕಾಲೇಜು ವಾಲಿಬಾಲ್: ಆಳ್ವಾಸ್ ತಂಡಕ್ಕೆ ಪ್ರಶಸ್ತಿ; ಎಸ್ಡಿಎಂ ರನ್ನರ್ ಅಪ್
Team Udayavani, Dec 1, 2023, 12:12 AM IST
![1-sasadasd](https://www.udayavani.com/wp-content/uploads/2023/12/1-sasadasd-620x413.jpg)
ಬೆಳ್ತಂಗಡಿ: ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ಮತ್ತು ಉಜಿರೆಯ ಎಸ್ಡಿಎಂ ಕಾಲೇಜಿನ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜ್ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ತಂಡ ಪ್ರಶಸ್ತಿ ಗೆದ್ದಿದೆ.
ತೀವ್ರ ಪೈಪೋಟಿಯಿಂದ ಸಾಗಿದ ಫೈನಲ್ ಹೋರಾಟದಲ್ಲಿ ಆಳ್ವಾಸ್ ಆತಿಥೇಯ ಎಸ್ಡಿಎಂ ಕಾಲೇಜ್ ತಂಡವನ್ನು ಸೋಲಿಸಿ ಶ್ರೀ ಪಾಟೀಲ್ ಸೌಕೂರ್ಅಂತಯ್ಯ ಶೆಟ್ಟಿ ಸ್ಮಾರಕ ಫಲಕ ಪಡೆಯಿತು. ಎಸ್ಡಿಎಂ ರನ್ನರ್ ಅಪ್ ಸ್ಥಾನ ಪಡೆಯಿತು.
ಈ ಮೊದಲು ನಡೆದ ಸೆಮಿಫೈನಲ್ ಹೋರಾಟದಲ್ಲಿ ಎಸ್ಡಿಎಂ ಕಾಲೇಜ್ ಕಲ್ಯಾಣಪುರದ ಮಿಲಾಗ್ರಿಸ್ ಹಾಗೂ ಆಳ್ವಾಸ್ ತಂಡವು ಕುದ್ರೋಳಿ ಗೋಕರ್ಣನಾಥೇಶ್ವರ ತಂಡವನ್ನು ಸೋಲಿಸಿ ಫೈನಲಿಗೇರಿತ್ತು.
ಆಳ್ವಾಸ್ನ ಸುಶೀಲ್ ಉತ್ತಮ ಸೆಟ್ಟರ್, ಮನು ಬಿಎಲ್ ಉತ್ತಮ ಆಲ್ರೌಂಡರ್, ಉನಾನ್ ಉತ್ತಮ ಅಟೇಕರ್ ಮತ್ತು ಎಸ್ಡಿಎಂನ ಆಶಿಕ್ ಗೌಡ ಉತ್ತಮ ಲಿಬೊÅ ಆಟಗಾರ ಪ್ರಶಸ್ತಿ ಪಡೆದರು. ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿ’ಸೋಜಾ, ಎಸ್ಡಿಎಂ ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಬಾಲಭಾಸ್ಕರ್, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್. ಸತೀಶ್ಚಂದ್ರ ಪ್ರಶಸ್ತಿ ವಿತರಿಸಿದರು. ಪ್ರೊ| ಮಹೇಶ್ ಶೆಟ್ಟಿ, ದೈಹಿಕ ನಿರ್ದೇಶಕರಾದ ರಮೇಶ್ ಮತ್ತು ಶಾರದಾ, ಸಂದೇಶ್ ಪೂಂಜ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.