ಐಪಿಎಲ್‌ ಹರಾಜಿನಲ್ಲಿ ಹೊಸಬರ ಮೇಳ


Team Udayavani, Feb 17, 2017, 3:45 AM IST

IPL-2017.jpg

ಬೆಂಗಳೂರು: ಐಪಿಎಲ್‌ ಹರಾಜಿಗೆ ಇನ್ನುಳಿದಿರುವುದು ಮೂರೇ ದಿನ. ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲಾಗುತ್ತಾನೆ ಎಂಬ ಕ್ರಿಕೆಟ್‌ ಅಭಿಮಾನಿಗಳ ಕೌತುಕ ಈಗಾಗಲೇ ಗರಿಗೆದರಿದೆ.

ಐಪಿಎಲ್‌ ಹರಾಜಿನ ಈ ಸಲದ ವಿಶೇಷವೆಂದರೆ ಪ್ರತಿಭಾನ್ವಿತ ಹೊಸಬರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು. ಜತೆಗೆ ಸ್ಟಾರ್‌ ಆಟಗಾರರೂ ಮೊದಲ ಬಾರಿಗೆ ಐಪಿಎಲ್‌ ಬಾಗಿಲು ಬಡಿಯುತ್ತಿದ್ದಾರೆ. ಇವರಲ್ಲಿ ಇಂಗ್ಲೆಂಡಿನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಪ್ರಮುಖರು. ಇನ್‌ಸ್ಟಂಟ್‌ ಕ್ರಿಕೆಟ್‌ನಲ್ಲಿ 134.03ರಷ್ಟು ಸ್ಟ್ರೈಕ್‌ರೇಟ್‌ ಹೊಂದಿರುವ ಸ್ಟೋಕ್ಸ್‌ ಯಾವ ತಂಡಕ್ಕೂ ಬಹೂಪಯೋಗಿ ಆಗಬಲ್ಲರು. 6-7ನೇ ಕ್ರಮಾಂಕದಲ್ಲಿ ಬಂದು ಉತ್ತಮ ಫಿನಿಶರ್‌ ಪಾತ್ರವನ್ನು ನಿಭಾಯಿಸುವ ಛಾತಿ ಇವರದು. ಸಹಜವಾಗಿಯೇ ಸ್ಟೋಕ್ಸ್‌ಗೆ ಬಲೆ ಬೀಸಲು ಬಹುತೇಕ ಎಲ್ಲ ತಂಡಗಳೂ ಪೈಪೋಟಿಗೆ ಬೀಳುವ ಸಾಧ್ಯತೆ ಇದೆ. ಮುಖ್ಯವಾಗಿ ಕೆಕೆಆರ್‌, ಪುಣೆ, ಮುಂಬಯಿ ಹಾಗೂ ಡೆಲ್ಲಿ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿವೆ.

ಸ್ಟೋಕ್ಸ್‌ ಮೂಲ ಬೆಲೆ 2 ಕೋಟಿ ರೂ.
ರಾಯ್‌, ಮಿಲ್ಸ್‌, ರಬಾಡ…

ಇಂಗ್ಲೆಂಡ್‌ ಆರಂಭಕಾರ, ಟಿ-20 ಸ್ಪೆಷಲಿಸ್ಟ್‌ ಜಾಸನ್‌ ರಾಯ್‌ ಕೂಡ ಬಹಳಷ್ಟು ಫ್ರಾಂಚೈಸಿಗಳ ಕಣ್ಣು ಕುಕ್ಕಿಸಿದ್ದಾರೆ. ಒಂದು ಕೋ.ರೂ. ಮೂಲಬೆಲೆಯನ್ನು ಇವರಿಗೆ ನಿಗದಿಗೊಳಿಸಲಾಗಿದೆ.

ಇಂಗ್ಲೆಂಡಿನ ಶರವೇಗಿ ಟೈಮಲ್‌ ಮಿಲ್ಸ್‌ ಬೆಲೆ 50 ಲಕ್ಷ ರೂ. ಅತ್ಯಧಿಕ ಡಾಟ್‌ಬಾಲ್‌, ಅತೀ ಕಡಿಮೆ ಬೌಂಡರಿ ನೀಡುವ ಹೆಗ್ಗಳಿಕೆ ಮಿಲ್ಸ್‌ ಅವರದು. ಇವರನ್ನು ಪಡೆಯುವ ತಂಡದ ಬೌಲಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿರುವುದರಲ್ಲಿ ಅನುಮಾನವಿಲ್ಲ.

ದಕ್ಷಿಣ ಆಫ್ರಿಕಾದ ಘಾತಕ ವೇಗಿ ಕ್ಯಾಗಿಸೊ ರಬಾಡ ಈ ಐಪಿಎಲ್‌ನ ಸ್ಟಾರ್‌ ಆಕರ್ಷಣೆ ಆಗಬಲ್ಲರು. ಇವರ ಮೂಲಬೆಲೆ ಭರ್ತಿ ಒಂದು ಕೋಟಿ ರೂ.

ನ್ಯೂಜಿಲ್ಯಾಂಡಿನ ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಕೂಡ ಈ ಸಲದ ಐಪಿಎಲ್‌ ರೇಸ್‌ನಲ್ಲಿದ್ದಾರೆ. ಮೂಲಬೆಲೆ 30 ಲಕ್ಷ ರೂ. 136.36ರಷ್ಟು ಸೆಟ್ರೈಕ್‌ರೇಟ್‌ ಹೊಂದಿರುವ ಗ್ರ್ಯಾಂಡ್‌ಹೋಮ್‌ 38 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. ಅಫ್ಘಾನಿಸ್ಥಾನದ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಕೂಡ 30 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ. 2016ರ ಟಿ-20 ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಹೆಗ್ಗಳಿಕೆ ನಬಿ ಅವರದು.

ಪವರ್‌-ಪ್ಲೇ ಹಂತದಲ್ಲಿ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಬಲ್ಲ ವಿಂಡೀಸ್‌ ವೇಗಿ ಕೆಸ್ರಿಕ್‌ ವಿಲಿಯಮ್ಸ್‌ 30 ಲಕ್ಷ ರೂ. ಮೂಲಬೆಲೆ ನಿಗದಿಗೊಳಿಸಲಾಗಿದೆ. ಕೆರಿಬಿಯನ್‌ ನಾಡಿನ ವಿಕೆಟ್‌ ಕೀಪರ್‌ ನಿಕೋಲಸ್‌ ಪೂರಣ್‌ (30 ಲ.ರೂ.), ಆರಂಭಕಾರ ವಿನ್‌ ಲೂಯಿಸ್‌ (50 ಲ.ರೂ.) ಕೂಡ ಕಣದಲ್ಲಿದ್ದಾರೆ.

ಎ. 5ರಿಂದ ಐಪಿಎಲ್‌
10ನೇ ಐಪಿಎಲ್‌ ಪಂದ್ಯಾವಳಿ ಎ. 5ರಿಂದ ಮೇ 21ರ ತನಕ ಒಟ್ಟು 47 ದಿನಗಳ ಕಾಲ ಸಾಗಲಿದೆ. 8 ತಂಡಗಳು ಪಾಲ್ಗೊಳ್ಳಲಿದ್ದು, 10 ಸ್ಥಳಗಳಲ್ಲಿ ಪಂದ್ಯಗಳು ನಡೆಯುತ್ತವೆ.

ಉದ್ಘಾಟನಾ ಮತ್ತು ಫೈನಲ್‌ ಪಂದ್ಯಗಳೆರಡರ ಆತಿಥ್ಯವೂ ಹೈದರಾಬಾದ್‌ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಪಂಜಾಬ್‌ ತಂಡ ಮೊಹಾಲಿ ಮತ್ತು ಇಂದೋರನ್ನು “ಹೋಮ್‌ ಗ್ರೌಂಡ್‌’ ಆಗಿ ಆರಿಸಿಕೊಂಡಿದೆ. ಗುಜರಾತ್‌ ಲಯನ್ಸ್‌ ತಂಡದ ತವರಿನ ಅಂಗಳಗಳೆಂದರೆ ರಾಜ್‌ಕೋಟ್‌ ಮತ್ತು ಕಾನ್ಪುರ.

Ad

ಟಾಪ್ ನ್ಯೂಸ್

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

Subhanshu’s contribution to India’s space future: A new chapter in space exploration

ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಶುಭಾಂಶು ಕೊಡುಗೆ: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ

Rain; ದ.ಕ. ,ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜು.16 ರಂದು “ಆರೆಂಜ್‌ ಅಲರ್ಟ್‌’

Rain; ದ.ಕ. ,ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜು.16 ರಂದು “ಆರೆಂಜ್‌ ಅಲರ್ಟ್‌’

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Spinner Shoaib Bashir has been ruled out of the Test series against India

INDvsENG: ಭಾರತ ವಿರುದ್ದದ ಟೆಸ್ಟ್‌ ಸರಣಿಯಿಂದ ಹೊರಬಿದ್ದ ಸ್ಪಿನ್ನರ್‌ ಶೋಯೆಬ್‌ ಬಶೀರ್‌

AUS vs WI : ಕೇವಲ 27 ರನ್‌ಗೆ ಆಲೌಟ್‌ ಆದ ವೆಸ್ಟ್‌ ಇಂಡೀಸ್ – ತವರಿನಲ್ಲೇ ವೈಟ್‌ ವಾಶ್

AUS vs WI : ಕೇವಲ 27 ರನ್‌ಗೆ ಆಲೌಟ್‌ ಆದ ವೆಸ್ಟ್‌ ಇಂಡೀಸ್ – ತವರಿನಲ್ಲೇ ವೈಟ್‌ ವಾಶ್

Karnataka: 173 ಕಿ.ಮೀ. ಓಡಿ ಜಪಾನ್‌ ರೇಸ್‌ ಗೆದ್ದ ಕನ್ನಡತಿ ಅಶ್ವಿ‌ನಿ ಗಣಪತಿ!

Karnataka: 173 ಕಿ.ಮೀ. ಓಡಿ ಜಪಾನ್‌ ರೇಸ್‌ ಗೆದ್ದ ಕನ್ನಡತಿ ಅಶ್ವಿ‌ನಿ ಗಣಪತಿ!

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

12-holehonnur

Holehonnuru: ಹಾವು ಕಚ್ಚಿ ಯುವಕ ಸಾ*ವು

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

11-hunsur

Hunsur: ಕೋಳಿ ಫಾರಂ ರೈಟರ್ ನಾಪತ್ತೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.