
ಮೀಸಲು ದಿನದಲ್ಲಿ IPL Final: ಇಂದೂ ಮಳೆ ಬಂದು ಪಂದ್ಯ ರದ್ದಾದರೆ ಯಾರು ವಿನ್ನರ್?
Team Udayavani, May 29, 2023, 10:57 AM IST

ಅಹಮದಾಬಾದ್: ರವಿವಾರವೇ ವರ್ಣರಂಜಿತವಾಗಿ ಅಂತ್ಯ ಕಾಣಬೇಕಿದ್ದ 2023ರ ಐಪಿಎಲ್ ಕೂಟ ಒಂದು ದಿನ ಮುಂದಕ್ಕೆ ಹೋಗಿದೆ. ಅಹಮದಾಬಾದ್ ನಲ್ಲಿ ರವಿವಾರ ಬಿಡದೆ ಕಾಡಿದ ವರುಣನಿಂದಾಗಿ ಐಪಿಎಲ್ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಲಾಗಿದೆ. ಸೋಮವಾರ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.
ರವಿವಾರ ಸಂಜೆ ಅಹಮದಾಬಾದ್ ನಲ್ಲಿ ಮಳೆ ಬರುತ್ತಲೇ ಇತ್ತು. ಒಮ್ಮೆ ನಿಂತು ಟಾಸ್ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮತ್ತೆ ಮಳೆ ಧಾರಾಕಾರವಾಗಿ ಸುರಿಯಿತು. ನಂತರ ಪಂದ್ಯ ನಡೆಯಲು ಸಾಧ್ಯವಿಲ್ಲ ಎಂದು ಪಂದ್ಯದ ಅಧಿಕಾರಿಗಳು ತೀರ್ಮಾನಿಸಿದರು. ಮಧ್ಯರಾತ್ರಿ 12.06 ಕಟ್ ಆಫ್ ಸಮಯವಾಗಿತ್ತು ಆದರೆ ಮಳೆ ಬಿಡುವ ಲಕ್ಷಣ ಕಾಣಿಸದ ಕಾರಣದಿಂದ ಪಂದ್ಯವನ್ನು 10:54 ಕ್ಕೆ ರದ್ದುಗೊಳಿಸಲಾಯಿತು.
ಪಂದ್ಯವನ್ನು ಮೀಸಲು ದಿನ ಅಂದರೆ ಸೋಮವಾರ (ಮೇ.29)ಕ್ಕೆ ಮುಂದೂಡಲಾಯಿತು. ಗುಜರಾತ್ ಕೋಚ್ ಆಶೀಷ್ ನೆಹ್ರಾ ಮತ್ತು ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್ ಪರಸ್ಪರ ಕೈಕುಲುಕಿಕೊಂಡರು. ಸೋಮವಾರ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಹವಾಮಾನ ವರದಿ ಹೇಗಿದೆ?
ಆಕ್ಯುವೆದರ್ ಪ್ರಕಾರ ಸೋಮವಾರ ಸಂಜೆಯೂ ಅಹಮದಾಬಾದ್ ನಲ್ಲಿ ಮಳೆಯಾಲಿದೆ. ಸಂಜೆ 4ರಿಂದ 6 ಗಂಟೆಯವರೆಗೆ ಮಳೆ ಬರುವ ಸಾಧ್ಯತೆಯಿದೆ. ಆದರೆ 7 ಗಂಟೆಯ ಬಳಿಕ ಮಳೆ ಬರುವ ಸಾಧ್ಯತೆಯಿಲ್ಲ. ಒಂದು ವೇಳೆ ಟಾಸ್ ವಿಳಂಬವಾದರೂ ತಲಾ 20 ಓವರ್ ಗಳ ಪಂದ್ಯ ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಫೈನಲ್ ವಾಶ್ ಔಟ್ ಆದರೇ?
ಮೀಸಲು ದಿನದ ಆಟದ ಪರಿಸ್ಥಿತಿಗಳು ಬಹುಮಟ್ಟಿಗೆ ಒಂದೇ ಆಗಿರುತ್ತವೆ. ಪೂರ್ಣ 20-ಓವರ್ ಆಟಕ್ಕೆ ಕಟ್ ಆಫ್ ಸಮಯವು 9:45 ಆಗಿದೆ. ಐದು ಓವರ್ಗಳ ಪಂದ್ಯ ನಡೆಯಲು, ಕಟ್ ಆಫ್ ಸಮಯ 11:56. ಅದು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಗೆ ಕಟ್ ಆಫ್ ಸಮಯ ಮಧ್ಯರಾತ್ರಿ 01:20.
ಒಂದು ವೇಳೆ ಇಡೀ ಪಂದ್ಯವನ್ನು ರದ್ದುಪಡಿಸಿದರೆ, ಪಾಯಿಂಟ್ ಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆಗ ಸಹಜವಾಗಿ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಉಳಿಸಿಕೊಳ್ಳಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Asian Games ಇಂದಿನಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Asian Games ವೈಯಕ್ತಿಕ ಡ್ರೆಸ್ಸೇಜ್: ಅನುಷ್ಗೆ ಕಂಚು

Asian Games ಟೆನಿಸ್: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್ಕುಮಾರ್-ಮೈನೆನಿ ಫೈನಲಿಗೆ
MUST WATCH
ಹೊಸ ಸೇರ್ಪಡೆ

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು

UK ವಿಶ್ವದಲ್ಲೇ ಬಲಿಷ್ಠ ಲೇಸರ್ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ