![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
Hockey ; ಜೂನಿಯರ್ ಹಾಕಿ ವಿಶ್ವಕಪ್: ಸ್ಪೇನ್ ವಿರುದ್ಧ ಭಾರತಕ್ಕೆ ಸೋಲು
Team Udayavani, Dec 7, 2023, 11:29 PM IST
![1rerewrew](https://www.udayavani.com/wp-content/uploads/2023/12/1rerewrew-620x414.jpg)
ಕೌಲಾಲಂಪುರ: ಅಮೋಘ ಆಟದ ಪ್ರದರ್ಶನ ನೀಡಿದ ಸ್ಪೇನ್ ತಂಡವು ಎಫ್ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಕೂಟದ ಗುರುವಾರದ ಪಂದ್ಯದಲ್ಲಿ ಭಾರತ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಸಂಭ್ರಮಿಸಿದೆ.
ಈ ಗೆಲುವಿನಿಂದ ಸ್ಪೇನ್ ತಂಡವು “ಸಿ’ ಬಣದಲ್ಲಿ ಎರಡು ಗೆಲುವಿನೊಂದಿಗೆ ಆರಂಕ ಹೊಂದಿದೆ. ಕೊರಿಯ ಮತ್ತು ಭಾರತ ತಲಾ ಮೂರಂಕ ಹೊಂದಿದ್ದರೂ ಗೋಲು ಅಂತರದಲ್ಲಿ ಕೊರಿಯ ಮುನ್ನಡೆಯಲ್ಲಿದೆ. ಬಣದ ನಾಲ್ಕನೇ ತಂಡವಾದ ಕೆನಡ ಎರಡು ಪಂದ್ಯಗಳಲ್ಲಿ ಸೋತಿದ್ದು ಇನ್ನೂ ಅಂಕ ಖಾತೆ ತೆರೆದಿಲ್ಲ.
ಭಾರತ ತಂಡ ಶನಿವಾರ ನಡೆಯುವ ಪಂದ್ಯದಲ್ಲಿ ಕೆನಡ ತಂಡವನ್ನು ಎದುರಿಸಲಿದೆ. ಆರಂಭಿಕ ಪಂದ್ಯದಲ್ಲಿ ಕೊರಿಯ ತಂಡವನ್ನು 4-2 ಅಂತರದಿಂದ ಸೋಲಿಸಿ ಶುಭಾರಂಭ ಮಾಡಿದ್ದ ಉತ್ತಮ್ ಸಿಂಗ್ ನೇತೃತ್ವದ ಭಾರತ ತಂಡ ಸ್ಪೇನ್ ವಿರುದ್ಧ ಮೇಲುಗೈ ಸಾಧಿಸಲು ವಿಫಲವಾಯಿತು. ಸ್ಪೇನ್ ತಂಡದ ಅಮೋಘ ತಂತ್ರಗಾರಿಕೆಯ ಆಟದೆದುರು ಭಾರತದ ಯಾವುದೇ ಪ್ರಯತ್ನ ಯಶಸ್ಸು ದೊರಕಲಿಲ್ಲ.
ಸ್ಪೇನ್ನ ಅದ್ಭುತ ರಕ್ಷಣಾತ್ಮಕ ಆಟದಿಂದಾಗಿ ಭಾರತಕ್ಕೆ ಆರಂಭದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವೇ ಲಭಿಸಲಿಲ್ಲ. ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲಿಯೇ ಕಾಬ್ರೆ ವೆರ್ಡಿಯೆಲ್ ಗೋಲು ಹೊಡೆದು ಸ್ಪೇನ್ಗೆ ಮುನ್ನಡೆ ಒದಗಿಸಿದ್ದರು. ರಫಿ ಆ್ಯಂಡ್ರೇಸ್ 18ನೇ ನಿಮಿಷದಲ್ಲಿ ಇನ್ನೊಂದು ಗೋಲು ಹೊಡೆದಿದ್ದರು.
ಸ್ಪೇನ್ನ ರಕ್ಷಣೆ ಮತ್ತು ಗೋಲ್ಕೀಪರ್ ಕಪೆಲ್ಲಾಡೆಸ್ ಜಾನ್ ಅವರ ಶ್ರೇಷ್ಠ ನಿರ್ವಹಣೆಯಿಂದ ಭಾರತ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ಜಾನ್ ಅವರು ಭಾರತದ ಮೂರು ಗೋಲು ಹೊಡೆಯುವ ಉತ್ತಮ ಅವಕಾಶ ವನ್ನು ತಡೆದಿದ್ದರು. ಭಾರತಕ್ಕೆ ಒಟ್ಟಾರೆ ಈ ಪಂದ್ಯ ದಲ್ಲಿ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಲಭಿ ಸಿದ್ದರೂ ಗೋಲು ಹೊಡೆಯಲು ಸಾಧ್ಯವಾಗಲೇ ಇಲ್ಲ.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.