ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್
ಅರಬ್ ನಾಡಿನಲ್ಲಿ ಪಂಜಾಬ್ ಪರ ರಾಹುಲ್ ಬ್ಯಾಟಿಂಗ್ ಬಿರುಗಾಳಿಗೆ ಶತಕದ ಮಿಂಚು ; ಬೌಂಡರಿ, ಸಿಕ್ಸರ್ ಸುರಿಮಳೆಗೈದ ಬ್ಯಾಟಿಂಗ್ ಸೆನ್ಸೇಷನ್
Team Udayavani, Sep 24, 2020, 9:21 PM IST
ದುಬಾಯಿ: ಕನ್ನಡಿಗರ ಪಾರಮ್ಯದ ತಂಡ ಮತ್ತು ಕರ್ನಾಟಕದ ತಂಡ ಇವೆರಡರ ನಡುವಿನ ಐಪಿಎಲ್ ಲೀಗ್ ಜಿದ್ದಾಜಿದ್ದಿನಲ್ಲಿ RCB ಗೆಲುವಿಗೆ 207 ರನ್ ಗಳ ಗುರಿ ನಿಗದಿಯಾಗಿದೆ.
ಅರಬ್ ನಾಡಿನಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್ ಪಂದ್ಯಾಟದ ಇಂದಿನ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಿವೆ.
ಟಾಸ್ ಗೆದ್ದ RCB ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಕೊಹ್ಲಿ ನಿರ್ಧಾರ ಅರ್ಧಯಶಸ್ಸನ್ನು ಕಂಡಿತು. RCB ಬೌಲರ್ ಗಳು ಪಂಜಾಬ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರೂ ಆ ಓರ್ವ ಬ್ಯಾಟ್ಸ್ ಮನ್ ಮಾತ್ರ RCB ಪಾಲಿಗೆ ಚಾಲೆಂಜ್ ಆಗಿಯೇ ಉಳಿದುಬಿಟ್ಟ.
ಆತನೇ ಕನ್ನಡಿಗ ಕೆ.ಎಲ್. ರಾಹುಲ್!, ಹೌದು ಕಿಂಗ್ಸ್ ಇಲೆವನ್ ಕಪ್ತಾನ ಮತ್ತು ವಿಕೆಟ್ ಕೀಪರ್ ಕನ್ನಡದ ಕುವರ ಕೆ.ಎಲ್ ರಾಹುಲ್ (ನಾಟೌಟ್ 132) ಆರಂಭಿಕನಾಗಿ ಆಗಮಿಸಿ ಈ ಐಪಿಎಲ್ ಕೂಟದ ಪ್ರಥಮ ಶತಕ ಬಾರಿಸಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುತ್ತಾ RCB ಬೌಲರ್ ಗಳ ಮೇಲೆ ತನ್ನ ಪರಾಕ್ರಮವನ್ನು ಮೆರೆದು ಅಜೇಯರಾಗುಳಿದರು.
ಅವರಿಗೆ ಉಳಿದ ಬ್ಯಾಟ್ಸ್ ಮನ್ ಗಳಿಂದ ಸೂಕ್ತ ಬೆಂಬಲ ದೊರಕದೇ ಹೋದರೂ ರಾಹುಲ್ ಮಾತ್ರ RCB ಬೌಲರ್ ಗಳನ್ನು ಮನಬಂದಂತೆ ದಂಡಿಸುತ್ತಲೇ ಸಾಗಿದರು.
ಇದನ್ನೂ ಓದಿ: ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!
ಪೂರ್ತಿ 20 ಓವರ್ ಗಳವರೆಗೆ ಮೈದಾನದಲ್ಲಿದ್ದ ರಾಹುಲ್ ಎದುರಿಸಿದ್ದು 69 ಎಸೆತಗಳನ್ನು ಬಾರಿಸಿದ್ದು 132 ರನ್. ಅವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 07 ಭರ್ಜರಿ ಸಿಕ್ಸರ್ ಮತ್ತು 14 ಬೌಂಡರಿಗಳಿದ್ದವು. ಮತ್ತು ತಂಡದ ಒಟ್ಟು ಮೊತ್ತದಲ್ಲಿ ಅರ್ಧದಷ್ಟನ್ನು ರಾಹುಲ್ ಒಬ್ಬರೇ ಬಾರಿಸಿದ್ದು ಈ ಕನ್ನಡಿಗನ ಇಂದಿನ ಬ್ಯಾಟಿಗ್ ಪರಾಕ್ರಮಕ್ಕೆ ಸಾಕ್ಷಿ!
ಅಂತಿಮವಾಗಿ 20 ಓವರ್ ಗಳಲ್ಲಿ ಪಂಜಾಬ್ ತಂಡವು 3 ವಿಕೆಟ್ ಗಳ ನಷ್ಟದಲ್ಲಿ 206 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಈ ಮೂಲಕ ಕೊಹ್ಲಿ ನೇತೃತ್ವದ ಬೆಂಗಳೂರು ತಂಡದ ಗೆಲುವಿಗೆ ಬೃಹತ್ ಮೊತ್ತದ ‘ಚಾಲೆಂಜ್’ ನೀಡಿದೆ.
ಕೊನೆಯ ಎರಡು ಓವರ್ ಗಳಲ್ಲಿ ಪಂಜಾಬ್ 49 ರನ್ ಕಲೆಹಾಕಿದ್ದು ರಾಹುಲ್ ಬ್ಯಾಟಿಂಗ್ ವೈಭವದ ಝಲಕ್ ಆಗಿತ್ತು. ಆ ಎರಡು ಓವರ್ ಗಳಲ್ಲಿ ರಾಹುಲ್ 5 ಸಿಕ್ಸರ್ ಗಳನ್ನು ಸಿಡಿಸಿದ್ದರು!
ಪಂಜಾಬ್ ಪರ ರಾಹುಲ್ ಅವರೊಬ್ಬರದ್ದೇ 132 ರನ್ ಗಳಿಕೆಯಾದರೆ, ಮಯಾಂಕ್ ಅಗರ್ವಾಲ್ 26 ರನ್ ಗಳಿಸಿದರು. ಇನ್ನುಳಿದಂತೆ ಪೂರಣ್ 17 ಮತ್ತು ಕೊನೆಯಲ್ಲಿ ಕರುಣ್ ನಾಯರ್ ಔಟಾಗದೇ 8 ಎಸೆತಗಳಲ್ಲಿ 15 ರನ್ ಬಾರಿಸಿ ಮಿಂಚಿದರು.
RCB ಬೌಲರ್ಸ್ ಗಳ ಪೈಕಿ ಶಿವಂ ದುಬೆ 2 ವಿಕೆಟ್ ಪಡೆದರು. ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಹೊರತುಪಡಿಸಿ ಉಳಿದವರೆಲ್ಲಾ ದುಬಾರಿಯೆಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !