ರಿಷಭ್ ಪಂತ್ ಗೆ ಸಲಹೆ ನೀಡಿದ ಕಪಿಲ್ ದೇವ್
Team Udayavani, May 28, 2021, 9:23 AM IST
ಹೊಸದಿಲ್ಲಿ: ಭಾರತಕ್ಕೆ ಮೊದಲ ವಿಶ್ವಕಪ್ ತಂದಿತ್ತ ನಾಯಕ ಕಪಿಲ್ದೇವ್ ಯುವ ಆಟಗಾರ ರಿಷಭ್ ಪಂತ್ಗೆ ಸಲಹೆಯೊಂದನ್ನು ನೀಡಿದ್ದಾರೆ.
ಪ್ರತೀ ಎಸೆತವನ್ನೂ ಹೊಡೆಯಲು ಮುಂದಾಗದೆ ಕ್ರೀಸ್ನಲ್ಲಿ ನಿಂತು ಆಡುವುದನ್ನು ಕಲಿಯಬೇಕಿದೆ ಎಂದಿದ್ದಾರೆ.
“ರಿಷಭ್ ಪಂತ್ ಪ್ರತಿಭಾನ್ವಿತ ಆಟಗಾರ. ಅನೇಕ ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಬಲ್ಲರು. ಅವರ ಹೊಡೆತಗಳ ಮಟ್ಟ ಅದ್ಭುತವಾದದ್ದು. ಆದರೆ ಇಂಗ್ಲೆಂಡ್ ಟ್ರ್ಯಾಕ್ ಹೆಚ್ಚು ಸವಾಲಿನಿಂದ ಕೂಡಿರಲಿದೆ. ಹೀಗಾಗಿ ಪಂತ್ ಪ್ರತಿಯೊಂದು ಎಸೆತಕ್ಕೂ ದೊಡ್ಡ ಹೊಡೆತ ಬಾರಿಸಲು ಪ್ರಯತ್ನಿಸದೇ ಕ್ರೀಸ್ ನಲ್ಲಿ ಹೆಚ್ಚು ಸಮಯ ಉಳಿಯುವ ಪ್ರಯತ್ನ ಮಾಡಬೇಕು’ ಎಂದು ಕಪಿಲ್ ಹೇಳಿದ್ದಾರೆ.
ಸದ್ಯ ರಿಷಭ್ ಪಂತ್ ಟೀಂ ಇಂಡಿಯಾ ಜೊತೆ ಮುಂಬೈನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಜೂನ್ ಮೊದಲ ವಾರದಲ್ಲಿ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಕಿವೀಸ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ. ಪಂತ್ ಭಾರತದ ಪರ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ