ದ್ವಿತೀಯ ಏಕದಿನ: ಮಳೆ ಪಂದ್ಯ ಗೆದ್ದ ಶ್ರೀಲಂಕಾ; ಆಸ್ಟ್ರೇಲಿಯಕ್ಕೆ 26 ರನ್‌ ಸೋಲು


Team Udayavani, Jun 17, 2022, 5:45 PM IST

ದ್ವಿತೀಯ ಏಕದಿನ: ಮಳೆ ಪಂದ್ಯ ಗೆದ್ದ ಶ್ರೀಲಂಕಾ; ಆಸ್ಟ್ರೇಲಿಯಕ್ಕೆ 26 ರನ್‌ ಸೋಲು

ಪಲ್ಲೆಕೆಲೆ: ಮಳೆಯಿಂದ ಅಡಚಣೆಗೊಳಗಾದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 26 ರನ್ನುಗಳಿಂದ ಮಣಿಸಿದ ಶ್ರೀಲಂಕಾ ಸರಣಿಯನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಶ್ರೀಲಂಕಾ 47.4 ಓವರ್‌ಗಳಲ್ಲಿ 9 ವಿಕೆಟಿಗೆ 220 ರನ್‌ ಗಳಿಸಿದ ವೇಳೆ ಮಳೆ ಬಂದುದರಿಂದ ಇನ್ನಿಂಗ್ಸ್‌ ಮುಂದುವರಿಯಲಿಲ್ಲ. ಆಸ್ಟ್ರೇಲಿಯಕ್ಕೆ 43 ಓವರ್‌ಗಳಲ್ಲಿ 216 ರನ್‌ ತೆಗೆಯುವ ಗುರಿ ನಿಗದಿಪಡಿಸಲಾಯಿತು. ಲಂಕಾ ದಾಳಿಗೆ ತತ್ತರಿಸಿದ ಕಾಂಗರೂ ಪಡೆ 37.1 ಓವರ್‌ಗಳಲ್ಲಿ 189ಕ್ಕೆ ಕುಸಿಯಿತು.

ಚಮಿಕ ಕರುಣಾರತ್ನೆ 3, ದುಷ್ಮಂತ ಚಮೀರ, ಧನಂಜಯ ಡಿ ಸಿಲ್ವ ಮತ್ತು ದುನಿತ್‌ ವೆಲ್ಲಲಗೆ ತಲಾ 2 ವಿಕೆಟ್‌ ಕಿತ್ತು ಆಸ್ಟ್ರೇಲಿಯವನ್ನು ಉರುಳಿಸಿದರು. 37 ರನ್‌ ಮಾಡಿದ ಡೇವಿಡ್‌ ವಾರ್ನರ್‌ ಆಸೀಸ್‌ ಹಾಗೂ ಈ ಪಂದ್ಯದ ಟಾಪ್‌ ಸ್ಕೋರರ್‌ ಎನಿಸಿದರು.

ಶ್ರೀಲಂಕಾ ಸರದಿಯಲ್ಲೂ ಯಾರಿಂದಲೂ ದೊಡ್ಡ ಕೊಡುಗೆ ಸಂದಾಯವಾಗಲಿಲ್ಲ. 36 ರನ್‌ ಮಾಡಿದ ಕುಸಲ್‌ ಮೆಂಡಿಸ್‌ ಅವರದೇ ಹೆಚ್ಚಿನ ಗಳಿಕೆ. ಧನಂಜಯ ಡಿ ಸಿಲ್ವ ಮತ್ತು ನಾಯಕ ದಸುನ್‌ ಶಣಕ 34 ರನ್‌ ಹೊಡೆದರು. ಪ್ಯಾಟ್‌ ಕಮಿನ್ಸ್‌ ಘಾತಕ ದಾಳಿ ನಡೆಸಿ 4 ವಿಕೆಟ್‌ ಉರುಳಿಸಿದರು.

ಇದನ್ನೂ ಓದಿ:ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಬಿ.ಸಿ.ನಾಗೇಶ್

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-47.4 ಓವರ್‌ಗಳಲ್ಲಿ 9 ವಿಕೆಟಿಗೆ 220 (ಮೆಂಡಿಸ್‌ 36, ಡಿ ಸಿಲ್ವ 34, ಶಣಕ 34, ಕಮಿನ್ಸ್‌ 35ಕ್ಕೆ 4, ಮಾಕ್ಸ್‌ವೆಲ್‌ 35ಕ್ಕೆ 2, ಕನೆಮನ್‌ 35ಕ್ಕೆ 2). ಆಸ್ಟ್ರೇಲಿಯ-37.1 ಓವರ್‌ಗಳಲ್ಲಿ 189 (ವಾರ್ನರ್‌ 37, ಮ್ಯಾಕ್ಸ್‌ವೆಲ್‌ 30, ಸ್ಮಿತ್‌ 28, ಹೆಡ್‌ 23, ಕರುಣಾರತ್ನೆ 47ಕ್ಕೆ 3, ಚಮೀರ 19ಕ್ಕೆ 2, ಡಿ ಸಿಲ್ವ 26ಕ್ಕೆ 2, ವೆಲ್ಲಲಗೆ 25ಕ್ಕೆ 2).

ಪಂದ್ಯಶ್ರೇಷ್ಠ: ಚಮಿಕಾ ಕರುಣಾರತ್ನೆ.

 

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.