ಕೃಪೆ ತೋರಿದ ಸೂರ್ಯ; ಕರ್ನಾಟಕ- ಜಮ್ಮು ಕ್ವಾರ್ಟರ್ ಫೈನಲ್ ಕದನ ಆರಂಭ
Team Udayavani, Feb 22, 2020, 10:32 AM IST
ಪಾಂಡೆ ಸಂಗ್ರಹ ಚಿತ್ರ
ಜಮ್ಮು: ಎರಡು ದಿನಗಳು ಸುದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಮತ್ತು ಜಮ್ಮು ಕಾಶ್ಮಿರ ನಡುವಿನ ಕ್ವಾರ್ಟರ್ ಫೈನಲ್ ಕದನ ಮತ್ತೆ ಆರಂಭವಾಗಿದೆ. ಇದರೊಂದಿಗೆ ಪಂದ್ಯ ರದ್ದಾಗುವ ಭೀತಿ ಬಹುತೇಕ ದೂರವಾಗಿದೆ.
ಇಲ್ಲಿನ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಮೂರನೇ ದಿನದ ರಣಜಿ ಕ್ವಾರ್ಟಲ್ ಫೈನಲ್ ಪಂದ್ಯ ಆರಂಭವಾಗಿದೆ.
ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಮೊದಲ ದಿನದ ಆಟದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿತ್ತು. ಮೊದಲ ದಿನದಲ್ಲಿ ನಡೆದಿದ್ದು ಕೇವಲ ಆರು ಓವರ್ ಗಳ ಆಟ. ಅದರಲ್ಲಿ ಕೇವಲ 14 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿತ್ತು.
ಎರಡನೇ ದಿನ ಯಾವುದೇ ಆಟ ನಡೆದಿಲ್ಲ. ಅದೃಷ್ಟಶವಾತ್ ಮೂರನೇ ದಿನದ ಆಟ ಆರಂಭವಾಗಿದ್ದು, ನಾಯಕ ಕರುಣ್ ನಾಯರ್ 4 ರನ್ ಗೆ ಔಟಾದರು. ಸದ್ಯ 21 ಓವರ್ ಗಳ ಆಟದಲ್ಲಿ4 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ. ಮನೀಶ್ ಪಾಂಡೆ 37 ರನ್ ಗಳಿಸಿ ಔಟಾದರೆ, ಕೆ.ಸಿದ್ದಾರ್ಥ್ 34 ರನ್ ಮಾಡಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.