ಪಂದ್ಯ ಸೋತರೂ ವಿಶ್ವದ ಹೃದಯ ಗೆದ್ದ ಕಿಲಿಯನ್ ಎಂಬಪ್ಪೆ ಎಂಬ ಮೋಡಿಗಾರ


Team Udayavani, Dec 19, 2022, 12:59 PM IST

Mbappe

ಲುಸೈಲ್: ಕತಾರ್ ದೇಶದ ಲುಸೈಲ್ ನಲ್ಲಿ ರವಿವಾರ ರಾತ್ರಿ ಕಿಕ್ಕಿರಿದ ಜನಸ್ತೋಮದ ನಡುವೆ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಗೆದ್ದು ಬೀಗಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಅವರು ಕೊನೆಗೂ ವಿಶ್ವಕಪ್ ಗೆ ಮುತ್ತಿಕ್ಕಿ ಗೆಲುವಿನ ನಗೆ ಬೀರಿದರು.

ಆದರೆ ಫೈನಲ್ ಪಂದ್ಯದಲ್ಲಿ ಎಲ್ಲರಿಕ್ಕಿಂತಲೂ ಹೆಚ್ಚು ಮಿಂಚಿದ್ದು 23 ವರ್ಷದ ಕಿಲಿಯನ್ ಎಂಬಪ್ಪೆ.

ಫೈನಲ್ ಪಂದ್ಯಕ್ಕೂ ಮೊದಲು ಈ ಪಂದ್ಯ ಮೆಸ್ಸಿ ವರ್ಸಸ್ ಫ್ರಾನ್ಸ್ ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಆದರೆ ಇದನ್ನೆಲ್ಲಾ ಬುಡಮೇಲು ಮಾಡಿ ಮೆಸ್ಸಿ ಎಂಬ ಸೂರ್ಯಪ್ರಕಾಶದ ಎದುರು ಮಿಂಚಿದ್ದ ಕಿಲಿಯನ್ ಎಂಬಪ್ಪೆ. ಫ್ರಾನ್ಸ್ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಎಂಬಪ್ಪೆ ಕೊನೆಯ ಕ್ಷಣದವರೆಗೂ ಭರವಸೆ ಮೂಡಿಸಿದ್ದರು.

ಪಂದ್ಯದ ಮೊದಲ ಅವಧಿಯಲ್ಲಿ ಅರ್ಜೆಂಟೀನಾ ಎರಡು ಗೋಲು ಗಳಿಸಿ ಮುನ್ನಡೆ ಸಾಧಿಸಿತ್ತು. 80 ನೇ ನಿಮಿಷದವರೆಗೂ ಅರ್ಜೆಂಟೀನಾವೇ ಮುಂದಿತ್ತು. ಆದರೆ 80ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಬಳಸಿ ಮೊದಲ ಗೋಲು ಗಳಿಸಿದರು. ಇದರಿಂದ ಅರ್ಜೆಂಟೀನಾ ಆಟಗಾರರು ಹೊರ ಬರುವ ಮೊದಲೇ ಅಂದರೆ 81 ನೇ ನಿಮಿಷದಲ್ಲಿ ಅದ್ಭುತ ಮತ್ತೊಂದು ಗೋಲು ಹೊಡೆದು ಸಮಬಲ ಮಾಡಿದರು. ಕೇವಲ 97 ಸೆಕೆಂಡ್ ಗಳ ಅಂತರದಲ್ಲಿ ಎರಡು ಗೋಲು ಗಳಿಸಿದ ಎಂಬಪ್ಪೆ ಸಂಪೂರ್ಣ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು.

ಇದನ್ನೂ ಓದಿ:ಸಚಿವ ಸ್ಥಾನ ಕೊಟ್ಟಿಲ್ಲ- ಅಧಿವೇಶನಕ್ಕೆ ಹೋಗಲ್ಲ: ಸಿಎಂ ಬೊಮ್ಮಾಯಿ ವಿರುದ್ದ ಈಶ್ವರಪ್ಪ ಅಸಮಾಧಾನ

ಮತ್ತೆ ಹೆಚ್ಚುವರಿ ಸಮಯದಲ್ಲಿ ಮತ್ತೊಂದು ಗೋಲು ಗಳಿಸಿದ ಮೆಸ್ಸಿ ಅರ್ಜೆಂಟೀನಾಗೆ ಮತ್ತೆ ಗೆಲುವಿನ ಭರವಸೆ ತುಂಬಿದರು. ಆದರೆ ಪಂದ್ಯ ಇನ್ನೇನು ಮುಗಿಯಬೇಕು, ಅರ್ಜೆಂಟೀನಾ ಗೆದ್ದಿತು ಎಂಬ ಸ್ಥಿತಿಯಲ್ಲಿ ಮತ್ತೆ ಮೇಲೆದ್ದು ಬಂದ ಎಂಬಪ್ಪೆ 118ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮತ್ತೆ ಪಂದ್ಯ ಡ್ರಾ. ಮುಂದೆ ಪೆನಾಲ್ಟಿ ಶೂಟೌಟ್ ನಲ್ಲೂ ಎಂಬಪ್ಪೆ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು.

ಮೂರು ಗೋಲು ಬಾರಿಸಿದರೂ, ಫ್ರಾನ್ಸ್‌ ಸೋಲನ್ನು ತಡೆಯಲು ಕಿಲಿಯನ್‌ ಎಂಬಪ್ಪೆಗೆ ಆಗಲಿಲ್ಲ. ಈ ನೋವಿನಲ್ಲಿ ಕಣ್ಣೀರು ಹಾಕಿದ ಅವರಿಗೆ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರಾನ್‌ ಸಮಾಧಾನ ಮಾಡಿದರು. ಈ ದೃಶ್ಯ ಗಮನ ಸೆಳೆಯಿತು.

ಗೋಲ್ಡನ್‌ ಬೂಟ್‌: ಫೈನಲ್‌ ನಲ್ಲಿನ ಮೂರು ಸೇರಿ ಒಟ್ಟು ಎಂಟು ಗೋಲು ಬಾರಿಸಿದ ಎಂಬಪ್ಪೆಗೆ ಗೋಲ್ಡನ್‌ ಬೂಟ್‌ ಪ್ರಶಸ್ತಿ ಸಿಕ್ಕಿತ್ತು. ಇದನ್ನು ಗರಿಷ್ಠ ಗೋಲು ಬಾರಿಸಿದ ಆಟಗಾರನಿಗೆ ನೀಡಲಾಗುತ್ತದೆ.

ಇದನ್ನೂ ಓದಿ:ವಿಶ್ವಕಪ್ ನೊಂದಿಗೆ ಅರ್ಜೆಂಟೀನಾ ಗೆದ್ದ ಹಣವೆಷ್ಟು ಗೊತ್ತಾ? ಫ್ರಾನ್ಸ್ ಗೆ ಸಿಕ್ತು 248 ಕೋಟಿ!

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

1-saddas

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.