ಗುವಾಹಾಟಿಗೆ ಆಗಮಿಸಿದ ಲಂಕಾ ತಂಡ


Team Udayavani, Jan 3, 2020, 5:19 AM IST

SRILANKA-TEAM

ಗುವಾಹಾಟಿ: ಭಾರತದ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾ ಕ್ರಿಕೆಟ್‌ ತಂಡ ಗುರುವಾರ ಗುವಾಹಾಟಿಗೆ ಆಗಮಿಸಿದೆ. ರವಿವಾರ ಇಲ್ಲಿ ಮೊದಲ ಮುಖಾ ಮುಖೀ ನಡೆಯಲಿದೆ.

ಇತ್ತೀಚೆಗಷ್ಟೇ ಪೌರತ್ವ ಕಾಯ್ದೆ ವಿರೋಧ ಪ್ರತಿಭಟನೆಯಿಂದ ಹಿಂಸಾಗ್ರಸ್ತವಾಗಿದ್ದ ಅಸ್ಸಾಮ್‌ ರಾಜಧಾನಿ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯ ನಡುವೆಯೇ ಪಂದ್ಯದ ಸಿದ್ಧತೆ ನಡೆಯುತ್ತಿದೆ.

ಭಾರೀ ಭದ್ರತೆ ನಡುವೆ ಶ್ರೀಲಂಕಾ ತಂಡದ ಆಟಗಾರರು ನೇರವಾಗಿ ಹೊಟೇಲಿಗೆ ತಲುಪಿದರು. ಭಾರತ ತಂಡದ ಆಟಗಾರರು ಶುಕ್ರವಾರ ಆಗ ಮಿಸಲಿದ್ದಾರೆ. ಮೊದಲು ಲಂಕಾ, ಸಂಜೆ ಆತಿಥೇಯ ತಂಡದ ಆಟಗಾರರು ಅಭ್ಯಾಸ ನಡೆಸಲಿದ್ದಾರೆ ಎಂದು ಅಸ್ಸಾಮ್‌ ಕ್ರಿಕೆಟ್‌ ಅಸೋಸಿಯೇಶನ್‌ (ಎಸಿಎ) ತಿಳಿಸಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ
ಪೌರತ್ವ ಕಾಯ್ದೆ ಗಲಭೆ ವೇಳೆ ಗುವಾ ಹಾಟಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಇದರಿಂದ ಇಲ್ಲಿ ನಡೆಯಬೇಕಿದ್ದ ರಣಜಿ ಮತ್ತು ಅಂಡರ್‌-19 ಪಂದ್ಯಗಳು ರದ್ದುಗೊಂಡಿದ್ದವು. ಆದರೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪಂದ್ಯ ಕ್ಕೇನೂ ಅಡ್ಡಿಯಾಗದು ಎಂದು ಎಸಿಎ ಕಾರ್ಯದರ್ಶಿ ದೇವಜಿತ್‌ ಸೈಕಿಯ ಹೇಳಿದ್ದಾರೆ.

“ಗುವಾಹಾಟಿ ಈಗ ಮಾಮೂಲು ಸ್ಥಿತಿಗೆ ಮರಳಿದೆ. ಪಂದ್ಯಕ್ಕೆ ಬಿಗಿ ಬಂದೋಬಸ್ತು ಮಾಡಲಾಗಿದೆ. ರಾಜ್ಯ ಸರಕಾರ ಭದ್ರತಾ ವ್ಯವಸ್ಥೆ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ. ಜ. 10ರಿಂದ ಇಲ್ಲಿ ಖೇಲೊ ಇಂಡಿಯಾ ಗೇಮ್ಸ್‌ ಕೂಡ ಆರಂಭವಾಗಲಿದೆ. ಇದರಲ್ಲಿ 7 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ’ ಎಂದು ಸೈಕಿಯ ಹೇಳಿದರು.

ಗುವಾಹಾಟಿಯ “ಬಾರಾಸಪ್ರಾ ಸ್ಟೇಡಿಯಂ’ 39,500 ವೀಕ್ಷಕರ ಸಾಮರ್ಥ್ಯ ಹೊಂದಿದೆ. 27 ಸಾವಿರ ಟಿಕೆಟ್‌ಗಳು ಮಾರಾಟಗೊಂಡಿವೆ. ಜನರೆಲ್ಲ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಡಗರದಲ್ಲಿ ಮುಳುಗಿದ್ದು, ಕೊನೆಯ ಕ್ಷಣದಲ್ಲಿ ಟಿಕೆಟ್‌ ಮಾರಾಟ ಬಿರುಸುಗೊಳ್ಳಬಹುದು ಎಂಬ ನಿರೀಕ್ಷೆ ಎಸಿಎಯದ್ದು.

Ad

ಟಾಪ್ ನ್ಯೂಸ್

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

11-belagavi

Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

8-ckm

ವಿದ್ಯಾರ್ಥಿನಿಯರ ಆತ್ಮಹ*ತ್ಯೆ ಪ್ರಕರಣ; ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ

2

ನಟಿ ಆಲಿಯಾ ಭಟ್​ಗೆ 77 ಲಕ್ಷ ರೂಪಾಯಿ ವಂಚನೆ; ಬೆಂಗಳೂರಿನಲ್ಲಿ ಮಾಜಿ ಆಪ್ತ ಕಾರ್ಯದರ್ಶಿ ಬಂಧನ

Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ

Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

eng

T20: ಸರಣಿ ವಶಕ್ಕೆ ಭಾರತ ಮರು ಯತ್ನ

Nat Sciver Brunt return to ODI series

INDWvsENGW: ಏಕದಿನ ಸರಣಿಗೆ ಮರಳಿದ ನ್ಯಾಟ್‌ ಸ್ಕಿವರ್‌ ಬ್ರಂಟ್‌

Is the Lord’s pitch conducive to speed?

INDvsENG: ಲಾರ್ಡ್ಸ್‌ ಪಿಚ್‌ ವೇಗಕ್ಕೆ ಪೂರಕ?

T20 Bowling Ranking: No.1 Saniha Deepti Sharma

Deepti Sharma: ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ನಂ.1 ಸನಿಹ ದೀಪ್ತಿ

Wimbledon 2025: Fritz, Sabalenka advance to semifinals

Wimbledon 2025: ಫ್ರಿಟ್ಜ್, ಸಬಲೆಂಕಾ ಸೆಮಿಫೈನಲ್‌ ಪ್ರವೇಶ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

13

Kota: ಟಿಲ್ಲರ್‌ನಿಂದ ಟ್ಯಾಕ್ಟರ್‌ ಕಡೆಗೆ ಮುಖ ಮಾಡಿದ ರೈತರು

12

Udupi: ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಕೃಷಿ ಡ್ರೋನ್‌ ಪಡೆಯಲು ಅರ್ಜಿ ಆಹ್ವಾನ

11

Katpadi: ಅಚ್ಚಡ ಸರಕಾರಿ ಶಾಲೆಗೆ ಬೇಕು ಸುರಕ್ಷೆ

11-belagavi

Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.