ಕ್ವಾ .ಫೈನಲ್ಗೆ ಪ್ರಣಯ್, ಸಿಂಧು
Team Udayavani, Jul 1, 2022, 6:08 AM IST
ಕೌಲಾಲಂಪುರ: ಎಚ್.ಎಸ್. ಪ್ರಣಯ್ ಮತ್ತು ಪಿ.ವಿ. ಸಿಂಧು “ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪಿ. ಕಶ್ಯಪ್ ಪರಾ ಭವಗೊಂದರೆ, ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಗಾಯಾಳಾದ್ದರಿಂದ ಡಬಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದರು.
ಶ್ರೇಯಾಂಕ ರಹಿತ ಶಟ್ಲರ್ ಪ್ರಣಯ್ ವಿಶ್ವದ 4ನೇ ರ್ಯಾಂಕಿಂಗ್ ಆಟಗಾರ ಚೀನದ ಚೌ ಟೀನ್ ಚೆನ್ ಅವರನ್ನು 21-15, 21-7 ನೇರ ಗೇಮ್ಗಳಲ್ಲಿ ಸೋಲಿಸಿ ಅಚ್ಚರಿಯ ಫಲಿತಾಂಶ ದಾಖಲಿಸಿದರು. ಕಳೆದ ವಾರ “ಇಂಡೋನೇಷ್ಯಾ ಬ್ಯಾಡ್ಮಿಂಟನ್’ ಕೂಟದ ಸೆಮಿಫೈನಲ್ ತನಕ ಸಾಗಿದ್ದ ಪ್ರಣಯ್ ಅವರಿನ್ನು ಇಂಡೋನೇಷ್ಯಾದ 7ನೇ ಶ್ರೇಯಾಂಕದ ಆಟಗಾರ ಜೊನಾಥನ್ ಕ್ರಿಸ್ಟಿ ವಿರುದ್ಧ ಆಡಲಿದ್ದಾರೆ. ಕ್ರಿಸ್ಟಿ ಎದುರಿನ 8 ಪಂದ್ಯಗಳಲ್ಲಿ ಪ್ರಣಯ್ ಮೂರನ್ನು ಗೆದ್ದಿದ್ದಾರೆ.
ಪಿ. ಕಶ್ಯಪ್ ಅವರನ್ನು ಥಾಯ್ಲೆಂಡ್ನ ಕುನಾÉವುತ್ ವಿದಿತ್ಸಣ್ì 21-19, 21-10ರಿಂದ ಪರಾಭವಗೊಳಿಸಿದರು.
3 ಗೇಮ್ ಹೋರಾಟ :
ಪಿ.ವಿ. ಸಿಂಧು ಥಾಯ್ಲೆಂಡ್ನ ಯುವ ಆಟಗಾರ್ತಿ ಪಿಟ್ಟಾಯಪೋರ್ನ್ ಚೈವಾನ್ ವಿರುದ್ಧ 3 ಗೇಮ್ಗಳ ಹೋರಾಟ ಕಾಣಬೇಕಾಯಿತು. ಮೊದಲ ಗೇಮ್ 19-21ರಿಂದ ಕೈಜಾರಿದ ಬಳಿಕ ತಿರುಗಿ ಬಿದ್ದರು. 21-9, 21-14ರ ಮೇಲುಗೈ ಸಾಧಿಸಿದರು. ಇವರ ಹೋರಾಟ 57 ನಿಮಿಷಗಳ ಕಾಲ ಸಾಗಿತು. ಅಂದಹಾಗೆ ಚೈವಾನ್ ವಿರುದ್ಧ ಸಿಂಧು ಆಡಿದ ಮೊದಲ ಪಂದ್ಯ ಇದಾಗಿತ್ತು.
ಸಿಂಧು ಅವರ ಕ್ವಾರ್ಟರ್ ಫೈನಲ್ ಎದುರಾಳಿ ಚೈನೀಸ್ ತೈಪೆಯ ತೈ ಜು ಯಿಂಗ್. ಇವರೆದುರು ಸಿಂಧು 5-15ರ ಹಿನ್ನಡೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ