ಇರುವುದು ಬರೀ 7.5 ಕೋ.ರೂ.: ಬೇಕಿದೆ ಹಲವು ಆಟಗಾರರು; ಕೋಲ್ಕತ ನೈಟ್‌ ರೈಡರ್ಸ್‌ ಗೆ ಸಂಕಷ್ಟ


Team Udayavani, Nov 17, 2022, 10:34 AM IST

ಇರುವುದು ಬರೀ 7.5 ಕೋ.ರೂ.: ಬೇಕಿದೆ ಹಲವು ಆಟಗಾರರು; ಕೋಲ್ಕತ ನೈಟ್‌ ರೈಡರ್ಸ್‌ ಗೆ ಸಂಕಷ್ಟ

ಕೋಲ್ಕತ: ಡಿ.23ಕ್ಕೆ ಐಪಿಎಲ್‌ ಹರಾಜು ನಡೆಯಲಿದೆ. ಇಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ಕನಿಷ್ಠ 10 ಆಟಗಾರರನ್ನಾದರೂ ಖರೀದಿಸಬೇಕು. ಆದರೆ ಅದರ ಬಳಿಯಿರುವ ಹಣ ಕೇವಲ 7.5 ಕೋಟಿ ರೂ.! ಅದರಲ್ಲೂ ಮೂವರು ವಿದೇಶಿ ಆಟಗಾರರ ಸ್ಥಾನ ಖಾಲಿ ಇದೆ. ಇಷ್ಟು ಕಡಿಮೆ ಮೊತ್ತದಲ್ಲಿ ಹೇಗೆ ಅಷ್ಟು ಆಟಗಾರರನ್ನು ಖರೀದಿಸುತ್ತದೆ ಎನ್ನುವುದು ಎಲ್ಲರ ಕುತೂಹಲ.

ಈಗಿರುವ ಕಡಿಮೆ ಮೊತ್ತದಲ್ಲಿ ಕೋಲ್ಕತ ಖರೀದಿಗೆ ಭಾರೀ ಸರ್ಕಸ್‌ ಮಾಡಬೇಕಾಗುತ್ತದೆ. 2 ಕೋಟಿ ರೂ. ಮೂಲಬೆಲೆ ಇರುವ ಯಾರನ್ನೂ ಆ ತಂಡ ಹರಾಜಿನಲ್ಲಿ ಮುಟ್ಟುವುದೇ ಸಾಧ್ಯವಿಲ್ಲ. ಕಾರಣ ಯಾವುದೇ ತಂಡ ಪೈಪೋಟಿಗೆ ಇಳಿದರೆ ಕೋಲ್ಕತ ಸ್ಥಿತಿ ಅಯೋಮಯವಾಗುತ್ತದೆ! ಶಾರುಖ್‌ ಖಾನ್‌ ಮಾಲಿಕತ್ವದ ಕೋಲ್ಕತ ಯಾಕೆ ಇಂತಹ ಎಡವಟ್ಟು ಮಾಡಿಕೊಂಡಿದೆ ಎಂದು ಎಲ್ಲರೂ ಪ್ರಶ್ನಿಸುತ್ತಾರೆ.

ಇಡೀ 10 ತಂಡಗಳ ಪೈಕಿ ಹೀಗೊಂದು ಎಡವಟ್ಟು ಮಾಡಿಕೊಂಡಿರುವುದು ಕೋಲ್ಕತ ಮಾತ್ರ. ಇದಕ್ಕೆ ಕಾರಣಗಳೂ ಹಲವು. ಮುಂದಿನ ವರ್ಷದ ಐಪಿಎಲ್‌ ನಲ್ಲಿ ಆಡುವುದಿಲ್ಲವೆಂದು ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌, ಇಂಗ್ಲೆಂಡ್‌ನ‌ ಅಲೆಕ್ಸ್‌ ಹೇಲ್ಸ್‌, ಸ್ಯಾಮ್‌ ಬಿಲ್ಲಿಂಗ್ಸ್‌ ಘೋಷಿಸಿದ್ದಾರೆ. ಅವರ ಜಾಗದಲ್ಲಿ ಹೊಸಬರನ್ನು ಕೊಳ್ಳಲು ಕೋಲ್ಕತ ಪ್ರಯತ್ನಿಸಿ, ಕಿವೀಸ್‌ ವೇಗಿ ಲಾಕೀ ಫ‌ರ್ಗ್ಯುಸನ್‌, ಅಫ್ಘಾನಿಸ್ತಾನದ ರೆಹ್ಮಾನುಲ್ಲಾ ಗುರ್ಬಾಜ್‌ ರನ್ನು ಕೊಂಡಿದೆ. ಡೆಲ್ಲಿ ತಂಡದ ಶಾರ್ದೂಲ್‌ ಠಾಕೂರ್‌ರನ್ನು ಖರೀದಿಸಿದೆ. ಈ ಪೈಕಿ ಫ‌ರ್ಗ್ಯುಸನ್‌ಗೆ 10 ಕೋ.ರೂ., ಶಾರ್ದೂಲ್‌ ಗೆ 10.75 ಕೋಟಿ ರೂ. ನೀಡಿದೆ. ಅಲ್ಲಿಗೆ ಅದರ ಹಣವೂ ಮುಗಿದಿದೆ. ಉಳಿದ ಹಣದಲ್ಲಿ ಆ ತಂಡ ಬಾಕಿ ಯತ್ನ ಮಾಡಬೇಕು.

ಇತರೆ ತಂಡಗಳು ಸುರಕ್ಷಿತ: ಕೋಲ್ಕತದಂತೆ ಹಲವು ತಂಡಗಳು ತಮ್ಮ ಆಟಗಾರರನ್ನು ಬಿಟ್ಟುಕೊಟ್ಟಿವೆ. ಆದರೆ ಅವುಗಳ ಬಳಿ ಹಣವೂ ಹಾಗೆಯೇ ಇದೆ. ಇನ್ನು ರಾಯಲ್‌ ಚಾಲೆಂಜೆರ್ಸ್‌ ಬೆಂಗಳೂರು ಬಳಿ ಇರುವುದು ಕೇವಲ 8.75 ಕೋಟಿ ರೂ. ಮಾತ್ರ. ಆದರೆ ಆ ತಂಡ ಖರೀದಿಸಬೇಕಿರುವುದು ಕೇವಲ ಕೆಲವೇ ಆಟಗಾರರನ್ನು ಅಥವಾ ಲೆಕ್ಕಭರ್ತಿಗಷ್ಟೇ. ಹಾಗಾಗಿ ಅದು ನಿಶ್ಚಿಂತೆಯಿಂದ ಹರಾಜಿಗಿಳಿಯಲಿದೆ. ಕೋಲ್ಕತ ಪಾಲಿಗೆ ವಿಷಯ ಹಾಗಿಲ್ಲ. ಅದಕ್ಕೆ ಉತ್ತಮ ಆಟಗಾರರೂ ಬೇಕು, ಕಡಿಮೆ ಬೆಲೆಯಲ್ಲೂ ಸಿಗಬೇಕು. ಅದು ಹರಾಜಿನಲ್ಲಿ ಹೇಗೆ ಸಾಧ್ಯವಾಗುತ್ತದೆ? ಎಲ್ಲರೂ ಬಿಟ್ಟುಕೊಟ್ಟ ಆಟಗಾರರನ್ನು ಕೊಳ್ಳಬೇಕಾಗುತ್ತದೆ ಅಷ್ಟೇ!

ತಂಡ ಬಾಕಿ ಮೊತ್ತ

(ಕೋಟಿ ರೂ.ಗಳಲ್ಲಿ)

ಹೈದರಾಬಾದ್‌ 42.25

ಪಂಜಾಬ್‌ 32.20

ಲಕ್ನೋ 23.35

ಮುಂಬೈ 20.55

ಚೆನ್ನೈ 20.45

ಡೆಲ್ಲಿ 19.45

ಗುಜರಾತ್‌ 19.25

ರಾಜಸ್ಥಾನ 13.20

ಬೆಂಗಳೂರು 8.75

ಕೋಲ್ಕತ 7.5

ಟಾಪ್ ನ್ಯೂಸ್

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-saddsdsadd

ವಿದೇಶಿ ಭಾಷೆಗಳಲ್ಲೂ ಕಾಂತಾರ ಹವಾ; ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಲು ಬೇಡಿಕೆ

1-3qeqwreqwrw3

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ನಟಿ ಹರಿಪ್ರಿಯಾ

1-wwewqewq

ಭಟ್ಕಳ: ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ಇಸ್ಲಾ-ವ-ತಂಝೀಮ್ ನಿರ್ಣಯ

tdy-23

ಮೈ ಮನ ಸೆಳೆಯುವ ದೂದ್‌ಸಾಗರ್‌



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsad-asd

ಏಕದಿನ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗುವ ಸಾಧ್ಯತೆ

1-aswdadsadasd

ಭಾರತ v/sಆಸ್ಟ್ರೇಲಿಯಾ: ಸರಣಿ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ

1-dSsaSs

IPL, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಂದ ಶ್ರೇಯಸ್ ಅಯ್ಯರ್ ಹೊರಗುಳಿಯುವ ಸಾಧ್ಯತೆ

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

rani ram

ರಾಣಿ ರಾಂಪಾಲ್‌ರಿಂದ ಹಾಕಿ ಕ್ರೀಡಾಂಗಣ: ‘ರಾಣಿ ಗರ್ಲ್ಸ್‌ ಹಾಕಿ ಟರ್ಫ್‌ʼ ಎಂದು ಮರುನಾಮಕರಣ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-adassad

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಯುನಿಕೋರ್ಟ್‌ ದಿನ

1-ffsdfsf

ಮಹಾಲಿಂಗೇಶ್ವರ ಜಟೋತ್ಸವಕ್ಕೆ ಜನ ಸಾಗರ ;ದೇವರ ಮೊರೆ ಹೋದ ರಾಜಕಾರಣಿಗಳು

1-qweqw

ಕುಷ್ಟಗಿ:ಭಕ್ತ ಜನಸಾಗರದ ಮಧ್ಯೆ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.