ಎಂಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ
Team Udayavani, Feb 19, 2018, 7:00 AM IST
ಮಂಗಳೂರು: ಈ ಬಾರಿಯ ಎಂಪಿಎಲ್ ಕ್ರಿಕೆಟ್ ಆಟಗಾರರ ಹರಾಜು ಪ್ರಕ್ರಿಯೆ ನಗರದ ಪೋರಂ ಫಿಝಾ ಮಾಲ್ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್ ಸುತ್ತಿಗೆಯನ್ನು ಕುಟ್ಟುವ ಮೂಲಕ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಈ ಬಾರಿ ಬಹಳಷ್ಟು ಮಂದಿ ಪ್ರಥಮ ದರ್ಜೆಯ ಆಟಗಾರರು ಎಂಪಿಎಲ್ ಕೂಟದಲ್ಲಿ ಭಾಗವಹಿಸುವದರಿಂದ ಇಲ್ಲಿನ ಆಟಗಾರರಿಗೆ ಅವರಿಂದ ಅನುಭವವನ್ನು ಪಡೆದು ಮೇಲ್ಮಟ್ಟದ ಕ್ರಿಕೆಟಿನತ್ತ ಸಾಗಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕ್ರಿಕೆಟಿಗ ಧಿಕಾಂಕ್ಷು ನೇಗಿ ಮಾತ್ರ ಗರಿಷ್ಠ ಬೆಲೆಯಾದ 50,000 ರೂ.ಗೆ ಮಾರಾಟವಾದರು. ಐಪಿಲ್ ಆಟಗಾರ ಜೆ. ಸುಚಿತ್ 35,000 ರೂ. ಮೊತ್ತಕ್ಕೆ ಮಂಗಳೂರು ಯುನೈಟೆಡ್ ತಂಡ ಸೇರಿಕೊಂಡರು. ಪವನ್ ಕೆ.ಬಿ. 48,000 ರೂ. ಮೊತ್ತಕ್ಕೆ ಮ್ಯಾಸ್ಟ್ರೋ ಟೈಟಾನ್ ತಂಡ ಸೇರಿದರು.
ಕುಶಾಲ್ ಕುಮಾರ್, ತುಷಾರ್, ದೀಪ್ತಿ, ಚಿರಾಗ್, ಮುಬಿನ್, ಯು.ಟಿ. ಇಫ್ತಿಕಾರ್, ಯಶ್ಪಾಲ್ ಸುವರ್ಣ, ಮಾರ್ಷಲ್ ನೊರೋನ್ನ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಾವಳಿಯ ರೂವಾರಿ ಮಹಮ್ಮದ್ ಸಿರಾಜುದ್ದೀನ್ ಸ್ವಾಗತಿಸಿದರು. ಇಮಿ¤ಯಾಝ್ ಹರಾಜನ್ನು ನಡೆಸಿಕೊಟ್ಟರು. ಕೋಟ ಶಿವನಾರಾಯಣ ಐತಾಳ್ ನಿರೂಪಿಸಿದರು. ಸಫಾªರ್ ಅಲಿ ಶಿರ್ವ, ಬಾಲಕೃಷ್ಣ ಪರ್ಕಳ, ಶಶಿಧರ್ ಕೋಡಿಕಲ್ ತೀಪುìಗಾರರಾಗಿದ್ದರು.
ಮಾ. 9ರಿಂದ ಎ. 1ರ ವರಗೆ 13 ದಿನಗಳ ಕಾಲ ಪಣಂಬೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಂಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ