ಹೆಚ್ಚು ತಂಡಗಳು ಆಡಬೇಕು: ಕೌರ್‌

ವನಿತಾ ಐಪಿಎಲ್ ಟಿ20 ಲೀಗ್‌

Team Udayavani, May 13, 2019, 6:04 AM IST

WOMENS-T20

ಜೈಪುರ: ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌ ತಂಡ ಆರಂಭಿಕ ಆವೃತ್ತಿಯ ‘ವನಿತಾ ಐಪಿಎಲ್ ಟಿ20 ಲೀಗ್‌’ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದೆ. ಶನಿವಾರ ರಾತ್ರಿಯ ಪ್ರಶಸ್ತಿ ಕಾಳಗದಲ್ಲಿ ಅದು ಮಿಥಾಲಿ ರಾಜ್‌ ನಾಯಕತ್ವದ ವೆಲೋಸಿಟಿ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತು.

ಈ ಸಂದರ್ಭದಲ್ಲಿ ಮಾತಾಡಿದ ಹರ್ಮನ್‌ಪ್ರೀತ್‌ ಕೌರ್‌, ಈ ಕೂಟದಲ್ಲಿ ಹೆಚ್ಚು ತಂಡಗಳು ಭಾಗವಹಿಸಬೇಕಿದೆ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

‘ಈ ಆರಂಭಿಕ ಪಂದ್ಯಾವಳಿ ವೈಯಕ್ತಿಕವಾಗಿ ನನಗೆ ಬಹಳ ಖುಷಿ ಕೊಟ್ಟಿತು. ನಾನು ಇದರಿಂದ ಬಹಳ ಕಲಿತೆ. ಉಳಿದ ಆಟಗಾರ್ತಿಯರಿಗೂ ಇದರ ಲಾಭ ಲಭಿಸಿದೆ. ನಾವೇನು ನಿರೀಕ್ಷಿಸಿದ್ದೆವೋ ಅದು ಈಡೇರಿದೆ’ ಎಂದು ಕೌರ್‌ ಹೇಳಿದರು.

‘ಭಾರತದಲ್ಲೂ ವನಿತಾ ಟಿ20 ಲೀಗ್‌ ದೊಡ್ಡ ಮಟ್ಟದಲ್ಲಿ ನಡೆಯ ಬೇಕೆಂಬುದು ಎಲ್ಲರ ಅಭಿಲಾಷೆ. ಇದರಲ್ಲಿ ಹೆಚ್ಚು ತಂಡಗಳು ಪಾಲ್ಗೊಳ್ಳಬೇಕು. ಮುಂದಿನ ವನಿತಾ ಟಿ20 ಲೀಗ್‌ ಇದಕ್ಕೆ ಸಾಕ್ಷಿಯಾಗಲಿ’ ಎಂದು ಹರ್ಮನ್‌ಪ್ರೀತ್‌ ಆಶಿಸಿದರು.

ವಿದೇಶಿಗರ ಕುತೂಹಲ
‘ಇಂಥ ಪಂದ್ಯಾವಳಿಯಲ್ಲಿ ವಿದೇಶಿ ಕ್ರಿಕೆಟಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು. ಭಾರತದಲ್ಲಿ ವನಿತಾ ಟಿ20 ಲೀಗ್‌ ಯಾವಾಗ ಆರಂಭ ವಾಗುತ್ತದೆ, ನಾವು ಇದರಲ್ಲಿ ಯಾವಾಗ ಆಡುವುದು… ಎಂದೆಲ್ಲ ವಿದೇಶಿ ಆಟಗಾರ್ತಿಯರು ಕುತೂ ಹಲದಿಂದ ಕೇಳುತ್ತಿರುತ್ತಾರೆ. ಹೀಗಾಗಿ ಈ ಕೂಟದ ಮಹತ್ವವನ್ನು ಎಲ್ಲರೂ ಮನಗಾಣ ಬೇಕು’ ಎಂದು ಕೌರ್‌ ಬಿಸಿಸಿಐಗೆ ಸೂಚನೆಯೊಂದನ್ನು ಮುಟ್ಟಿಸಿದರು.

ಈ ಬಾರಿಯ ಎಲ್ಲ ಪಂದ್ಯಗಳು ಜೈಪುರದ ‘ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ನಡೆದವು. ಲೀಗ್‌ ಪಂದ್ಯಗಳಿಗೆ ವೀಕ್ಷಕರ ತೀವ್ರ ಅಭಾವವಿತ್ತು. ಆದರೆ ಫೈನಲ್ ಹಣಾಹಣಿಗೆ 15 ಸಾವಿರದಷ್ಟು ವೀಕ್ಷಕರು ಸಾಕ್ಷಿಯಾದರು.

ಅಂತಿಮ ಎಸೆತದಲ್ಲಿ ಜಯ
ಜಿದ್ದಾಜಿದ್ದಿಯಾಗಿ ಸಾಗಿದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಲೋಸಿಟಿ 6 ವಿಕೆಟಿಗೆ 121 ರನ್‌ ಗಳಿಸಿದರೆ, ಸೂಪರ್‌ನೋವಾ 6 ವಿಕೆಟಿಗೆ 125 ರನ್‌ ಬಾರಿಸಿ ಅಂತಿಮ ಎಸೆತದಲ್ಲಿ ಜಯಭೇರಿ ಮೊಳಗಿಸಿತು.

ಅಮೇಲಿಯ ಕೆರ್‌ ಎಸೆದ ಅಂತಿಮ ಓವರಿನ ಮೊದಲ ಎಸೆತ ‘ಡಾಟ್ ಬಾಲ್’. ಮುಂದಿನ ಎಸೆತಕ್ಕೆ 51 ರನ್‌ ಬಾರಿಸಿದ ಕೌರ್‌ ಔಟಾದಾಗ ಪಂದ್ಯದ ಕುತೂಹಲ ಮುಗಿಲು ಮುಟ್ಟಿತು.

ಮುಂದಿನದ್ದೆಲ್ಲ ರಾಧಾ ಯಾದವ್‌ ಸಾಹಸ. ಸತತ 3 ಎಸೆತಗಳಲ್ಲಿ ಅವಳಿ ರನ್‌ ತೆಗೆದ ಅವರು ಪಂದ್ಯವನ್ನು ಸಮಬಲಕ್ಕೆ ತಂದರು. ಕೊನೆಯ ಎಸೆತದಲ್ಲಿ ಒಂದು ರನ್‌ ಬೇಕಿತ್ತು. ಇದು ಕವರ್‌ ವಿಭಾಗದ ಮೂಲಕ ಬೌಂಡರಿ ಗೆರೆ ದಾಟಿತು!

ಗ್ರೌಂಡ್‌ ಶಾಟ್ಸ್‌ ಕೂಡ ಮುಖ್ಯ
‘ಪಂದ್ಯವನ್ನು ಹೇಗೆ ಮುಗಿಸಬೇಕು ಎಂಬ ಪಾಠ ನನಗಿಲ್ಲಿ ಸಿಕ್ಕಿತು. ಎಲ್ಲ ಸಲವೂ ಬೌಂಡರಿ, ಸಿಕ್ಸರ್‌ಗಳ ಯೋಜನೆ ಕ್ಲಿಕ್‌ ಆಗದು. ಗ್ರೌಂಡ್‌ ಶಾಟ್ಸ್‌ ಮೂಲಕವೂ ಯಶಸ್ಸು ಕಾಣಬಹುದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ. ನಾನು ಅರ್ಧದಷ್ಟು ಕರ್ತವ್ಯ ನಿಭಾಯಿಸಿದೆ, ಉಳಿದರ್ಧವನ್ನು ರಾಧಾ ಯಾದವ್‌ ಯಶಸ್ವಿಯಾಗಿ ಮುಗಿಸಿದರು’ ಎಂದು ಕೌರ್‌ ಶ್ಲಾಘಿಸಿದರು.

ಸಂಕ್ಷಿಪ್ತ ಸ್ಕೋರ್‌: ವೆಲೋಸಿಟಿ-6 ವಿಕೆಟಿಗೆ 121. ಸೂಪರ್‌ನೋವಾಸ್‌-20 ಓವರ್‌ಗಳಲ್ಲಿ 6 ವಿಕೆಟಿಗೆ 125 (ಕೌರ್‌ 51, ಪ್ರಿಯಾ ಪೂನಿಯ 29, ಜೆಮಿಮಾ 22, ರಾಧಾ ಯಾದವ್‌ ಔಟಾಗದೆ 10, ಜಹನಾರಾ ಆಲಂ 21ಕ್ಕೆ 2, ಅಮೇಲಿಯಾ ಕೆರ್‌ 29ಕ್ಕೆ 2).

ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.
ಸರಣಿಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.