ಹೆಚ್ಚು ತಂಡಗಳು ಆಡಬೇಕು: ಕೌರ್‌

ವನಿತಾ ಐಪಿಎಲ್ ಟಿ20 ಲೀಗ್‌

Team Udayavani, May 13, 2019, 6:04 AM IST

WOMENS-T20

ಜೈಪುರ: ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌ ತಂಡ ಆರಂಭಿಕ ಆವೃತ್ತಿಯ ‘ವನಿತಾ ಐಪಿಎಲ್ ಟಿ20 ಲೀಗ್‌’ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದೆ. ಶನಿವಾರ ರಾತ್ರಿಯ ಪ್ರಶಸ್ತಿ ಕಾಳಗದಲ್ಲಿ ಅದು ಮಿಥಾಲಿ ರಾಜ್‌ ನಾಯಕತ್ವದ ವೆಲೋಸಿಟಿ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತು.

ಈ ಸಂದರ್ಭದಲ್ಲಿ ಮಾತಾಡಿದ ಹರ್ಮನ್‌ಪ್ರೀತ್‌ ಕೌರ್‌, ಈ ಕೂಟದಲ್ಲಿ ಹೆಚ್ಚು ತಂಡಗಳು ಭಾಗವಹಿಸಬೇಕಿದೆ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

‘ಈ ಆರಂಭಿಕ ಪಂದ್ಯಾವಳಿ ವೈಯಕ್ತಿಕವಾಗಿ ನನಗೆ ಬಹಳ ಖುಷಿ ಕೊಟ್ಟಿತು. ನಾನು ಇದರಿಂದ ಬಹಳ ಕಲಿತೆ. ಉಳಿದ ಆಟಗಾರ್ತಿಯರಿಗೂ ಇದರ ಲಾಭ ಲಭಿಸಿದೆ. ನಾವೇನು ನಿರೀಕ್ಷಿಸಿದ್ದೆವೋ ಅದು ಈಡೇರಿದೆ’ ಎಂದು ಕೌರ್‌ ಹೇಳಿದರು.

‘ಭಾರತದಲ್ಲೂ ವನಿತಾ ಟಿ20 ಲೀಗ್‌ ದೊಡ್ಡ ಮಟ್ಟದಲ್ಲಿ ನಡೆಯ ಬೇಕೆಂಬುದು ಎಲ್ಲರ ಅಭಿಲಾಷೆ. ಇದರಲ್ಲಿ ಹೆಚ್ಚು ತಂಡಗಳು ಪಾಲ್ಗೊಳ್ಳಬೇಕು. ಮುಂದಿನ ವನಿತಾ ಟಿ20 ಲೀಗ್‌ ಇದಕ್ಕೆ ಸಾಕ್ಷಿಯಾಗಲಿ’ ಎಂದು ಹರ್ಮನ್‌ಪ್ರೀತ್‌ ಆಶಿಸಿದರು.

ವಿದೇಶಿಗರ ಕುತೂಹಲ
‘ಇಂಥ ಪಂದ್ಯಾವಳಿಯಲ್ಲಿ ವಿದೇಶಿ ಕ್ರಿಕೆಟಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು. ಭಾರತದಲ್ಲಿ ವನಿತಾ ಟಿ20 ಲೀಗ್‌ ಯಾವಾಗ ಆರಂಭ ವಾಗುತ್ತದೆ, ನಾವು ಇದರಲ್ಲಿ ಯಾವಾಗ ಆಡುವುದು… ಎಂದೆಲ್ಲ ವಿದೇಶಿ ಆಟಗಾರ್ತಿಯರು ಕುತೂ ಹಲದಿಂದ ಕೇಳುತ್ತಿರುತ್ತಾರೆ. ಹೀಗಾಗಿ ಈ ಕೂಟದ ಮಹತ್ವವನ್ನು ಎಲ್ಲರೂ ಮನಗಾಣ ಬೇಕು’ ಎಂದು ಕೌರ್‌ ಬಿಸಿಸಿಐಗೆ ಸೂಚನೆಯೊಂದನ್ನು ಮುಟ್ಟಿಸಿದರು.

ಈ ಬಾರಿಯ ಎಲ್ಲ ಪಂದ್ಯಗಳು ಜೈಪುರದ ‘ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ನಡೆದವು. ಲೀಗ್‌ ಪಂದ್ಯಗಳಿಗೆ ವೀಕ್ಷಕರ ತೀವ್ರ ಅಭಾವವಿತ್ತು. ಆದರೆ ಫೈನಲ್ ಹಣಾಹಣಿಗೆ 15 ಸಾವಿರದಷ್ಟು ವೀಕ್ಷಕರು ಸಾಕ್ಷಿಯಾದರು.

ಅಂತಿಮ ಎಸೆತದಲ್ಲಿ ಜಯ
ಜಿದ್ದಾಜಿದ್ದಿಯಾಗಿ ಸಾಗಿದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಲೋಸಿಟಿ 6 ವಿಕೆಟಿಗೆ 121 ರನ್‌ ಗಳಿಸಿದರೆ, ಸೂಪರ್‌ನೋವಾ 6 ವಿಕೆಟಿಗೆ 125 ರನ್‌ ಬಾರಿಸಿ ಅಂತಿಮ ಎಸೆತದಲ್ಲಿ ಜಯಭೇರಿ ಮೊಳಗಿಸಿತು.

ಅಮೇಲಿಯ ಕೆರ್‌ ಎಸೆದ ಅಂತಿಮ ಓವರಿನ ಮೊದಲ ಎಸೆತ ‘ಡಾಟ್ ಬಾಲ್’. ಮುಂದಿನ ಎಸೆತಕ್ಕೆ 51 ರನ್‌ ಬಾರಿಸಿದ ಕೌರ್‌ ಔಟಾದಾಗ ಪಂದ್ಯದ ಕುತೂಹಲ ಮುಗಿಲು ಮುಟ್ಟಿತು.

ಮುಂದಿನದ್ದೆಲ್ಲ ರಾಧಾ ಯಾದವ್‌ ಸಾಹಸ. ಸತತ 3 ಎಸೆತಗಳಲ್ಲಿ ಅವಳಿ ರನ್‌ ತೆಗೆದ ಅವರು ಪಂದ್ಯವನ್ನು ಸಮಬಲಕ್ಕೆ ತಂದರು. ಕೊನೆಯ ಎಸೆತದಲ್ಲಿ ಒಂದು ರನ್‌ ಬೇಕಿತ್ತು. ಇದು ಕವರ್‌ ವಿಭಾಗದ ಮೂಲಕ ಬೌಂಡರಿ ಗೆರೆ ದಾಟಿತು!

ಗ್ರೌಂಡ್‌ ಶಾಟ್ಸ್‌ ಕೂಡ ಮುಖ್ಯ
‘ಪಂದ್ಯವನ್ನು ಹೇಗೆ ಮುಗಿಸಬೇಕು ಎಂಬ ಪಾಠ ನನಗಿಲ್ಲಿ ಸಿಕ್ಕಿತು. ಎಲ್ಲ ಸಲವೂ ಬೌಂಡರಿ, ಸಿಕ್ಸರ್‌ಗಳ ಯೋಜನೆ ಕ್ಲಿಕ್‌ ಆಗದು. ಗ್ರೌಂಡ್‌ ಶಾಟ್ಸ್‌ ಮೂಲಕವೂ ಯಶಸ್ಸು ಕಾಣಬಹುದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ. ನಾನು ಅರ್ಧದಷ್ಟು ಕರ್ತವ್ಯ ನಿಭಾಯಿಸಿದೆ, ಉಳಿದರ್ಧವನ್ನು ರಾಧಾ ಯಾದವ್‌ ಯಶಸ್ವಿಯಾಗಿ ಮುಗಿಸಿದರು’ ಎಂದು ಕೌರ್‌ ಶ್ಲಾಘಿಸಿದರು.

ಸಂಕ್ಷಿಪ್ತ ಸ್ಕೋರ್‌: ವೆಲೋಸಿಟಿ-6 ವಿಕೆಟಿಗೆ 121. ಸೂಪರ್‌ನೋವಾಸ್‌-20 ಓವರ್‌ಗಳಲ್ಲಿ 6 ವಿಕೆಟಿಗೆ 125 (ಕೌರ್‌ 51, ಪ್ರಿಯಾ ಪೂನಿಯ 29, ಜೆಮಿಮಾ 22, ರಾಧಾ ಯಾದವ್‌ ಔಟಾಗದೆ 10, ಜಹನಾರಾ ಆಲಂ 21ಕ್ಕೆ 2, ಅಮೇಲಿಯಾ ಕೆರ್‌ 29ಕ್ಕೆ 2).

ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.
ಸರಣಿಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

Ad

ಟಾಪ್ ನ್ಯೂಸ್

ಜು.13 ರಂದು ಜಮ್ಮುವಿನಲ್ಲಿ ವಿಶ್ವ ಮಟ್ಟದ ಹಿಂದೂ ಸಮಾವೇಶ: ಮುತಾಲಿಕ್

ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

Madikeri: ಕಾಡಾನೆ ದಾಳಿ… ಓರ್ವ ಸ್ಥಳದಲ್ಲೇ ಮೃ*ತ್ಯು… ಇನ್ನೋರ್ವ ಓಡಿ ಜೀವ ಉಳಿಸಿಕೊಂಡ

Madikeri: ಕಾಡಾನೆ ದಾಳಿಗೆ ಓರ್ವ ಸ್ಥಳದಲ್ಲೇ ಮೃ*ತ್ಯು… ಇನ್ನೋರ್ವ ಓಡಿ ಜೀವ ಉಳಿಸಿಕೊಂಡ

BIGG BOSS: ಟಿವಿಗಿಂತ ಒಟಿಟಿಯಲ್ಲಿ ಮೊದಲು ಪ್ರಸಾರ ಕಾಣಲಿದೆ ʼಬಿಗ್‌ ಬಾಸ್‌ʼ

ಟಿವಿಗಿಂತ ಒಟಿಟಿಯಲ್ಲಿ ಮೊದಲು ಪ್ರಸಾರ ಕಾಣಲಿದೆ ʼBigg Bossʼ: ಈ ಬಾರಿ ಮೂವರು ನಿರೂಪಕರು?

Hubballi: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ

Hubballi: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ

ತುಂಗಾ ಕಮಾನು ಸೇತುವೆ ಮೇಲೆ ನಿಲ್ಲುತ್ತಿದೆ ನೀರು.. ಪ್ರಯಾಣಿಕರಿಗೆ ಕೊಳಚೆ ನೀರಿನ ಅಭಿಷೇಕ

ತುಂಗಾ ಕಮಾನು ಸೇತುವೆ ಮೇಲೆ ನಿಲ್ಲುತ್ತಿದೆ ನೀರು.. ಪ್ರಯಾಣಿಕರಿಗೆ ಕೊಳಚೆ ನೀರಿನ ಅಭಿಷೇಕ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

ಅಂಡರ್‌-19 ಏಕದಿನ: ಭಾರತಕ್ಕೆ 7 ವಿಕೆಟ್‌ ಸೋಲು

ಅಂಡರ್‌-19 ಏಕದಿನ: ಭಾರತಕ್ಕೆ 7 ವಿಕೆಟ್‌ ಸೋಲು

T20I Series; ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

T20I Series; ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

10

Kota: ಯಡ್ತಾಡಿ ಕಂಬಳ ಗದ್ದೆಯ ಸಾಂಪ್ರದಾಯಿಕ ನಾಟಿ: ನೂರಕ್ಕೂ ಅಧಿಕ ಮಹಿಳೆಯರು ಭಾಗಿ!

9

Udupi: ಆಯುರ್ವೇದ ಶಿಕ್ಷಣ, ಚಿಕಿತ್ಸೆ, ಔಷಧ ಕ್ಷೇತ್ರದಲ್ಲಿ ದಾಪುಗಾಲು

8

Kundapura: ಶತಮಾನದ ಹೊಸ್ತಿಲಲ್ಲಿರುವ ಕೊಡ್ಲಾಡಿ ಶಾಲೆಗೆ ಬೇಕು ಕೊಠಡಿ

ಜು.13 ರಂದು ಜಮ್ಮುವಿನಲ್ಲಿ ವಿಶ್ವ ಮಟ್ಟದ ಹಿಂದೂ ಸಮಾವೇಶ: ಮುತಾಲಿಕ್

ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್

7

Surathkal ಪರಿಸರದಲ್ಲಿ ಬೀದಿ ನಾಯಿಗಳ ಉಪಟಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.