
ಮರಳಿದ ನೇಮರ್ ಬ್ರಝಿಲ್ ಸೂಪರ್; ವಿಶ್ವಕಪ್ ಕ್ವಾರ್ಟರ್ ಫೈನಲ್ಗೆ ಲಗ್ಗೆ
Team Udayavani, Dec 6, 2022, 11:18 PM IST

ದೋಹಾ: “ಸೇಮ್ ಓಲ್ಡ್ ನೇಮರ್’ ಮರಳಿ ತಂಡ ಸೇರಿಕೊಂಡು ತನ್ನ ಎಂದಿನ ತಾಕತ್ತು ತೋರಿಸುವ ಮೂಲಕ ಬ್ರಝಿಲ್ ಖುಷಿ ಖುಷಿಯಾಗಿ ವಿಶ್ವಕಪ್ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇರಿಸಿದೆ. ಪ್ರಿ ಕ್ವಾರ್ಟರ್ ಫೈನಲ್ ಮುಖಾಮುಖೀಯಲ್ಲಿ ಅದು ಏಷ್ಯಾದ ಬಲಿಷ್ಠ ತಂಡವಾದ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಮಣಿಸಿ ಮೆರೆಯಿತು.
ಬ್ರಝಿಲ್ ತನ್ನ ಈ ಗೆಲುವನ್ನು ಹಾಸಿಗೆ ಹಿಡಿದಿರುವ ಲೆಜೆಂಡ್ರಿ ಆಟಗಾರ ಪೀಲೆಗೆ ಅರ್ಪಿಸಿತು. ಪೀಲೆ ಕೂಡ ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಿರುವುದು ಬ್ರಝಿಲ್ ಸಂತಸವನ್ನು ಇಮ್ಮಡಿಗೊಳಿಸಿದೆ.
ಇದಕ್ಕೂ ಹಿಂದಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರನ್ನರ್ ಅಪ್ ಕ್ರೊವೇಶಿಯ ಶೂಟೌಟ್ನಲ್ಲಿ ಜಪಾನ್ಗೆ 3-1 ಅಂತರದ ಸೋಲುಣಿಸಿತ್ತು. ಇದರೊಂದಿಗೆ ಏಷ್ಯಾದ ತಂಡಗಳಿಗೆ ವಿಶ್ವಕಪ್ ಬಾಗಿಲು ಮುಚ್ಚಿ ದಂತಾಯಿತು. ಶುಕ್ರವಾರದ ಕ್ವಾರ್ಟರ್ ಫೈನಲ್ನಲ್ಲಿ ಬ್ರಝಿಲ್-ಕ್ರೊವೇಶಿಯ ಮುಖಾಮುಖೀ ಆಗಲಿವೆ.
ಇನ್ನೊಂದೆಡೆ ದಕ್ಷಿಣ ಕೊರಿಯಾ ಸೋತ ಬೆನ್ನಲೇ ಕೋಚ್ ಪಾವ್ಲೊ ಬೆಂಟೊ ಹುದ್ದೆಯಿಂದ ಕೆಳಗಿಳಿಯು ವುದಾಗಿ ಘೋಷಿಸಿದರು. ಮೂಲತಃ ಪೋರ್ಚುಗಲ್ನವರಾದ ಬೆಂಟೊ ಕಳೆದ ವಿಶ್ವಕಪ್ ಬಳಿಕ ದಕ್ಷಿಣ ಕೊರಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ವಿಶ್ವಕಪ್ ಕೊನೆಗೆ ಇವರ ಅವಧಿ ಮುಗಿಯುತ್ತಿತ್ತು.ಇದು “ಸ್ಟೇಡಿಯಂ 974’ನಲ್ಲಿ ನಡೆದ ಕೊನೆಯ ವಿಶ್ವಕಪ್ ಪಂದ್ಯ.
ಆಕ್ರಮಣಕಾರಿ ಆರಂಭ
ಅತ್ಯಂತ ಆಕ್ರಮಣಕಾರಿ ಪ್ರದ ರ್ಶನ ನೀಡಿದ ಬ್ರಝಿಲ್ ತನ್ನ ನಾಲ್ಕೂ ಗೋಲುಗಳನ್ನು ಬರೀ 36 ನಿಮಿಷಗಳಲ್ಲಿ ಸಿಡಿಸಿತು. 7ನೇ ನಿಮಿಷದಲ್ಲೇ ವಿನ್ಸಿಯಸ್ ಜೂನಿ ಯರ್ ಖಾತೆ ತೆರೆದರು. 10ನೇ ನಿಮಿಷದಲ್ಲಿ ನೇಮರ್ ಮ್ಯಾಜಿಕ್ ಮಾಡಿದರು. ನೇಮರ್ ಈ ವಿಶ್ವಕಪ್ ಕೂಟದಲ್ಲಿ ಹೊಡೆದ ಮೊದಲ ಗೋಲು ಇದಾಗಿದೆ. ಹಾಗೆಯೇ 3 ವಿಶ್ವಕಪ್ಗ್ಳಲ್ಲಿ ಗೋಲು ಹೊಡೆದ ಬ್ರಝಿಲ್ನ 3ನೇ ಆಟಗಾರನೆನಿಸಿದರು. ಉಳಿದಿಬ್ಬರೆಂದರೆ ಪೀಲೆ ಮತ್ತು ರೊನಾಲ್ಡೊ.
29ನೇ ನಿಮಿಷದಲ್ಲಿ ರಿಚಾರ್ಲಿಸನ್ ಈ ಮುನ್ನಡೆಯನ್ನು ಮೂರಕ್ಕೆ ಏರಿಸಿ ದರು. ಲುಕಾಸ್ ಪಕ್ವೇಟ 36ನೇ ನಿಮಿಷದಲ್ಲಿ 4ನೇ ಗೋಲು ಬಾರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.
ಎಲ್ಲ ಮುಗಿದ ಬಳಿಕ 76ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಪೈಕ್ ಸೆಯುಂಗ್ ಗೋಲೊಂದನ್ನು ಹೊಡೆದು ಸೋಲಿನ ಅಂತರವನ್ನು ತಗ್ಗಿಸಿದರು.
ದ. ಕೊರಿಯಾ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಪವಾಡವೇ ಸಂಭವಿಸಬೇಕಿತ್ತು. 2002ರಲ್ಲಿ ಅದು ಪ್ರಿ ಕ್ವಾರ್ಟರ್ ಫೈನಲ್ ದಾಟಿ ಸೆಮಿಫೈನಲ್ ತನಕ ಮುನ್ನುಗ್ಗಿತ್ತು. ಅಂದು ದಕ್ಷಿಣ ಕೊರಿಯಾ ಫಿಫಾ ವಿಶ್ವಕಪ್ ಪಂದ್ಯಾ ವಳಿಯ ಜಂಟಿ ಆತಿಥ್ಯ ವಹಿಸಿ ಸ್ಮರಣೀಯ ಸಾಧನೆಗೈದಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್-ಸಿಸಿಪಸ್ ಪ್ರಶಸ್ತಿ ರೇಸ್

ಇಂಡೋನೇಷ್ಯಾ ಮಾಸ್ಟರ್: ಲಕ್ಷ್ಯ ಸೇನ್ ಪರಾಭವ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್