ಆಸ್ಟ್ರೇಲಿಯನ್‌ ಓಪನ್‌: ಜೊಕೋಗೆ 10ನೇ ಕಿರೀಟ


Team Udayavani, Jan 29, 2023, 11:53 PM IST

ಆಸ್ಟ್ರೇಲಿಯನ್‌ ಓಪನ್‌: ಜೊಕೋಗೆ 10ನೇ ಕಿರೀಟ

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌’ನಲ್ಲಿ ತನಗೆ ಯಾರೂ ಸಾಟಿಯಾಗಲಾರರು ಎಂದು ಸರ್ಬಿಯಾದ ಟೆನಿಸಿಗ ನೊವಾಕ್‌ ಜೊಕೋವಿಕ್‌ 10ನೇ ಸಲ ಸಾಧಿಸಿ ತೋರಿಸಿದ್ದಾರೆ.

ರವಿವಾರ “ರಾಡ್‌ ಲೆವರ್‌ ಅರೇನಾ’ದಲ್ಲಿ ನಡೆದ ಫೈನಲ್‌ನಲ್ಲಿ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ ಅಮೋಘ ಪ್ರಭುತ್ವ ಸಾಧಿಸಿದ ಅವರು 6-3, 7-6 (7-4), 7-6 (7-5) ಅಂತರದ ಜಯದೊಂದಿಗೆ 22ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಒಡೆಯನೆನಿಸಿದರು; ರಫೆಲ್‌ ನಡಾಲ್‌ ದಾಖಲೆಯನ್ನು ಸರಿದೂಗಿಸಿದರು.

ಇನ್ನೊಂದೆಡೆ ಸ್ಟೆಫ‌ನಸ್‌ ಸಿಸಿಪಸ್‌ ಅವರ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗೆಲುವಿನ ಕನಸು ಎರಡನೇ ಸಲ ಜೊಕೋವಿಕ್‌ ಕೈಯಲ್ಲೇ ಕಮರಿ ಹೋಯಿತು. ಇದಕ್ಕೂ ಮುನ್ನ 2021ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲೂ ಅವರು ಜೊಕೋಗೆ ಶರಣಾಗಿದ್ದರು.

ಕಳೆದ ವರ್ಷದ ಬ್ರೇಕ್‌ ಬಳಿಕ ಮತ್ತೆ “ಮೆಲ್ಬರ್ನ್ ಪಾರ್ಕ್‌’ನಲ್ಲಿ ಮಹೋನ್ನತ ಪ್ರದರ್ಶನ ನೀಡಿದ ಜೊಕೋವಿಕ್‌ ಹತ್ತಕ್ಕೆ ಹತ್ತೂ ಫೈನಲ್‌ಗ‌ಳಲ್ಲಿ ಚಾಂಪಿಯನ್‌ ಆಗಿ ಮೂಡಿಬಂದದ್ದು ಅಸಾಮಾನ್ಯ ಸಾಧನೆ ಎನಿಸಿದೆ. ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಸರ್ಬಿಯನ್‌ ಟೆನಿಸಿಗನೀಗ ಸೋಲಿಲ್ಲದ ಸರದಾರನಾಗಿ ಮೆರೆದಿದ್ದಾರೆ. ಈ ಜಯದೊಂದಿಗೆ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಮರಳಿ ಅಗ್ರಸ್ಥಾನ ಅಲಂಕರಿಸಲಿದ್ದಾರೆ.

ಜೊಕೋಗೆ ಗ್ರೀಕ್‌ನ ದೈತ್ಯ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ಭಾರೀ ಪ್ರತಿರೋಧ ಒಡ್ಡುವರೆಂದೇ ಭಾವಿಸಲಾಗಿತ್ತು. 5 ಸೆಟ್‌ಗಳ ತನಕ ಹೋರಾಡುವ ಛಾತಿ ಅವರಿಗಿತ್ತು. ಆದರೆ ಜೊಕೋ ಅನುಭವದ ಮುಂದೆ ಸಿಸಿಪಸ್‌ ಆಟ ನಡೆಯಲಿಲ್ಲ. ಮೊದಲ ಸೆಟ್‌ನಲ್ಲಿ ಅವರು ಪ್ರತಿರೋಧವನ್ನೇ ತೋರಲಿಲ್ಲ. ಮುಂದಿನೆರಡು ಸೆಟ್‌ಗಳನ್ನು ಟೈ-ಬ್ರೇಕರ್‌ಗೆ ಎಳೆದು ತಂದರೂ ಪ್ರಯೋಜನವಾಗಲಿಲ್ಲ.

ಸತತ 4ನೇ ಪ್ರಶಸ್ತಿ
ಇದು ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಜೊಕೋವಿಕ್‌ಗೆ ಒಲಿದ ಸತತ 4ನೇ ಪ್ರಶಸ್ತಿ. 2019ರಿಂದ ಅವರ ಓಟ ಮೊದಲ್ಗೊಂಡಿತ್ತು. ಕಳೆದ ವರ್ಷ “ಕೊರೊನಾ ಲಸಿಕೆ’ ಹಾಕಿಸಿಕೊಳ್ಳದ ಕಾರಣ ಅವರಿಗೆ ಇಲ್ಲಿ ಆಡುವ ಅವಕಾಶ ನೀಡಿರಲಿಲ್ಲ.

ಜೊಕೋವಿಕ್‌ ಅವರ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಲ್ಲಿ ಆಸ್ಟ್ರೇಲಿಯನ್‌ ಓಪನ್‌ಗೆ ಅಗ್ರಸ್ಥಾನ (10). ಅವರ ಗ್ರ್ಯಾನ್‌ಸ್ಲಾಮ್‌ ಅಭಿಯಾನ ಆರಂಭಗೊಂಡದ್ದೇ “ಮೆಲ್ಬರ್ನ್ ಪಾರ್ಕ್‌’ನಲ್ಲಿ ಎಂಬುದನ್ನು ಮರೆಯುವಂತಿಲ್ಲ. 2008ರಲ್ಲಿ ಜೊಕೋ ಇಲ್ಲಿ ತಮ್ಮ ಟೆನಿಸ್‌ ಬಾಳ್ವೆಯ ಮೊದಲ ಗ್ರ್ಯಾನ್‌ಸ್ಲಾಮ್‌ ಜಯಿಸಿದ್ದರು. ಉಳಿದಂತೆ 7 ಸಲ ವಿಂಬಲ್ಡನ್‌, 3 ಸಲ ಯುಎಸ್‌ ಓಪನ್‌, 2 ಸಲ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ್ದಾರೆ.

ವರ್ಷ ಎದುರಾಳಿ ಅಂತರ
2008 ಜೋ ವಿಲ್‌ಫ್ರೆಡ್‌ ಸೋಂಗ 4-6, 6-4, 6-3, 7-6 (7-2)
2011 ಆ್ಯಂಡಿ ಮರ್ರೆ 6-4, 6-2, 6-3
2012 ರಫೆಲ್‌ ನಡಾಲ್‌ 5-7, 6-4, 6-2, 6-7 (5-7), 7-5
2013 ಆ್ಯಂಡಿ ಮರ್ರೆ 6-7 (2-7), 7-6 (7-3), 6-3, 6-2
2015 ಆ್ಯಂಡಿ ಮರ್ರೆ 7-6 (7-5), 6-7 (4-7), 6-3, 6-0
2016 ಆ್ಯಂಡಿ ಮರ್ರೆ 6-1, 7-5, 7-6 (7-3)
2019 ರಫೆಲ್‌ ನಡಾಲ್‌ 6-3, 6-2, 6-3
2020 ಡೊಮಿನಿಕ್‌ ಥೀಮ್‌ 6-4, 4-6, 2-6, 6-3, 6-4
2021 ಡ್ಯಾನಿಲ್‌ ಮೆಡ್ವೆಡೇವ್‌ 7-5, 6-2, 6-2
2023 ಸ್ಟೆಫ‌ನೆಸ್‌ ಸಿಸಿಪಸ್‌ 6-3, 7-6 (7-4), 7-6 (7-5)

ಟಾಪ್ ನ್ಯೂಸ್

1-sadadasdasd

ನೂತನ ಸಂಸತ್ ಭವನಕ್ಕೆ ಪ್ರಧಾನಿ ದಿಢೀರ್ ಭೇಟಿ; ಕಾಮಗಾರಿಗಳ ಪರಿಶೀಲನೆ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

1-wwqeq3

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

shashikala-jolle

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kohli

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್‌ ಕೊಹ್ಲಿ!

Bhuvneshwar Kumar Replaces Adien Markram As Captain Of Sunrisers Hyderabad?

ಹೈದರಾಬಾದ್ ತಂಡದ ನಾಯಕತ್ವ ಬದಲಾವಣೆ? ಮಾಕ್ರಮ್ ಬದಲು ಕಾಣಸಿಕೊಂಡ ಭುವನೇಶ್ವರ್

Arjun Tendulkar To Debut For Mumbai Indians In IPL 2023?

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

josh hazlewood glenn maxwell will not feature opening match of RCB

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ODI World Cup 2023: Mumbai, Ahmedabad To Hosts Semis And Final

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1a-wasa

ವಿಜಯಪುರ: ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ 6 ಲಕ್ಷ ರೂ.,480 ಗ್ರಾಂ ಚಿನ್ನ ವಶ

1-sadadasdasd

ನೂತನ ಸಂಸತ್ ಭವನಕ್ಕೆ ಪ್ರಧಾನಿ ದಿಢೀರ್ ಭೇಟಿ; ಕಾಮಗಾರಿಗಳ ಪರಿಶೀಲನೆ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

1-sadsasd

ಹುಣಸೂರು: ರೌಡಿ ಶೀಟರ್ ತನ್ವೀರ್ ಬೇಗ್ ಗಡಿಪಾರು