ನಮ್ಮದು ಗೆಲುವಿನ ಪಡೆ: ಮಾಯಾಂಕ್ ಅಗರ್ವಾಲ್
Team Udayavani, Mar 20, 2022, 10:51 PM IST
ಹೊಸದಿಲ್ಲಿ: “ನಮ್ಮ ಫ್ರಾಂಚೈಸಿ ಈ ಬಾರಿ ಗೆಲುವಿನ ಪಡೆಯೊಂದನ್ನು ಕಟ್ಟಿದೆ. ಪ್ರಶಸ್ತಿ ಗೆಲುವಿನ ಅವಕಾಶ ಉಜ್ವಲವಾಗಿದೆ’ ಎಂದು ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕ, ಕರ್ನಾಟಕದ ಮಾಯಾಂಕ್ ಅಗರ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಪ್ರಸಕ್ತ ಋತುವಿನಲ್ಲಿ ಶಿಖರ್ ಧವನ್, ಕಾಗಿಸೊ ರಬಾಡ, ಲಿಯಮ್ ಲಿವಿಂಗ್ಸ್ಟೋನ್, ಜಾನಿ ಬೇರ್ಸ್ಟೊ, ಒಡೀನ್ ಸ್ಮಿತ್ ಅವರಂಥ ಟಿ20 ಸ್ಪೆಷಲಿಸ್ಟ್ಗಳಿಗೆ ಬಲೆ ಬೀಸಿದೆ. ಜತೆಗೆ ಆರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಪವರ್-ಹಿಟ್ಟರ್ ಶಾರೂಖ್ ಖಾನ್ ಅವರನ್ನು ಮರಳಿ ಕರೆಸಿಕೊಂಡಿದೆ.
“ಎಲ್ಲರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ, ಒತ್ತಡವನ್ನು ನಿಭಾಯಿಸಿ ನಿಲ್ಲುವಲ್ಲಿ ಯಶಸ್ವಿಯಾದರೆ ನಾವು ಪ್ರಶಸ್ತಿ ಪೈಪೋಟಿ ರೇಸ್ನಲ್ಲಿ ಓಟ ಬೆಳೆಸಲಿದ್ದೇವೆ’ ಎಂದು ಅಗರ್ವಾಲ್ ಹೇಳಿದರು.
ಅಗರ್ವಾಲ್ ಕಳೆದ 4 ಋತುಗಳಿಂದ ಪಂಜಾಬ್ ಪರ ಆಡುತ್ತಿದ್ದಾರೆ. ಕಳೆದೆರಡು ಸೀಸನ್ಗಳಲ್ಲಿ 400 ರನ್ ಪೇರಿಸಿದ್ದಾರೆ. ಜತೆಗಾರ ಹಾಗೂ ನಾಯಕ ಕೆ.ಎಲ್. ರಾಹುಲ್ ನೂತನ ಲಕ್ನೋ ತಂಡಕ್ಕೆ ತೆರಳಿದ್ದರಿಂದ ಅಗರ್ವಾಲ್ಗೆ ನಾಯಕತ್ವದ ಜವಾಬ್ದಾರಿ ಲಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ