ಕ್ರಿಕೆಟಿಗರಿಗೆ ದಂಡ ವಿಧಿಸುತ್ತಿದ್ದ ಎಂ.ಎಸ್.ಧೋನಿ!
ಅಭ್ಯಾಸ, ಸಭೆಗೆ ತಡವಾಗಿ ಬರುವ ಆಟಗಾರರಿಗೆ ದಂಡದ ಶಿಕ್ಷೆ
Team Udayavani, May 16, 2019, 9:42 AM IST
ನವದೆಹಲಿ: ಭಾರತಕ್ಕೆ ಏಕದಿನ, ಟಿ20 ವಿಶ್ವಕಪ್ ಸಹಿತ ಹಲವಾರು ಪ್ರಶಸ್ತಿ ಗೆದ್ದು ಕೂಟ್ಟ ಮಾಜಿ ನಾಯಕ ಎಂ.ಎಸ್.ಧೋನಿ ಬಗ್ಗೆ ಎಲ್ಲರಿಗೂ ಗೊತ್ತು.
ಹೌದು, ಧೋನಿ ಪ್ರತಿಭಾವಂತ, ಯಶಸ್ಸು ಧೋನಿ ಬೆನ್ನಟ್ಟಿಕೊಂಡು ಬಂದಿವೆ. ತಾಳ್ಮೆ ಎನ್ನುವ ಅಸ್ತ್ರವನ್ನೇ ಮುಂದಿಟ್ಟಿರುವ ಧೋನಿ ಮುಟ್ಟಿದ್ದೆಲ್ಲ ಚಿನ್ನ. ಕೂಲ್ ಕ್ಯಾಪ್ಟನ್ಗೆ ಸಿಟ್ಟುಬರುವುದೇ ಅಪರೂಪ. ಎಂತಹ ಒತ್ತಡವನ್ನಾದರೂ ಧೋನಿ ಬಹಳ ನಾಜೂಕಾಗಿ ನಿಭಾಯಿಸುತ್ತಾರೆ. ಅಷ್ಟು ಸಲೀಸಾಗಿ ಕಠಿಣ ಸಂದರ್ಭ ನಿರ್ವಹಿಸುವುದು ಕಷ್ಟ. ಆದರೆ ಧೋನಿಗೆ ಅದು ನೀರು ಕುಡಿದಷ್ಟೇ ಸುಲಭ. ತಂಡದ ಹಿರಿಯ ಆಟಗಾರ ಆಗಿರಲಿ ಅಥವಾ ಕಿರಿಯ ಆಟಗಾರ ಆಗಿರಲಿ, ಯಾರ ಹತ್ತಿರ ಎಷ್ಟು ಪ್ರತಿಭೆ ಇದೆ. ಅದನ್ನು ಹೇಗೆ, ಯಾವ
ಸಂದರ್ಭದಲ್ಲಿ ಹೊರಗೆ ತೆಗೆಯಬೇಕು ಎನ್ನುವ ಕಲೆ ಧೋನಿಗೆ ರಕ್ತದಲ್ಲೇ ಕರಗತ. ಹೀಗಾಗಿಯೇ ಅಭಿಮಾನಿಗಳು ಧೋನಿಯನ್ನು “ಕೂಲ್
ಕ್ಯಾಪ್ಟನ್’ ಎಂದು ಕೆರೆಯುವುದು. ಅಂತಹ ನಾಯಕ ಜೀವನದುದ್ದಕ್ಕೂ ಶಿಸ್ತನ್ನು ಅಳವಡಿಸಿಕೊಂಡಿದ್ದರು, ಅಭ್ಯಾಸಕ್ಕೆ ಆಟಗಾರರು ತಡವಾಗಿ ಬಂದಾಗ ಅದನ್ನು ತುಂಬಾ ಸ್ವಾರಸ್ಯಕರ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ಈ ಬಗ್ಗೆ ಭಾರತ ಕ್ರಿಕೆಟ್ನ ಮಾನಸಿಕ ನಿರ್ವಹಣಾ ಕೋಚ್ ಪ್ಯಾಡಿ ಅಪ್ಟನ್ ತಮ್ಮ ಪುಸ್ತಕ “ಬೇರ್ಫೋಟ್’ನಲ್ಲಿ ಬಿಚ್ಚಿಟ್ಟಿದ್ದಾರೆ.
ಧೋನಿ ಕೊಟ್ಟ ಶಿಸ್ತಿನ ಪಾಠ
ಅಪ್ಟನ್ ಹೇಳಿದ್ದು ಹೀಗೆ, ನಾನು ಮಾನಸಿಕ ನಿರ್ವಹಣಾ ಕೋಚ್ ಆಗಿ ಭಾರತ ತಂಡವನ್ನು ಕೂಡಿಕೊಂಡಿದ್ದಾಗ ಅನಿಲ್ ಕುಂಬ್ಳೆ ಟೆಸ್ಟ್ ತಂಡದ ನಾಯಕರಾಗಿದ್ದರು. ಧೋನಿ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದರು. ಆಗ ತಂಡದಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳಲಾಯಿತು. ಅಭ್ಯಾಸಕ್ಕೆ ಹಾಗೂ ತಂಡದ ಸಭೆಗಳಿಗೆ ತಡವಾಗಿ ಬಂದವರಿಗೆ ಶಿಕ್ಷೆಯ ಪ್ರಮಾಣ 10 ಸಾವಿರ ರೂ. ದಂಡ ಹಾಕಲು ನಿರ್ಧರಿಸಲಾಯಿತು. ಟೆಸ್ಟ್ ತಂಡದ ನಾಯಕ ಅನಿಲ್ ಕುಂಬ್ಳೆ ಹಾಗೂ ಎಂ.ಎಸ್.ಧೋನಿ ಇದನ್ನು ಪಾಲಿಸಿದರು. ಧೋನಿ ಭಾರತ ತಂಡ ನಾಯಕರಾಗಿದ್ದ ಸಂದರ್ಭದಲ್ಲಿ ಆಟಗಾರರು ಕಡ್ಡಾಯವಾಗಿ ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸಬೇಕಿತ್ತು. ಆಟಗಾರರು ಅಭ್ಯಾಸಕ್ಕೆ ತಡವಾಗಿ ಬಂದಾಗ ಧೋನಿ ಸಿಟ್ಟಿನಿಂದ ಕೂಗುತ್ತಿರಲಿಲ್ಲ. ಬದಲಿಗೆ 10 ಸಾವಿರ ರೂಪಾಯಿ ಶಿಕ್ಷೆಯನ್ನು ಮರು ಮಾತಿಲ್ಲದೆ ಒಪ್ಪಬೇಕಾಗಿತ್ತು. ಹೀಗಾಗಿ ಯಾರೂ ತಡ ಮಾಡುತ್ತಿರಲಿಲ್ಲ ಎಂದು ಅಪ್ಟನ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ