ಕ್ರಿಕೆಟಿಗರಿಗೆ ದಂಡ ವಿಧಿಸುತ್ತಿದ್ದ ಎಂ.ಎಸ್‌.ಧೋನಿ!

ಅಭ್ಯಾಸ, ಸಭೆಗೆ ತಡವಾಗಿ ಬರುವ ಆಟಗಾರರಿಗೆ ದಂಡದ ಶಿಕ್ಷೆ

Team Udayavani, May 16, 2019, 9:42 AM IST

dhoni

ನವದೆಹಲಿ: ಭಾರತಕ್ಕೆ ಏಕದಿನ, ಟಿ20 ವಿಶ್ವಕಪ್‌ ಸಹಿತ ಹಲವಾರು ಪ್ರಶಸ್ತಿ ಗೆದ್ದು ಕೂಟ್ಟ ಮಾಜಿ ನಾಯಕ ಎಂ.ಎಸ್‌.ಧೋನಿ ಬಗ್ಗೆ ಎಲ್ಲರಿಗೂ ಗೊತ್ತು.

ಹೌದು, ಧೋನಿ ಪ್ರತಿಭಾವಂತ, ಯಶಸ್ಸು ಧೋನಿ ಬೆನ್ನಟ್ಟಿಕೊಂಡು ಬಂದಿವೆ. ತಾಳ್ಮೆ ಎನ್ನುವ ಅಸ್ತ್ರವನ್ನೇ ಮುಂದಿಟ್ಟಿರುವ ಧೋನಿ ಮುಟ್ಟಿದ್ದೆಲ್ಲ ಚಿನ್ನ. ಕೂಲ್‌ ಕ್ಯಾಪ್ಟನ್‌ಗೆ ಸಿಟ್ಟುಬರುವುದೇ ಅಪರೂಪ. ಎಂತಹ ಒತ್ತಡವನ್ನಾದರೂ ಧೋನಿ ಬಹಳ ನಾಜೂಕಾಗಿ ನಿಭಾಯಿಸುತ್ತಾರೆ. ಅಷ್ಟು ಸಲೀಸಾಗಿ ಕಠಿಣ ಸಂದರ್ಭ ನಿರ್ವಹಿಸುವುದು ಕಷ್ಟ. ಆದರೆ ಧೋನಿಗೆ ಅದು ನೀರು ಕುಡಿದಷ್ಟೇ ಸುಲಭ. ತಂಡದ ಹಿರಿಯ ಆಟಗಾರ ಆಗಿರಲಿ ಅಥವಾ ಕಿರಿಯ ಆಟಗಾರ ಆಗಿರಲಿ, ಯಾರ ಹತ್ತಿರ ಎಷ್ಟು ಪ್ರತಿಭೆ ಇದೆ. ಅದನ್ನು ಹೇಗೆ, ಯಾವ
ಸಂದರ್ಭದಲ್ಲಿ ಹೊರಗೆ ತೆಗೆಯಬೇಕು ಎನ್ನುವ ಕಲೆ ಧೋನಿಗೆ ರಕ್ತದಲ್ಲೇ ಕರಗತ. ಹೀಗಾಗಿಯೇ ಅಭಿಮಾನಿಗಳು ಧೋನಿಯನ್ನು “ಕೂಲ್‌
ಕ್ಯಾಪ್ಟನ್‌’ ಎಂದು ಕೆರೆಯುವುದು. ಅಂತಹ ನಾಯಕ ಜೀವನದುದ್ದಕ್ಕೂ ಶಿಸ್ತನ್ನು ಅಳವಡಿಸಿಕೊಂಡಿದ್ದರು, ಅಭ್ಯಾಸಕ್ಕೆ ಆಟಗಾರರು ತಡವಾಗಿ ಬಂದಾಗ ಅದನ್ನು ತುಂಬಾ ಸ್ವಾರಸ್ಯಕರ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ಈ ಬಗ್ಗೆ ಭಾರತ ಕ್ರಿಕೆಟ್‌ನ ಮಾನಸಿಕ ನಿರ್ವಹಣಾ ಕೋಚ್‌ ಪ್ಯಾಡಿ ಅಪ್ಟನ್‌ ತಮ್ಮ ಪುಸ್ತಕ “ಬೇರ್‌ಫೋಟ್‌’ನಲ್ಲಿ ಬಿಚ್ಚಿಟ್ಟಿದ್ದಾರೆ.

ಧೋನಿ ಕೊಟ್ಟ ಶಿಸ್ತಿನ ಪಾಠ
ಅಪ್ಟನ್‌ ಹೇಳಿದ್ದು ಹೀಗೆ, ನಾನು ಮಾನಸಿಕ ನಿರ್ವಹಣಾ ಕೋಚ್‌ ಆಗಿ ಭಾರತ ತಂಡವನ್ನು ಕೂಡಿಕೊಂಡಿದ್ದಾಗ ಅನಿಲ್‌ ಕುಂಬ್ಳೆ ಟೆಸ್ಟ್‌ ತಂಡದ ನಾಯಕರಾಗಿದ್ದರು. ಧೋನಿ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದರು. ಆಗ ತಂಡದಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳಲಾಯಿತು. ಅಭ್ಯಾಸಕ್ಕೆ ಹಾಗೂ ತಂಡದ ಸಭೆಗಳಿಗೆ ತಡವಾಗಿ ಬಂದವರಿಗೆ ಶಿಕ್ಷೆಯ ಪ್ರಮಾಣ 10 ಸಾವಿರ ರೂ. ದಂಡ ಹಾಕಲು ನಿರ್ಧರಿಸಲಾಯಿತು. ಟೆಸ್ಟ್‌ ತಂಡದ ನಾಯಕ ಅನಿಲ್‌ ಕುಂಬ್ಳೆ ಹಾಗೂ ಎಂ.ಎಸ್‌.ಧೋನಿ ಇದನ್ನು ಪಾಲಿಸಿದರು. ಧೋನಿ ಭಾರತ ತಂಡ ನಾಯಕರಾಗಿದ್ದ ಸಂದರ್ಭದಲ್ಲಿ ಆಟಗಾರರು ಕಡ್ಡಾಯವಾಗಿ ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸಬೇಕಿತ್ತು. ಆಟಗಾರರು ಅಭ್ಯಾಸಕ್ಕೆ ತಡವಾಗಿ ಬಂದಾಗ ಧೋನಿ ಸಿಟ್ಟಿನಿಂದ ಕೂಗುತ್ತಿರಲಿಲ್ಲ. ಬದಲಿಗೆ 10 ಸಾವಿರ ರೂಪಾಯಿ ಶಿಕ್ಷೆಯನ್ನು ಮರು ಮಾತಿಲ್ಲದೆ ಒಪ್ಪಬೇಕಾಗಿತ್ತು. ಹೀಗಾಗಿ ಯಾರೂ ತಡ ಮಾಡುತ್ತಿರಲಿಲ್ಲ ಎಂದು ಅಪ್ಟನ್‌ ವಿವರಿಸಿದ್ದಾರೆ.

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.