ಭಾರತದ ಟಿ20 ತಂಡದಲ್ಲಿ ಈ ಎಡಗೈ ಆಟಗಾರ ಇರಲೇಬೇಕು: ಸಲಹೆ ನೀಡಿದ ಗಿಲ್ ಕ್ರಿಸ್ಟ್
Team Udayavani, Sep 23, 2022, 11:50 AM IST
ಮುಂಬೈ: ಭಾರತದ ಆಡುವ ಬಳಗದಲ್ಲಿ ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಗಾಗಿ ರಿಷಬ್ ಪಂತ್ ಸ್ಥಾನ ಪಡೆಯಬೇಕು ಎಂದು ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ ಆಡಮ್ ಗಿಲ್ಕ್ರಿಸ್ಟ್ ಹೇಳಿದ್ದಾರೆ.
ಅಕ್ಟೋಬರ್ 16 ರಿಂದ ಪ್ರಾರಂಭವಾಗುವ ವಿಶ್ವಕಪ್ ಗೆ ಪಂತ್ ಆಯ್ಕೆಯಾಗಿದ್ದರೂ, ತಂಡದ ಆಡುವ ಬಳಗದಲ್ಲಿ ಸ್ಥಿರವಾಗಿ ಸ್ಥಾನ ಪಡೆಯುತ್ತಿಲ್ಲ. ಸದ್ಯ ದಿನೇಶ್ ಕಾರ್ತಿಕ್ ಅವರೇ ಮೊದಲ ಆದ್ಯತೆಯ ವಿಕೆಟ್ ಕೀಪರಾಗಿ ಆಯ್ಕೆಯಾಗುತ್ತಿದ್ದಾರೆ.
ಟಿ20 ವಿಶ್ವಕಪ್ಗೆ ರವೀಂದ್ರ ಜಡೇಜಾ ಲಭ್ಯವಿಲ್ಲದ ಕಾರಣ, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಲ್ಲಿ ಇಬ್ಬರು ವಿಕೆಟ್ ಕೀಪರ್ ಗಳನ್ನು ಆಡಿಸುವ ಅವಕಾಶ ಕಡಿಮೆಯಿದೆ. ಆದರೆ ಈ ಇಬ್ಬರನ್ನೂ ಆಡಿಸುವುದು ಕೆಟ್ಟ ಆಲೋಚನೆಯಲ್ಲ ಎಂದು ಗಿಲ್ ಕ್ರಿಸ್ಟ್ ಹೇಳಿದರು.
ಇದನ್ನೂ ಓದಿ:PFI ಕಚೇರಿ ಮೇಲೆ ದಾಳಿ ಬೆನ್ನಲ್ಲೇ ಕೊಯಂಬತ್ತೂರು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
“ರಿಷಬ್ ಪಂತ್ ಧೈರ್ಯವಂತ. ಎಂತಹ ಬೌಲಿಂಗ್ ದಾಳಿಯನ್ನು ಅವರು ಧೈರ್ಯದಿಂದ ಎದುರಿಸುತ್ತಾರೆ. ನನ್ನ ಪ್ರಕಾರ ಪಂತ್ ಆಡಬೇಕು. ಭಾರತ ಇಬ್ಬರನ್ನೂ ಆಡಿಸಬಹುದು” ಎಂದು ಗಿಲ್ಲಿ ಹೇಳಿದ್ದಾರೆ.