
ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ನೂತನ ನಾಯಕನ ನೇಮಕ: ಸ್ಮಿತ್ ಗೆ ಉಪನಾಯಕ ಪಟ್ಟ
Team Udayavani, Nov 26, 2021, 8:38 AM IST

ಮೆಲ್ಬೋರ್ನ್: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ಟಿಮ್ ಪೇನ್ ರಾಜೀನಾಮೆ ನೀಡಿದ ಬಳಿಕ ನೂತನ ನಾಯಕನ ನೇಮಕವಾಗಿದೆ. ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರನ್ನು ಆಸೀಸ್ ಟೆಸ್ಟ್ ತಂಡಕ್ಕೆ ನಾಯಕನನ್ನಾಗಿ ನೇಮಿಸಿದ್ದು, ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ.
“ಐದು ವ್ಯಕ್ತಿಗಳ ಆಯ್ಕೆ ಬೋರ್ಡ್ ನೊಂದಿಗೆ ಸಂದರ್ಶನ ಪ್ರಕ್ರಿಯೆಯ ನಂತರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಪೂರ್ಣ ಮಂಡಳಿಯಿಂದ ಅನುಮೋದನೆ ಪಡೆದ ನಂತರ, ಕಮಿನ್ಸ್ ಇಂದು ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾದ ಪುರುಷರ ಟೆಸ್ಟ್ ತಂಡದ ಪೂರ್ಣಾವಧಿಯ ನಾಯಕರಾದ ಮೊದಲ ವೇಗದ ಬೌಲರ್ ಮತ್ತು ರಿಚಿ ಬೆನಾಡ್ ರ ಬಳಿಕ ಯಾವುದೇ ರೀತಿಯ ತಂಡದ ನಾಯಕರಾದ ಮೊದಲ ಬೌಲರ್ ಆಗಿದ್ದಾರೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಇಂಡೋನೇಶ್ಯ ಓಪನ್: ಕ್ವಾರ್ಟರ್ ಫೈನಲ್ಗೆ ಸಿಂಧು
ನಂ.1 ಟೆಸ್ಟ್ ಬೌಲರ್ ಆಗಿರುವ ಕಮಿನ್ಸ್ ಅವರು “ಆಶಸ್ಗಿಂತ ಮೊದಲು ಟೆಸ್ಟ್ ನಾಯಕನ ಪಾತ್ರವನ್ನು ಸ್ವೀಕರಿಸುವುದು ನನಗೆ ಗೌರವ” ಎಂದು ಹೇಳಿದ್ದಾರೆ.
The 47th captain of the Australian men’s Test cricket team! @patcummins30 ?? pic.twitter.com/bM4QefTATt
— Cricket Australia (@CricketAus) November 26, 2021
“ಕಳೆದ ಕೆಲವು ವರ್ಷಗಳಲ್ಲಿ ಟಿಮ್ ಪೇನ್ ಅವರು ತಂಡಕ್ಕೆ ನೀಡಿದ ಅದೇ ನಾಯಕತ್ವವನ್ನು ನಾನು ನೀಡಬಹುದೆಂದು ನಾನು ಭಾವಿಸುತ್ತೇನೆ” ಎಂದು ಕಮಿನ್ಸ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೇತನ್- ನಿಕಿನ್ ಜೋಸ್ ಭರ್ಜರಿ ಶತಕ: ನಮೀಬಿಯಾ ವಿರುದ್ಧ ಕರ್ನಾಟಕ ರನ್ ಮಳೆ

WTC Final ಪಂದ್ಯಕ್ಕೂ ಮೊದಲು ಆಸೀಸ್ ಗೆ ಆಘಾತ: ಸ್ಟಾರ್ ಬೌಲರ್ ತಂಡದಿಂದ ಹೊರಕ್ಕೆ

ಆಸ್ಟ್ರೇಲಿಯಾಗೆ ಹೋಲಿಸಿದರೆ ಭಾರತದ ಬೌಲಿಂಗ್….: Greg Chappell

Ashes Test: ಮೊದಲೆರಡು ಪಂದ್ಯಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್

Sweet Mango; ಭರ್ಜರಿ ಬ್ಯಾಟಿಂಗ್ ಮಾಡಿದ ನವೀನ್ ಉಲ್ ಹಕ್
MUST WATCH

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
ಹೊಸ ಸೇರ್ಪಡೆ

Odisha train ದುರಂತ; ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು:ಅಶ್ವಿನಿ ವೈಷ್ಣವ್

ಸಣ್ಣ ಖಾತೆ- ದೊಡ್ಡ ಖಾತೆ ಎಂಬುದಿಲ್ಲ: ಶರಣಬಸಪ್ಪ ದರ್ಶನಾಪುರ

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

Belagavi-ದೆಹಲಿ, ಶಿರಡಿಗೆ ವಿಮಾನ ಸಂಚಾರ ಆರಂಭಿಸಿ

Bengaluru 1,500 ಕ್ಕೂ ಹೆಚ್ಚು ರೈಲು ಪ್ರಯಾಣಿಕರ ಪರದಾಟ ; ಸರಕಾರದ ನೆರವು