![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಟಿ 20: ರಾಹುಲ್ ಶತಕ ;ಇಂಗ್ಲೆಂಡ್ ವಿರುದ್ಧ ಭಾರತ ಶುಭಾರಂಭ
Team Udayavani, Jul 4, 2018, 11:44 AM IST
![556.jpg](https://www.udayavani.com/wp-content/uploads/2018/07/4/556.jpg)
ಮ್ಯಾಂಚೆಸ್ಟರ್: ಆರಂಭಿಕ ಕೆ.ಎಲ್. ರಾಹುಲ್ ಅವರ ಅಜೇಯ ಶತಕ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಐದು ವಿಕೆಟ್ ಗೊಂಚಲಿನ ಸಹಾಯದಿಂದ ಭಾರತ ತಂಡ, ಮಂಗಳವಾರ ನಡೆದ
ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ 8 ವಿಕೆಟ್ಗಳ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಪೇರಿ ಸಿತ್ತು. ಈ ಮೊತ್ತ ಬೆನ್ನಟ್ಟಿದ ಭಾರತ, 18.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಗೆಲುವಿನ ಗುರಿ ಮುಟ್ಟಿತು.
ಚೇತರಿಕೆಯ ಆಟ
ಇಂಗ್ಲೆಂಡ್ ನೀಡಿ ದ ಸವಾಲನ್ನು ಮೆಟ್ಟಲು ಕಣ ಕ್ಕಿ ಳಿದ ಭಾರತ, ಆರಂಭಿಕ ಶಿಖರ್ ಧವನ್ ಅವ ರನ್ನು ಬೇಗನೇ ಕಳೆದು ಕೊಂಡಿತಾದರೂ, ಆನಂತರ ಕೆ.ಎಲ್. ರಾಹುಲ್, ಮತ್ತೂಬ್ಬ ಆರಂಭಿಕ ರೋಹಿತ್ ಶರ್ಮಾ 2ನೇ ವಿಕೆ ಟ್ಗೆ 123 ರನ್ ಪೇರಿಸಿ ಸ್ಥಿರತೆ ತಂದರು. ಆನಂತರ, ಮೂರನೇ ವಿಕೆ ಟ್ಗೆ ಜತೆಯಾದ ರಾಹುಲ್- ವಿರಾಟ್ ಕೊಹ್ಲಿ 33 ರನ್ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. ಈ ವೇಳೆ, ರಾಹುಲ್ ತಮ್ಮ ಟಿ20 ಅಂತಾ ರಾಷ್ಟ್ರೀಯ ವೃತ್ತಿ ಜೀವನದ 2ನೇ ಶತಕ ಗಳಿಸಿದರು.
ಕುಸಿದ ಮಧ್ಯಮ ಕ್ರಮಾಂಕ
ಮೊದ ಲಿಗೆ ಟಾಸ್ ಗೆದ್ದಿದ್ದ ಭಾರತ ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ್ದರಿಂದಾಗಿ ಇಂಗ್ಲೆಂಡ್ಗೆ ಮೊದಲು ಬ್ಯಾಟಿಂಗ್ಗೆ ಇಳಿಯುವ ಅವ ಕಾಶ ಸಿಕ್ಕಿತು. ಆರಂಭಿ ಕ ರಾದ ಜೇಸನ್ ರಾಯ್, ಜೋ ಬಟ್ಲರ್ ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟ್ಸ್ ಮನ್ ಸಹ ಗಟ್ಟಿ ಯಾಗಿ ನಿಲ್ಲ ಲಿಲ್ಲ. ಮಧ್ಯಮ ಕ್ರಮಾಂಕ ವಂತೂ ಕುಲ ದೀಪ್ ಯಾದವ್ ಸ್ಪಿನ್ ಮೋಡಿಗೆ ತತ್ತರಿಸಿತು.
ಕುಲ ದೀಪ್ ಯಾದವ್ 5 ವಿಕೆಟ್ (ಬಟ್ಲರ್,ಹೇಲ್ಸ್, ಮಾರ್ಗನ್, ಬೇರ್ಸ್ಟೋ, ರೂಟ್) ಪಡೆದರೆ,ವೇಗಿಗಳಾದ ಉಮೇಶ್ ಯಾದವ್ 2(ರಾಯ್,ಜೋರ್ಡನ್) ಮತ್ತು ಹಾರ್ದಿಕ್ ಪಾಂಡ್ಯ 1 ವಿಕೆಟ್ (ಮೊಯೀನ್ ಅಲಿ) ಗಳಿಸಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ 20 ಓವ ರ್ಗೆ 159/8 (ಜಾಸ್ ಬಟ್ಲರ್ 69, ಜೇಸನ್ ರಾಯ್ 30, ಕುಲದೀಪ್ 24ಕ್ಕೆ 5), ಭಾರತ 18.2 ಓವ ರ್ಗೆ 163/2 (ಕೆ.ಎಲ್. ರಾಹುಲ್ 101*, ರೋಹಿತ್ 32, ರಶೀದ್ 25ಕ್ಕೆ 1).
ಕೊಹ್ಲಿ ವಿಶ್ವ ದಾಖಲೆ
ಭಾರತ ನಾಯಕ ವಿರಾಟ್ ಕೊಹ್ಲಿ (20*ರನ್)ಟಿ20 ಮಾದ ರಿ ಯಲ್ಲಿ ವೇಗವಾಗಿ 2000 ರನ್ ಗಡಿ ದಾಟಿದ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು. ಈವರೆಗೆ ನ್ಯೂಜಿ ಲೆಂಡ್ನ ಮಾರ್ಟಿನ್ ಗುಪ್ಟಿಲ್ (73 ಇನಿಂಗ್ಸ್), ಬ್ರೆಂಡನ್ ಮೆಕ ಲಂ (70) ಇತ್ತೀಚೆಗೆ ಶೋಯೆಬ್ ಮಲಿಕ್ (93) 2000 ರನ್ ಗಡಿ ದಾಟಿದ್ದಾರೆ. ಆದರೆ, ಕೊಹ್ಲಿ 56 ಇನಿಂಗ್ಸ್ಗಳಿಂದ ಕೊಹ್ಲಿ ಈ ಸಾಧನೆ ಮಾಡಿ ಅತಿ ವೇಗವಾಗಿ 2000 ರನ್ ಗಡಿ ದಾಟಿದ ಹೆಗ್ಗಳಿಕೆಗೆ ಪಾತ್ರರಾಗಿ ದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.