Pro Kabaddi-10; ಗುಜರಾತ್ಗೆ ಆಘಾತ: ಪಾಟ್ನಾ ಜಯಭೇರಿ
Team Udayavani, Dec 7, 2023, 10:43 PM IST
ಅಹ್ಮದಾಬಾದ್: ಸತತ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಉತ್ಸಾಹದಲ್ಲಿದ್ದ ಗುಜರಾತ್ ಜೈಂಟ್ಸ್ ತಂಡವು ತವರಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡದೆದುರು 30-33 ಅಂಕಗಳಿಂದ ಸೋತು ಆಘಾತಕ್ಕೆ ಒಳಗಾಯಿತು. ಆರಂಭದಿಂದ ಕೊನೆಯ ತನಕವೂ ಗುಜರಾತ್ಗೆ ಮೇಲುಗೈ ಸಾಧಿಸಲು ಆಗಲೇ ಇಲ್ಲ.
ಪಂದ್ಯದ ಆರಂಭದಿಂದಲೇ ಗುಜರಾತ್ ತಂಡವನ್ನು ಹಿಂದಿಕ್ಕಲು ಯಶಸ್ವಿಯಾದ ಪಾಟ್ನಾ ಪೈರೇಟ್ಸ್ ತಂಡವು ಮುನ್ನಡೆ ಸಾಧಿಸುತ್ತ ಹೋಯಿತು. ಅಂತಿಮ ಹಂತದಲ್ಲಿ ಗುಜರಾತ್ ತೀವ್ರ ಹೋರಾಟ ನೀಡಿತ್ತು. ಇದರಿಂದ ಗೆಲುವಿನ ಸನಿಹಕ್ಕೆ ಬಂತು. ಆದರೆ ಅಂತಿಮವಾಗಿ ಪಾಟ್ನಾ 33-30 ಅಂಕಗಳಿಂದ ಜಯಭೇರಿ ಬಾರಿಸಿತು. ಪಾಟ್ನಾ ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ತಂಡವನ್ನು ಭಾರೀ ಅಂತರದಿಂದ ಸೋಲಿಸಿತ್ತು.
ಗುಜರಾತ್ ತಂಡ ರೈಡ್ನಿಂದ ಹೆಚ್ಚಿನ ಅಂಕ ಗಳಿಸಿದ್ದರೆ ಪಾಟ್ನಾ ಟ್ಯಾಕಲ್ ಮೂಲಕ ಗುಜರಾತ್ ಆಟಗಾರರನ್ನು ಕಟ್ಟಿ ಹಾಕಲು ಯಶಸ್ವಿಯಾಯಿತು. ಪಾಟ್ನಾ ಟ್ಯಾಕಲ್ ಮೂಲಕ 12 ಅಂಕ ಪಡೆಯಿತು.
ಬೆಂಗಾಲ್-ಜೈಪುರ ಪಂದ್ಯ ಟೈ
ಈ ಮೊದಲು ನಡೆದ ಬೆಂಗಾಲ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ ನಡುವಣ ಪಂದ್ಯವು 28-28 ಅಂಕ ಗಳಿಂದ ರೋಚಕವಾಗಿ ಟೈಗೊಂಡಿತು. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಪ್ರತಿಯೊಂದು ಅಂಕಕ್ಕೂ ತೀವ್ರವಾಗಿ ಹೋರಾಡಿದರು.
ಬೆಂಗಾಲ್ ತಂಡವು ರೈಡಿಂಗ್ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿತು. ಮಣಿಂದರ್, ವೈಭವ್, ನಿತಿನ್ ಮತ್ತು ಶ್ರೀಕಾಂತ್ ಹೆಚ್ಚಿನ ಅಂಕ ಗಳಿ ಸಲು ಪ್ರಯತ್ನಿಸಿದರೆ ಜೈಪುರ ಪರ ಅರ್ಜುನ್ ದೇಸ್ವಾಲ್ ರೈಡಿಂಗ್ನಲ್ಲಿ ಆರಂಕ ಪಡೆದರು. ಟ್ಯಾಕಲ್ನಲ್ಲಿಯೂ ಜೈಪುರ ಮೇಲುಗೈ ಸಾಧಿಸಿ ಏಳಂಕ ಪಡೆಯಿತು.
ಇಂದಿನಿಂದ ಬೆಂಗಳೂರು ಚರಣ
ಶುಕ್ರವಾರದಿಂದ ಬೆಂಗಳೂರು ಚರಣದ ಪಂದ್ಯಗಳು ಆರಂಭವಾಗ ಲಿದೆ. ಕೊರೊನಾ ಬಳಿಕ ಈ ವರ್ಷದಿಂದ ಈ ಲೀಗ್ನಲ್ಲಿ ಭಾಗವಹಿಸುತ್ತಿರುವ ಪ್ರತಿಯೊಂದು ತಂಡಗಳ ತವರಿನ ಸ್ಥಳದಲ್ಲಿ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯಗಳು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಡಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯವು ಯು ಮುಂಬಾ ಮತ್ತು ಪುನೇರಿ ಪಲ್ಟಾನ್ಸ್ ನಡುವೆ ನಡೆಯಲಿದೆ.
ಇಂದಿನ ಪಂದ್ಯ
1. ಬೆಂಗಾಲ್-ಜೈಪುರ್
l ಆರಂಭ: ರಾತ್ರಿ 8.00
2. ಗುಜರಾತ್-ಪಾಟ್ನಾ
l ಆರಂಭ: ರಾತ್ರಿ 9.00
l ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ