ಪ್ರೊ ಕಬಡ್ಡಿ ಹಣಾಹಣಿ: ಬೆಂಗಾಲ್ ವಾರಿಯರ್ ಗೆ ಭರ್ಜರಿ ಗೆಲುವು
Team Udayavani, Nov 12, 2022, 10:41 PM IST
ಪುಣೆ: ಶನಿವಾರದ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಬೆಂಗಾಲ್ ವಾರಿಯರ್ 46-27 ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ತನ್ನ ಗೆಲುವಿನ ಸಂಖ್ಯೆಯನ್ನು 6ಕ್ಕೆ ಏರಿಸಿಕೊಂಡಿದೆ.
ಬೆಂಗಾಲ್ ಪರ ಮಣಿಂದರ್ ಸಿಂಗ್, ಶ್ರೀಕಾಂತ್ ಜಾಧವ್ ಭರ್ಜರಿ ದಾಳಿ ನಡೆಸಿದರು. ಗುಜರಾತ್ ಪರ ಚಂದ್ರನ್ ರಂಜಿತ್ ಉತ್ತಮ ಆಟವಾಡಿದರು.
ಮಣಿಂದರ್ 15 ದಾಳಿಗಳಲ್ಲಿ 9 ಬಾರಿ ಯಶಸ್ವಿಯಾದರು. ಒಟ್ಟು 12 ಅಂಕ ಪಡೆದರು. ಶ್ರೀಕಾಂತ್ ಜಾಧವ್ ಇನ್ನೂ ಪರಿಣಾಮಕಾರಿಯಾಗಿದ್ದರು. ಅವರು 12 ದಾಳಿಗಳಲ್ಲಿ 9 ಬಾರಿ ಯಶಸ್ವಿ ಪ್ರದರ್ಶನ ನೀಡಿ 10 ಅಂಕ ಸಂಪಾದಿಸಿದರು. ಶಕ್ತಿವೇಲ್ ರಕ್ಷಣೆಯಲ್ಲಿ ಯಶಸ್ವಿಯಾದರು. ಎದುರಾಳಿ ಯನ್ನು ಕೆಡವಿಕೊಳ್ಳಲು ಅವರು 7 ಬಾರಿ ಯತ್ನಿಸಿದರು. ಇದರಲ್ಲಿ 4 ಬಾರಿ ಯಶಸ್ವಿಯಾಗಿ 4 ಅಂಕ ಪಡೆದರು. ಸುರೇಂದರ್ ನಾಡಾ 3 ಅಂಕ ಪಡೆದರು.
ಗುಜರಾತ್ ತಂಡದ ಪರ ಚಂದ್ರನ್ ರಂಜಿತ್ 14 ಬಾರಿ ದಾಳಿ ನಡೆಸಿ 8 ಅಂಕ ಪಡೆದರು. ರಕ್ಷಣೆಯಲ್ಲೂ ಮಿಂಚಿ ಒಂದು ಅಂಕ ಪಡೆದರು. ಇವರನ್ನು ಹೊರತುಪಡಿಸಿ ರಾಕೇಶ್ (5) ಒಬ್ಬರೇ ಯಶಸ್ವಿಯಾದದ್ದು. ಇದು 12 ಪಂದ್ಯಗಳಲ್ಲಿ ಗುಜರಾತ್ಗೆ ಎದುರಾದ 6ನೇ ಆಘಾತ.
ದಿನದ ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾಸ್ 41-30 ಅಂತರದಿಂದ ತೆಲುಗು ಟೈಟಾನ್ಸ್ಗೆ ಸೋಲುಣಿಸಿತು. ಇದು ಟೈಟಾನ್ಸ್ಗೆ 13 ಪಂದ್ಯಗಳಲ್ಲಿ ಎದುರಾದ 12ನೇ ಆಘಾತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ