ಪ್ರೊ ಕಬಡ್ಡಿ ಲೀಗ್: ಪುನೇರಿ ಪಲ್ಟಾನ್ಸ್, ಹರಿಯಾಣಕ್ಕೆ ಜಯ
Team Udayavani, Oct 25, 2022, 11:46 PM IST
ಬೆಂಗಳೂರು: ಪ್ರೊ ಕಬಡ್ಡಿ ಲೀಗ್ನ ಮಂಗಳವಾರದ ಪಂದ್ಯಗಳಲ್ಲಿ ಪುನೇರಿ ಪಲ್ಟಾನ್ಸ್ ಮತ್ತು ಹರಿಯಾಣ ಸ್ಟೀಲರ್ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲ ಪಂದ್ಯದಲ್ಲಿ ರೈಡರ್ ಅಸ್ಲಾಂ ಇನಾಂದರ್ ಅವರ ಉತ್ತಮ ಆಟದಿಂದಾಗಿ ಪುನೇರಿ ಪಲ್ಟಾನ್ಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು 32-24 ಅಂಕಗಳಿಂದ ಸೋಲಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು 43-24 ಅಂಕಗಳಿಂದ ಮಣಿಸಿತು. ಮೀತು ಶರ್ಮ ರೈಡ್ ಮೂಲಕ 13 ಅಂಕ ಪಡೆದು ತಂಡದ ಗೆಲುವಿಗೆ ಉತ್ತಮ ಕೊಡುಗೆ ಸಲ್ಲಿಸಿದರು.
ಪುನೇರಿ ಮತ್ತು ಜೈಪುರ ನಡುವಣ ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತ್ತು. ಪ್ರತಿಯೊಂದು ಅಂಕ ಗಳಿಸಲು ಎರಡೂ ತಂಡಗಳ ಆಟಗಾರರು ಒದ್ದಾಡಿದರು. ಇನಾಂದರ್ ಅವರ ವೇಗದ ಚಲನೆ ಮತ್ತು ಎದುರಾಳಿ ಜೈಪುರದ ರಕ್ಷಣಾ ಆಟಗಾರರನ್ನು ವಂಚಿಸಿ ಅಂಕ ಗಳಿಸಿದ ರೀತಿ ಅಮೋಘವಾಗಿತ್ತು. ಪಂದ್ಯದ ಮೊದಲ ಅವಧಿ ಮುಗಿದಾಗ ಪುನೇರಿ 17-11 ರಿಂದ ಮುನ್ನಡೆಯಲ್ಲಿತ್ತು.
ದ್ವಿತೀಯ ಅವಧಿಯಲ್ಲಿ ಜೈಪುರ ಭರ್ಜರಿಯಾಗಿ ಆಡಿತು. ಅರ್ಜುನ್ ದೇಶ್ವಾಲ್ ಮತ್ತು ರಾಹುಲ್ ಚೌಧರಿ ಉತ್ತಮವಾಗಿ ರೈಡ್ ಮಾಡಿ ಅಂಕ ಗಳಿಸಲು ಪ್ರಯತ್ನಿಸಿ ಪುನೇರಿ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಿದರು. ಗೌರವ್ ಖತ್ರಿ ಅವರ ಅಮೋಘ ಆಟದಿಂದ ಪುನೇರಿ ಮೇಲುಗೈ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್