ಇಂದಿನಿಂದ ಸಿಂಗಾಪುರ ಓಪನ್ : ಪಿ.ವಿ. ಸಿಂಧು, ಪ್ರಣಯ್ ನೇತೃತ್ವ
Team Udayavani, Jul 12, 2022, 6:45 AM IST
ಸಿಂಗಾಪುರ: ಶಟ್ಲರ್ಗಳಾದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಫಾರ್ಮ್ ನಲ್ಲಿರುವ ಎಚ್.ಎಸ್. ಪ್ರಣಯ್ ಅವರು ಮಂಗಳವಾರದಿಂದ ಆರಂಭವಾಗುವ ಸಿಂಗಾಪುರ ಓಪನ್ ಸೂಪರ್ 500 ಕೂಟದಲ್ಲಿ ಭಾರತದ ಸವಾಲಿನ ನೇತೃತ್ವ ವಹಿಸಲಿದ್ದಾರೆ.
ಈ ತಿಂಗಳಾಂತ್ಯದಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಆರಂಭವಾಗುವ ಕಾಮನ್ವೆಲ್ತ್ ಗೇಮ್ಸ್ ಮೊದಲು ಇದು ಭಾರತೀಯ ಶಟ್ಲರ್ಗಳಿಗೆ ಲಭಿಸಲಿರುವ ಕೊನೆಯ ಕೂಟವಾಗಿದೆ. ಹೀಗಾಗಿ ಆಟಗಾರರೆಲ್ಲರೂ ಈ ಕೂಟದಲ್ಲಿ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ.
ಸಿಂಧು (3) ಮತ್ತು ಕಿದಂಬಿ ಶ್ರೀಕಾಂತ್ (7) ಈ ಕೂಟದ ಮುಖ್ಯ ಡ್ರಾದಲ್ಲಿ ಕಾಣಿಸಿಕೊಂಡ ಶ್ರೇಯಾಂಕ ಹೊಂದಿರುವ ಭಾರತದ ಆಟಗಾರರಾಗಿದ್ದಾರೆ. ವಿಶ್ವದ 7ನೇ ರ್ಯಾಂಕಿನ ಸಿಂಧು ಬೆಲ್ಜಿಯಂನ ಲಿಯನ್ನೆ ತಾನ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕ್ವಾರ್ಟರ್ಫೈನಲ್ನಲ್ಲಿ ಅವರು ಥಾಯ್ಲೆಂಡಿನ ಬುಸಾನನ್ ಒಂಗ್ಬಾಮೃಂಗಪನ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಇವರಿಬ್ಬರ ಮುಖಾಮುಖೀಯಲ್ಲಿ ಸಿಂಧು 17-1 ಜಯ ಸೋಲಿನ ದಾಖಲೆ ಹೊಂದಿದ್ದಾರೆ.
ಸೈನಾ ನೆಹ್ವಾಲ್ ತನ್ನ ದೇಶದವರೇ ಆದ ಮಾಳವಿಕಾ ಬನ್ಸೂದ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಅವರು ಹಿ ಬಿಂಗ್ ಜಿಯಾವೊ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಇಂಡೋನೇಶ್ಯ ಓಪನ್ ಬಳಿಕ ಬ್ಯಾಡ್ಮಿಂಟನ್ ರಂಗಕ್ಕೆ ಮರಳಿರುವ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಅರ್ಹತಾ ಆಟಗಾರನನ್ನು ಎದು ರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ