ರಣಜಿ ಟ್ರೋಫಿ: ಇನ್ನಿಂಗ್ಸ್‌ ಜಯದತ್ತ ಕರ್ನಾಟಕ ದಾಪುಗಾಲು


Team Udayavani, Feb 2, 2023, 9:17 PM IST

ರಣಜಿ ಟ್ರೋಫಿ: ಇನ್ನಿಂಗ್ಸ್‌ ಜಯದತ್ತ ಕರ್ನಾಟಕ ದಾಪುಗಾಲು

ಬೆಂಗಳೂರು: ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 490 ರನ್ನುಗಳ ಅಮೋಘ ಮುನ್ನಡೆ ಗಳಿಸಿದ ಕರ್ನಾಟಕ ಇನ್ನಿಂಗ್ಸ್‌ ಜಯವನ್ನು ಖಾತ್ರಿಗೊಳಿಸಿದೆ.

ಉತ್ತರಾಖಂಡದ 116 ರನ್‌ಗಳ ಸಣ್ಣ ಮೊತ್ತಕ್ಕೆ ಉತ್ತರವಾಗಿ ಕರ್ನಾಟಕ 606 ರನ್‌ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಉತ್ತರಾಖಂಡ 3 ವಿಕೆಟ್‌ ನಷ್ಟಕ್ಕೆ 106 ರನ್‌ ಮಾಡಿದೆ. ಇನ್ನೂ 384 ರನ್‌ ಹಿನ್ನಡೆಯಲ್ಲಿದೆ.

ಎರಡನೇ ದಿನದಂತ್ಯಕ್ಕೆ ಕರ್ನಾಟಕ 5 ವಿಕೆಟ್‌ ಕಳೆದುಕೊಂಡು 474 ರನ್‌ ಗಳಿಸಿತ್ತು. ಶ್ರೇಯಸ್‌ ಗೋಪಾಲ್‌ 103 ರನ್‌ ಗಳಿಸಿ ಅಜೇಯರಾಗಿದ್ದರು. ಶ್ರೇಯಸ್‌ ಆಟ 161ರ ವರೆಗೆ ಬೆಳೆಯಿತು. ಅವರು ಒಟ್ಟು 288 ಎಸೆತ ಎದುರಿಸಿ 16 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿ ಅಜೇಯರಾಗಿ ಉಳಿದರು. ಬಿ.ಆರ್‌. ಶರತ್‌ 33, ಕೆ. ಗೌತಮ್‌ 39 ರನ್‌ ಮಾಡಿದರು. ಉತ್ತರಾಖಂಡದ ಅಭಯ್‌ ನೇಗಿ 4, ಮಾಯಾಂಕ್‌ ಮಿಶ್ರಾ 3 ವಿಕೆಟ್‌ ಕಿತ್ತರು.

ಭಾರೀ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್‌ ಆರಂಭಿಸಿದ ಉತ್ತರಾಖಂಡ ಎಚ್ಚರಿಕೆಯಿಂದ ಆಡುತ್ತಿದೆ. ಆದರೂ ಈ ಪಂದ್ಯವನ್ನು ಉಳಿಸಿಕೊಳ್ಳುವ ಯಾವ ಮಾರ್ಗವೂ ತಂಡದ ಮುಂದಿಲ್ಲ. ದಿûಾಂಶು ನೇಗಿ ಮತ್ತು ಸ್ವಪ್ನಿಲ್‌ ಸಿಂಗ್‌ ತಲಾ 27 ರನ್‌ ಗಳಿಸಿ ಆಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಉತ್ತರಾಖಂಡ-116 ಮತು 3ಕ್ಕೆ 106 (ದಿಕ್ಷಾಂಶು ನೇಗಿ ಬ್ಯಾಟಿಂಗ್‌ 27, ಸ್ವಪ್ನಿಲ್‌ ಸಿಂಗ್‌ ಬ್ಯಾಟಿಂಗ್‌ 27, ಜೀವನ್‌ಜೋತ್‌ ಸಿಂಗ್‌ 24, ವಿದ್ವತ್‌ ಕಾವೇರಪ್ಪ 22ಕ್ಕೆ 2). ಕರ್ನಾಟಕ-606 (ಶ್ರೇಯಸ್‌ ಗೋಪಾಲ್‌ 161, ಅಗರ್ವಾಲ್‌ 83, ಸಮರ್ಥ್ 82, ಪಡಿಕ್ಕಲ್‌ 69, ಜೋಸ್‌ 62, ಪಾಂಡೆ 39, ಕೆ. ಗೌತಮ್‌ 39, ಅಭಯ್‌ ನೇಗಿ 109ಕ್ಕೆ 4, ಮಾಯಾಂಕ್‌ ಮಿಶ್ರಾ 117ಕ್ಕೆ 3, ಸ್ಪಪ್ನಿಲ್‌ ಸಿಂಗ್‌ 116ಕ್ಕೆ 2).

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.