ರವೀಂದ್ರ ಜಡೇಜ ರಣಜಿ ಫೈನಲ್ ಆಡುವಂತಿಲ್ಲ
Team Udayavani, Mar 6, 2020, 11:42 PM IST
ಹೊಸದಿಲ್ಲಿ: ರಣಜಿ ಟ್ರೋಫಿ ಫೈನಲ್ನಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಲು ಆಲ್ರೌಂಡರ್ ರವೀಂದ್ರ ಜಡೇಜ ಅವರಿಗೆ ಬಿಸಿಸಿಐ ಅನುಮತಿ ನಿರಾಕರಿಸಿದೆ.
ಜಡೇಜ ಭಾರತದ ಏಕದಿನ ತಂಡದ ಸಂಭಾವ್ಯ ಆಟಗಾರನಾಗಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುವ ಸಾಧ್ಯತೆ ಇದೆ.
“ದೇಶ ಮೊದಲು’ ಎಂಬ ನೀತಿಯಂತೆ ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾಗಿ, ಸೌರಾಷ್ಟ್ರ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜೈದೇವ್ ಶಾ ಹೇಳಿದ್ದಾರೆ.
“ಜನರು ದೇಶಿ ಕ್ರಿಕೆಟ್ ಫೈನಲ್ಗಳನ್ನೂ ವೀಕ್ಷಿಸಬೇಕಾದರೆ ಬಿಸಿಸಿಐ ಆಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳನ್ನು ಇರಿಸಿಕೊಳ್ಳಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಬಿಸಿಸಿಐ ಐಪಿಎಲ್ ವೇಳೆ ಯಾವುದಾದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ನಡೆಸುವುದೇ? ಇಲ್ಲ. ಯಾಕೆಂದರೆ ಐಪಿಎಲ್ನಿಂದ ದುಡ್ಡು ಹರಿದು ಬರುತ್ತದೆ. ಕನಿಷ್ಠ ರಣಜಿ ಫೈನಲ್ನಲ್ಲಾದರೂ ಸ್ಟಾರ್ ಆಟಗಾರರು ಆಡುವಂತಾಗಬೇಕು. ಆಗ ಎಲ್ಲರಿಗೂ ಕುತೂಹಲ ಹೆಚ್ಚುತ್ತದೆ. ಎಲ್ಲರೂ ಆಸಕ್ತಿಯಿಂದ ಪಂದ್ಯ ನೋಡುತ್ತಾರೆ’ ಎಂದು ಜೈದೇವ್ ಶಾ ಹೇಳಿದರು.
ಕೇವಲ ಜಡೇಜ ಮಾತ್ರವಲ್ಲ, ಬಂಗಾಲ ಪರ ಮೊಹಮ್ಮದ್ ಶಮಿ ಆಡುವುದನ್ನೂ ತಾನು ನೋಡಬಯಸುವುದಾಗಿ ಶಾ ಹೇಳಿದರು.ಸೌರಾಷ್ಟ್ರ-ಬಂಗಾಲ ನಡುವೆ ಸೋಮವಾರದಿಂದ ರಾಜ್ಕೋಟ್ನಲ್ಲಿ ರಣಜಿ ಫೈನಲ್ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ