ಮೊದಲ ಅಭ್ಯಾಸ ಪಂದ್ಯವಾಡಿದ ಆರ್ ಸಿಬಿ; ಮಿಂಚಿದ ಯುವ ಪಡೆ, ಹರ್ಷಲ್ ಬಳಗಕ್ಕೆ 2 ರನ್ ಅಂತರದ ಜಯ
Team Udayavani, Mar 25, 2022, 2:19 PM IST
ಥಾಣೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಸಜ್ಜಾಗುತ್ತಿದೆ. ತಂಡವು ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಆಡಿದೆ. ಅಭ್ಯಾಸ ಪಂದ್ಯಕ್ಕೆ ಫಾಫ್ ಡು ಪ್ಲೆಸಿಸ್ (ಎ ತಂಡ) ಮತ್ತು ಹರ್ಷಲ್ ಪಟೇಲ್ (ಟೀಮ್ ಬಿ) ಇಬ್ಬರು ನಾಯಕರಾಗಿದ್ದರು.
ಆರ್ ಸಿಬಿ ತಂಡವು ಈ ಬಾರಿ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ. ಆದ್ದರಿಂದ, ಅಭ್ಯಾಸ ಪಂದ್ಯಕ್ಕಾಗಿ, ಪಂಜಾಬ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿ ಫಾಫ್ ಪಡೆ 20 ಓವರ್ ಗಳಲ್ಲಿ 215 ರನ್ ಗಳಿಸಿದರೆ, ಹರ್ಷಲ್ ಪಡೆಯು 213 ರನ್ ಗಳಿಸಿತು. ಈ ಮೂಲಕ ಮೊದಲ ಅಭ್ಯಾಸ ಪಂದ್ಯದಲ್ಲಿ ಫಾಫ್ ಪಡೆ ಎರಡು ರನ್ ಅಂತರದ ರೋಚಕ ಜಯ ಸಾಧಿಸಿತು.
ಇದನ್ನೂ ಓದಿ:
ಎ ತಂಡದ ಪರ ನಾಯಕ ಫಾಫ್ ಮತ್ತು ಯುವ ಆಟಗಾರ ಅನುಜ್ ರಾವತ್ ಆರಂಭ ಮಾಡಿದರು. ಫಾಫ್ 76 ರನ್ ಗಳಿಸಿದರೆ, ರಾವತ್ 25 ಎಸೆತಗಳಲ್ಲಿ 46 ರನ್ ಬಾರಿಸಿದರು. ರುದರ್ಫೋರ್ಡ್ ಅವರು 31 ಎಸೆತಗಳಲ್ಲಿ 59 ರನ್ ಸಿಡಿಸಿದರು. ಹರ್ಷಲ್ ಪಟೇಲ್ ಮೂರು ವಿಕೆಟ್ ಕಿತ್ತರೆ, ಕರ್ಣ್ ಶರ್ಮಾ ಎರಡು ವಿಕೆಟ್ ಪಡೆದರು.
A high-scoring, last over thriller in our first practice match, and we saw some scintillating performances from our boys. Watch @kreditbee presents Bold Diaries to find out more details.#PlayBold #WeAreChallengers #IPL2022 #Mission2022 pic.twitter.com/JQFa4H3afF
— Royal Challengers Bangalore (@RCBTweets) March 25, 2022
ಗುರಿ ಬೆನ್ನತ್ತಿದ ಹರ್ಷಲ್ ಪಡೆಯ ಕೊನೆಯ ಓವರ್ ತನಕ ಹೋರಾಡಿತು. ಬಿ ಟೀಮ್ ಪರ ಸುಯಾಶ್ ಪ್ರಭುದೇಸಾಯ್ ಕೇವಲ 46 ಎಸೆತಗಳಲ್ಲಿ 87 ರನ್ ಚಚ್ಚಿದರು. ದಿನೇಶ್ ಕಾರ್ತಿಕ್ ಅವರು 21 ಎಸೆತಗಲ್ಲಿ 49 ರನ್ ಗಳಿಸಿದರು. ಎ ತಂಡದ ಪರ ಆಕಾಶ್ ದೀಪ್ ನಾಲ್ಕು ವಿಕೆಟ್, ಹಸರಂಗ ಮತ್ತು ಶಹಾಬಾಜ್ ತಲಾ ಒಂದು ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್