ಜೋ ರೂಟ್ ಮರಳಿ ನಂಬರ್ 1: ಮಾರ್ನಸ್ ಲಬುಶೇನ್ ದ್ವಿತೀಯ ಸ್ಥಾನಕ್ಕೆ ಕುಸಿತ
Team Udayavani, Jun 15, 2022, 10:51 PM IST
ದುಬಾೖ: ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಮರಳಿ ನಂಬರ್ ವನ್ ಟೆಸ್ಟ್ ಬ್ಯಾಟರ್ ಆಗಿ ಮೂಡಿ ಬಂದಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಅಗ್ರಸ್ಥಾನಕ್ಕೆ ನೆಗೆದಿದ್ದ ಆಸ್ಟ್ರೇಲಿಯದ ಮಾರ್ನಸ್ ಲಬುಶೇನ್ ಅವರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದರು.
ನ್ಯೂಜಿಲ್ಯಾಂಡ್ ಎದುರಿನ ಸರಣಿಯಲ್ಲಿ ಸತತ 2 ಶತಕ ಬಾರಿಸುವ ಜತೆಗೆ, ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಮೈಲುಗಲ್ಲು ನೆಟ್ಟಿರುವ ಸಾಧನೆ ಜೋ ರೂಟ್ ಅವರದಾಗಿದೆ. ಈ ವರ್ಷದ ಟೆಸ್ಟ್ ಪಂದ್ಯಗಳಲ್ಲಿ ಈಗಾಗಲೇ 4 ಸೆಂಚುರಿ ಬಾರಿಸಿದ್ದಾರೆ.
ಜೋ ರೂಟ್ 897 ರೇಟಿಂಗ್ ಅಂಕ ಹೊಂದಿದ್ದಾರೆ. ಮಾರ್ನಸ್ ಲಬುಶೇನ್ ಗಳಿಸಿರುವ ಅಂಕ 892. ಆಸ್ಟ್ರೇಲಿಯದ ಮತ್ತೋರ್ವ ಬ್ಯಾಟರ್ ಸ್ಟೀವನ್ ಸ್ಮಿತ್ 3ನೇ ಸ್ಥಾನದಲ್ಲಿದ್ದಾರೆ (845). ಪಾಕಿಸ್ಥಾನದ ಇನ್ಫಾರ್ಮ್ ಬ್ಯಾಟರ್ ಬಾಬರ್ ಆಜಂ 4ನೇ (815 ಅಂಕ) ಮತ್ತು ಕೇನ್ ವಿಲಿಯಮ್ಸನ್ 5ನೇ ಸ್ಥಾನದಲ್ಲಿದ್ದಾರೆ (798). ಟಾಪ್-10 ಯಾದಿಯಲ್ಲಿರುವ ಭಾರತೀಯರೆಂದರೆ ರೋಹಿತ್ ಶರ್ಮ (8) ಮತ್ತು ವಿರಾಟ್ ಕೊಹ್ಲಿ (10).
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಪ್ಯಾಟ್ ಕಮಿನ್ಸ್ (901) ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಆರ್. ಅಶ್ವಿನ್ 2ನೇ ಹಾಗೂ ಜಸ್ಪ್ರೀತ್ ಬುಮ್ರಾ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇವ ರಲ್ಲಿ ಬುಮ್ರಾ ಅವರದು ಒಂದು ಸ್ಥಾನದ ಪ್ರಗತಿ.
ಇಶಾನ್ 68 ಸ್ಥಾನ ಜಂಪ್!
ಟಿ20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಆರಂಭಕಾರ ಇಶಾನ್ ಕಿಶನ್ ಒಮ್ಮೆಲೇ 68 ಸ್ಥಾನ ಜಿಗಿದು 7ನೇ ಸ್ಥಾನ ಅಲಂಕರಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ 3 ಪಂದ್ಯಗಳಲ್ಲಿ 2 ಅರ್ಧ ಶತಕ ಒಳಗೊಂಡ 164 ರನ್ ಬಾರಿಸಿದ್ದು ಕಿಶಾನ್ ಪ್ರಗತಿಗೆ ಕಾರಣ.
ಸದ್ಯ ಇಶಾನ್ ಕಿಶನ್ ಟಾಪ್-10 ಬ್ಯಾಟಿಂಗ್ ಯಾದಿಯಲ್ಲಿರುವ ಭಾರತದ ಏಕೈಕ ಕ್ರಿಕೆಟಿಗೆ. ಅನಂತರದ ಸ್ಥಾನದಲ್ಲಿರುವವರು ಕೆ.ಎಲ್. ರಾಹುಲ್. ಇವರದು 14ನೇ ರ್ಯಾಂಕಿಂಗ್. ರೋಹಿತ್ ಶರ್ಮ (16) ಮತ್ತು ಶ್ರೇಯಸ್ ಅಯ್ಯರ್ (17) ಒಂದೊಂದು ಸ್ಥಾನ ಕುಸಿದಿದ್ದಾರೆ. ವಿರಾಟ್ ಕೊಹ್ಲಿ ಅವರದು 2 ಸ್ಥಾನಗಳ ಕುಸಿತ (21).
ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ 7 ಸ್ಥಾನ ಹಾಗೂ ಯಜುವೇಂದ್ರ ಚಹಲ್ 4 ಸ್ಥಾನ ಮೇಲೇರಿದ್ದಾರೆ. ಕ್ರಮವಾಗಿ 11ನೇ ಹಾಗೂ 26ನೇ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ