“ಗೆರೆ ದಾಟಬಾರದು…”: ಸಂದೀಪ್ ಶರ್ಮಾ ನೋ ಬಾಲ್ ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ
Team Udayavani, May 8, 2023, 3:18 PM IST
ಜೈಪುರ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಭಾನುವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದ ತನ್ನ ತಂಡಕ್ಕೆ ನೋ ಬಾಲ್ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದರು. ಅಲ್ಲದೆ “ಆ ಸಮಯದಲ್ಲಿ ನೀವು ಲೈನ್ ಮುಂದೆ ಹೆಜ್ಜೆ ಹಾಕಲು ಸಾಧ್ಯವಿಲ್ಲ” ಎಂದರು
ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯವು ಕೊನೆಯ ಎಸೆತದಲ್ಲಿ ನಿರ್ಧಾರವಾಗಿತ್ತು. ಕೊನೆಯ ಎಸೆತದಲ್ಲಿ ಐದು ರನ್ ಬೇಕಿದ್ದಾಗ ರಾಜಸ್ಥಾನ ಬೌಲರ್ ಸಂದೀಪ್ ಶರ್ಮಾ ನೋ ಬಾಲ್ ಎಸೆದಿದ್ದರು. ಕೊನೆಯ ಎಸೆತದಲ್ಲಿ ಸಮದ್ ಸಿಕ್ಸರ್ ಬಾರಿಸಿ ಹೈದರಾಬಾದ್ ಗೆಲ್ಲಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್, “ಅವರು (ಸಂದೀಪ್ ಶರ್ಮಾ) ಇದೇ ರೀತಿಯ ಪರಿಸ್ಥಿತಿಯಿಂದ (ಚೆನ್ನೈ ವಿರುದ್ಧ) ನಮಗೆ ಪಂದ್ಯವನ್ನು ಗೆದ್ದಿದ್ದಾರೆ. ಅವರು ಇಂದು ಅದನ್ನು ಮತ್ತೆ ಮಾಡಿದರು ಆದರೆ ಆ ನೋ-ಬಾಲ್ ನಮ್ಮ ಫಲಿತಾಂಶವನ್ನು ಹಾಳುಮಾಡಿದೆ” ಎಂದರು.
“ಏನು ಮಾಡಬೇಕೆಂದು ಸಂದೀಪ್ ಗೆ ಗೊತ್ತು. ಕೆಲಸ ಮುಗಿದಿದೆ ಎಂದು ನೀವು ಭಾವಿಸಿದಾಗ ಕೆಲವು ಸೆಕೆಂಡುಗಳ ಕಾಲ ಮನಸ್ಥಿತಿಯಲ್ಲಿ ಸಣ್ಣ ಬದಲಾವಣೆ ಇರಬಹುದು, ಎಲ್ಲರೂ ಸಂಭ್ರಮಿಸುತ್ತಿದ್ದರು ಆದರೆ ಇದು ಈ ಆಟದ ಸ್ವರೂಪವಾಗಿದೆ ಎಂದು ನಾನು ಭಾವಿಸುತ್ತೇನೆ, ಆ ಸಮಯದಲ್ಲಿ ನೀವು ಗೆರೆಯನ್ನು ದಾಟಲು ಸಾಧ್ಯವಿಲ್ಲ” ಎಂದರು.