
ಬ್ರೆಝಿಲ್, ಸ್ವಿಜರ್ಲೆಂಡ್ಗೆ ನಾಕೌಟ್ ಅರ್ಹತೆ
ಸೋತರೂ ಬ್ರೆಝಿಲ್ಗೆ ಅಗ್ರಸ್ಥಾನದ ಗೌರವ ;ಗೆದ್ದು ಹೊರಬಿದ್ದ ಕ್ಯಾಮೆರೂನ್
Team Udayavani, Dec 3, 2022, 10:42 PM IST

ದೋಹಾ: ಕ್ಯಾಮೆರೂನ್ ಹೊಡೆತಕ್ಕೆ 5 ಬಾರಿಯ ಚಾಂಪಿಯನ್ ಬ್ರೆಝಿಲ್ ಬೆಚ್ಚಿಬಿದ್ದಿದೆ. ಪೀಲೆ ನಾಡಿನ ಅಭಿಮಾನಿಗಳು ದಂಗಾಗಿದ್ದಾರೆ. ಆದರೆ ಈ ಸೋಲಿನ ಹೊರತಾಗಿಯೂ ಬ್ರೆಝಿಲ್ ನಾಕೌಟ್ ಪ್ರವೇಶಕ್ಕೇನೂ ಅಡ್ಡಿಯಾಗಿಲ್ಲ. ಈ ಐತಿಹಾಸಿಕ ಗೆಲುವಿನ ಹೊರತಾಗಿಯೂ ಕ್ಯಾಮೆರೂನ್ಗೆ ಮುನ್ನಡೆ ಸಾಧ್ಯವಾಗಿಲ್ಲ. “ಜಿ’ ಬಣದ ಇನ್ನೊಂದು ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ ಸೆರ್ಬಿಯ ಸೋತಿದ್ದರೆ, ಕ್ಯಾಮೆರೂನ್ ಮುನ್ನಡೆಯುತ್ತಿತ್ತು. ಆದರೆ ಸ್ವಿಜರ್ಲೆಂಡ್ ಗೆದ್ದು ಮೇಲೇರಿತು.
ಜಿ ಗುಂಪಿನಲ್ಲಿ ಬ್ರೆಝಿಲ್ ಮತ್ತು ಸ್ವಿಜರ್ಲೆಂಡ್ ತಲಾ 6 ಅಂಕ ಗಳಿಸಿದವು (2 ಗೆಲುವು, 1 ಸೋಲು). ಕ್ಯಾಮೆರೂನ್ ಮೂರಕ್ಕೆ ಕುಸಿಯಿತು (1 ಜಯ, 1 ಸೋಲು, 1 ಡ್ರಾ, 4 ಅಂಕ), ಸೆರ್ಬಿಯ ಅಂತಿಮ ಸ್ಥಾನಿಯಾಯಿತು (2 ಸೋಲು, 1 ಡ್ರಾ, 1 ಅಂಕ).
ಕ್ಯಾಮೆರೂನ್ ಇತಿಹಾಸ: “ಜಿ’ ವಿಭಾಗದ ಮುಖಾಮುಖಿಯಲ್ಲಿ ಬ್ರೆಝಿಲ್ ವಿರುದ್ಧ 1-0 ಅಂತರದ ಜಯಭೇರಿ ಮೊಳಗಿಸಿದ ಕ್ಯಾಮೆರೂನ್ ಹೊಸ ಇತಿಹಾಸವನ್ನೇ ನಿರ್ಮಿಸಿತು. ವಿಶ್ವಕಪ್ ಚರಿತ್ರೆಯಲ್ಲಿ ಬ್ರೆಝಿಲ್ಗೆ ಸೋಲುಣಿಸಿದ ಆಫ್ರಿಕಾ ಖಂಡದ ಮೊದಲ ದೇಶವೆಂಬ ಹಿರಿಮೆ ಕ್ಯಾಮೆರೂನ್ನದ್ದಾಯಿತು. ಹಾಗೆಯೇ ವೀರೋಚಿತವಾಗಿಯೇ ಕತಾರ್ ವಿಶ್ವಕಪ್ಗೆ ವಿದಾಯ ಹೇಳಿತು.
ಗೋಲುರಹಿತ ಡ್ರಾ ಆಗಬೇಕಿದ್ದ ಈ ಪಂದ್ಯಕ್ಕೆ ತಿರುವು ಕೊಟ್ಟವರು ವಿನ್ಸೆಂಟ್ ಅಬೂಬಕರ್. ಪೂರ್ಣಾವಧಿ ಕಳೆದು 2 ನಿಮಿಷದಲ್ಲಿ ಅವರು ಗೆಲುವಿನ ಗೋಲ್ ಸಿಡಿಸಿದರು. ಇದರೊಂದಿಗೆ ಬ್ರೆಝಿಲ್ ತಂಡದ ಹಂತದ ಸತತ 17 ಪಂದ್ಯಗಳ ಅಜೇಯ ವಿಶ್ವಕಪ್ ಲೀಗ್ ದಾಖಲೆ ಮುರಿಯಲ್ಪಟ್ಟಿತು.
ಗೋಲು ಬಾರಿಸಿದ ಸಂತಸದಲ್ಲಿ ವಿನ್ಸೆಂಟ್ ಅಬೂಬಕರ್ ತಮ್ಮ ಜೆರ್ಸಿಯನ್ನು ಕಿತ್ತೆಸೆದು ಸಂಭ್ರಮಿಸಿದರು. ಈ ಅಸಭ್ಯ ವರ್ತನೆಗೆ ಮರು ನಿಮಿಷದಲ್ಲೇ ಅವರಿಗೆ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಲಾಯಿತು. ಹೀಗೆ, ಗೋಲು ಬಾರಿಸಿದ ಬೆನ್ನಲ್ಲೇ ವಿಶ್ವಕಪ್ ಪಂದ್ಯದಿಂದ ಹೊರಬಿದ್ದು ಜಿನೆದಿನ್ ಜಿದಾನೆ ಸಾಲಿಗೆ ಸೇರಿದರು. ಇಟಲಿ ವಿರುದ್ಧದ 2006ರ ಫೈನಲ್ನಲ್ಲಿ ಜಿದಾನೆ ಈ ಶಿಕ್ಷೆಗೆ ಗುರಿಯಾಗಿದ್ದರು.
ಬ್ರೆಝಿಲ್ಗೆ ಒಂದೆರಡು ಸಲ ಗೋಲು ಬಾರಿಸುವ ಅವಕಾಶ ಎದುರಾಗಿತ್ತು. 14ನೇ ನಿಮಿಷದಲ್ಲೇ ಗೇಬ್ರಿಯಲ್ ಮಾರ್ಟಿನೆಲ್ಲಿ ಖಾತೆ ತೆರೆಯಲು ಸಜ್ಜಾಗಿದ್ದರು. ಆದರೆ ಇವರ “ಹೆಡರ್’ಗೆ ಡೇವಿಸ್ ಇಪಾಸ್ಸಿ ತಡೆಯೊಡ್ಡುವಲ್ಲಿ ಯಶಸ್ವಿಯಾದರು.
ಫಲಿತಾಂಶ
ಕ್ಯಾಮೆರೂನ್: 01
ಬ್ರೆಝಿಲ್: 00
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್-ಸಿಸಿಪಸ್ ಪ್ರಶಸ್ತಿ ರೇಸ್

ಇಂಡೋನೇಷ್ಯಾ ಮಾಸ್ಟರ್: ಲಕ್ಷ್ಯ ಸೇನ್ ಪರಾಭವ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್