ಶೈ ಹೋಪ್ ಅಜೇಯ ಶತಕ; ನೆದರ್ಲೆಂಡ್ಸ್ ವಿರುದ್ಧ ವೆಸ್ಟ್ ಇಂಡೀಸ್ 7 ವಿಕೆಟ್ಗಳ ಗೆಲುವು
Team Udayavani, Jun 1, 2022, 6:33 PM IST
ಆಮ್ಸ್ಟೆಲ್ವಿನ್: ಆತಿಥೇಯ ನೆದರ್ಲೆಂಡ್ಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಡಿ-ಎಲ್ ನಿಯಮದಂತೆ 7 ವಿಕೆಟ್ಗಳ ಗೆಲುವು ಸಾಧಿಸಿದೆ.
ಓಪನರ್ ಶೈ ಹೋಪ್ ಅವರ ಅಜೇಯ 119 ರನ್ ವಿಂಡೀಸ್ ಸರದಿಯ ಆಕರ್ಷಣೆ ಆಗಿತ್ತು. ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯವನ್ನು 45 ಓವರ್ಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ 7 ವಿಕೆಟಿಗೆ 240 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ಗೆ ಡಕ್ವರ್ತ್-ಲೂಯಿಸ್ ನಿಯಮದಂತೆ ಇದಕ್ಕೂ ಹೆಚ್ಚಿನ, 247 ರನ್ ಗುರಿ ಲಭಿಸಿತು. ಅದು 43.1 ಓವರ್ಗಳಲ್ಲಿ 3 ವಿಕೆಟಿಗೆ 249 ರನ್ ಬಾರಿಸಿ ಗೆದ್ದು ಬಂದಿತು.
ಹೋಪ್ 2ನೇ ಸೆಂಚುರಿ
ವಿಕೆಟ್ ಕೀಪರ್ ಬ್ಯಾಟರ್ ಶೈ ಹೋಪ್ 130 ಎಸೆತಗಳಿಂದ ಅಮೋಘ 119 ರನ್ ಬಾರಿಸಿ ವಿಂಡೀಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. ಇದು ಅವರ 2ನೇ ಏಕದಿನ ಶತಕ.
ಮತ್ತೋರ್ವ ಆರಂಭಕಾರ ಶಮರ್ ಬ್ರೂಕ್ಸ್ 60 ರನ್ ಹೊಡೆದರು. ಮೊದಲ ವಿಕೆಟಿಗೆ 23.3 ಓವರ್ಗಳಿಂದ 120 ರನ್ ಒಟ್ಟುಗೂಡಿತು. ಬಳಿಕ 13 ರನ್ ಅಂತರದಲ್ಲಿ 3 ವಿಕೆಟ್ ಉರುಳಿತಾದರೂ ವೆಸ್ಟ್ ಇಂಡೀಸ್ಗೆ ಯಾವುದೇ ಆತಂಕ ಎದುರಾಗಲಿಲ್ಲ. ಬ್ರ್ಯಾಂಡನ್ ಕಿಂಗ್ ಅಜೇಯ 58 ರನ್ ಹೊಡೆದು ಹೋಪ್ಗೆ ಉತ್ತಮ ಸಾಥ್ ಕೊಟ್ಟರು. ಮುರಿಯದ 4ನೇ ವಿಕೆಟಿಗೆ 116 ರನ್ ಒಟ್ಟುಗೂಡಿತು.
ನೆದರ್ಲೆಂಡ್ಸ್ ಪರ ಮೊದಲ ಏಕದಿನ ಪಂದ್ಯವಾಡಿದ ನ್ಯೂಜಿಲ್ಯಾಂಡ್ ಮೂಲದ ತೇಜ ನಿದಾಮನುರು ಸರ್ವಾಧಿಕ 58 ರನ್ ಹೊಡೆದರು (51 ಎಸೆತ, 3 ಬೌಂಡರಿ, 2 ಸಿಕ್ಸರ್). ಪಂಜಾಬ್ ಮೂಲದ ಆರಂಭಕಾರ ವಿಕ್ರಮ್ಜೀತ್ ಸಿಂಗ್ 47 ಮತ್ತು ಮ್ಯಾಕ್ಸ್ ಓಡೌಡ್ 39 ರನ್ ಹೊಡೆದರು. ಬೌಲಿಂಗ್ ದಾಳಿಗಿಳಿದ ವಿಂಡೀಸ್ನ ಎಲ್ಲ 5 ಮಂದಿಯೂ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್:
ನೆದರ್ಲೆಂಡ್ಸ್-45 ಓವರ್ಗಳಲ್ಲಿ 7 ವಿಕೆಟಿಗೆ 240 (ನಿದಾಮನುರು ಅಜೇಯ 58, ವಿಕ್ರಮ್ಜೀತ್ 47, ಓಡೌಡ್ 39, ಅಖೀಲ್ ಹೊಸೇನ್ 29ಕ್ಕೆ 2, ಕೈಲ್ ಮೇಯರ್ 50ಕ್ಕೆ 2).
ವೆಸ್ಟ್ ಇಂಡೀಸ್-43.1 ಓವರ್ಗಳಲ್ಲಿ 3 ವಿಕೆಟಿಗೆ 249 (ಹೋಪ್ ಅಜೇಯ 119, ಬ್ರೂಕ್ಸ್ 58, ಕಿಂಗ್ ಔಟಾಗದೆ 58, ವಾನ್ ಬೀಕ್ 49ಕ್ಕೆ 2). ಪಂದ್ಯಶ್ರೇಷ್ಠ: ಶೈ ಹೋಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ