
ಕೊನೆಯ ಕ್ಷಣದಲ್ಲಿ ಬ್ರೇಸ್ ವೆಲ್ ವಿಕೆಟ್ ಪಡೆಯಲು ಸಹಾಯವಾಗಿದ್ದು ವಿರಾಟ್ ಸಲಹೆ: ಶಾರ್ದೂಲ್
Team Udayavani, Jan 19, 2023, 9:29 AM IST

ಹೈದರಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯ ಸಾಧಿಸಿದೆ. ರನ್ ಮೇಲಾಟದಲ್ಲಿ ರೋಹಿತ್ ಶರ್ಮಾ ಬಳಗವು 12 ರನ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಶುಭ್ಮನ್ ಗಿಲ್ ದ್ವಿಶತಕದ ನೆರವಿನಿಂದ 349 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನತ್ತಿದ ಕಿವೀಸ್ 337 ರನ್ ಗಳಿಸಿತು. ಕೇವಲ 78 ಎಸೆತಗಳಲ್ಲಿ 140 ರನ್ ಹೊಡೆದ ಬ್ರೇಸ್ ವೆಲ್ ಕಿವೀಸ್ ಗೆ ಒಮ್ಮೆ ಗೆಲುವಿನ ಆಸೆ ಮೂಡಿಸಿದ್ದರು.
ಕೊನೆಯ ಐದು ಎಸೆತಗಳಲ್ಲಿ ಕಿವೀಸ್ ಗೆ 13 ರನ್ ಅಗತ್ಯವಿತ್ತು. ಈ ವೇಳೆ ಶಾರ್ದೂಲ್ ಠಾಕೂರ್ ಎಸೆತಕ್ಕೆ ಬ್ರೇಸ್ ವೆಲ್ ಔಟಾದರು. ಇದರೊಂದಿಗೆ ಭಾರತ ಗೆಲುವು ಸಾಧಿಸಿತು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಸಲಹೆಯು ಅಂತಿಮ ವಿಕೆಟ್ ಪಡೆಯಲು ಹೇಗೆ ಸಹಾಯ ಮಾಡಿತು ಎಂಬುದನ್ನು ಠಾಕೂರ್ ಪಂದ್ಯದ ಬಳಿಕ ಬಹಿರಂಗಪಡಿಸಿದರು.
ಇದನ್ನೂ ಓದಿ:ಸಾಕು ಅಧಿಕಾರ..: ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ನ್ಯೂಜಿಲ್ಯಾಂಡ್ ಪಿಎಂ ಜೆಸಿಂಡಾ ಘೋಷಣೆ
ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಠಾಕೂರ್ ಅವರು “ವಿರಾಟ್ ಭಾಯ್ ನನ್ನನ್ನು ಬ್ಯಾಟ್ಸ್ಮನ್ ಔಟ್ ಮಾಡಲು ಯಾರ್ಕರ್ ಲೆಂತ್ ಬೌಲ್ ಮಾಡಲು ಕೇಳಿದರು” ಎಂದು ಹೇಳಿದರು. ಬ್ರೇಸ್ ವೆಲ್ ಅವರು ಎಲ್ ಬಿಡಬ್ಲ್ಯೂ ರೀತಿಯಲ್ಲಿ ಔಟಾಗಿದ್ದರು.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಅಂತರದ ಮುನ್ನಡೆ ಸಾಧಿಸಿದೆ.
Bracewell was good but not against Lord Shardul #INDvsNZ
Extraordinary inns by Bracewell 🙏 pic.twitter.com/sLrpJNXsUP— Divyanshu Rai (@i_am_divyanshu) January 18, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC Final ಕುಸಿದ ಭಾರತಕ್ಕೆ ರಹಾನೆ-ಠಾಕೂರ್ ಆಧಾರ: 173 ರನ್ ಮುನ್ನಡೆಯಲ್ಲಿ ಆಸೀಸ್

Women cestoball ವಿಶ್ವಕಪ್ :ಮಹಿಳಾ ವಿವಿಯ ಶೃತಿ ಉತ್ತಮ ಪ್ರದರ್ಶನ

ಏಕದಿನ ವಿಶ್ವಕಪ್ ಕ್ರೀಡಾಕೂಟದ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿ

ಜಿಯೋ ಸಿನಿಮಾ ಪ್ರಭಾವ: ಕ್ರಿಕೆಟ್ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಹಾಟ್ ಸ್ಟಾರ್

ICC World Cup Test Championship ಫೈನಲ್: ಫಾಲೋಆನ್ ತಪ್ಪಿಸಲು ಭಾರತ ಪ್ರಯತ್ನ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
ಹೊಸ ಸೇರ್ಪಡೆ

WTC Final ಕುಸಿದ ಭಾರತಕ್ಕೆ ರಹಾನೆ-ಠಾಕೂರ್ ಆಧಾರ: 173 ರನ್ ಮುನ್ನಡೆಯಲ್ಲಿ ಆಸೀಸ್

Chikodi ಜಿಲ್ಲೆ ಘೋಷಣೆಗಾಗಿ ತೀವ್ರವಾದ ಹೋರಾಟ ಅನಿವಾರ್ಯ ಎಂದ ಸಮಿತಿ

Daredevil Mustafa ಮುಖದಲ್ಲಿ ಗೆಲುವಿನ ನಗೆ

Women cestoball ವಿಶ್ವಕಪ್ :ಮಹಿಳಾ ವಿವಿಯ ಶೃತಿ ಉತ್ತಮ ಪ್ರದರ್ಶನ

Suriname; ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಬಳಿಕ ಸುದ್ದಿ: ಯಾವುದೀ ದೇಶ ಸುರಿನಾಮ್?