ಸಹಜ ದೇಹದಾರ್ಢ್ಯ ಸ್ಪರ್ಧೆ: ವಿಶ್ವಕಪ್‌ ಗೆದ್ದ ಶೋಧನ್‌ ರೈ


Team Udayavani, Jan 7, 2023, 7:30 AM IST

ಸಹಜ ದೇಹದಾರ್ಢ್ಯ ಸ್ಪರ್ಧೆ: ವಿಶ್ವಕಪ್‌ ಗೆದ್ದ ಶೋಧನ್‌ ರೈ

ಬೆಂಗಳೂರು: ಸಹಜ ದೇಹದಾರ್ಢ್ಯ ಅಥವಾ ನ್ಯಾಚುರಲ್‌ ಬಾಡಿ ಬಿಲ್ಡಿಂಗ್‌… ಈ ಪದ ಕೇಳಿದಾಗ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಹೀಗೊಂದು ಪ್ರಕೃತಿ ಸಹಜ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ವಿಶ್ವಮಟ್ಟದ ಪ್ರಶಸ್ತಿಗಳನ್ನು ಗೆದ್ದು ಖ್ಯಾತರಾಗಿದ್ದಾರೆ ಬೆಂಗಳೂರಿನ ಶೋಧನ್‌ ರೈ. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ಏಕಲವ್ಯ ಪುರಸ್ಕಾರ ನೀಡಿ ಗೌರವಿಸಿದೆ.

ಮೂಲತಃ ಶೋಧನ್‌ ತಂದೆ ತಾಯಿ ದಕ್ಷಿಣ ಕನ್ನಡ ಜಿಲ್ಲೆಯವರು. ಶೋಧನ್‌ ಮಾತ್ರ ಬೆಂಗಳೂರಿನಲ್ಲಿ ಹುಟ್ಟಿ, ದಾಸರಹಳ್ಳಿಯಲ್ಲಿ ಬಾಲ್ಯದ ವಿದ್ಯಾಭ್ಯಾಸ ಮಾಡಿದರು.

ರಾಜಾಜಿನಗರದ ಕೆಎಲ್‌ಇ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಸದಾಶಿವನಗರದ ಕ್ಲಾಸಿಕ್‌ ಜಿಮ್‌ನಲ್ಲಿ ಇವರಿಗೆ ದೇಹದಾರ್ಢ್ಯ ದ ಮೇಲೆ ಆಸಕ್ತಿ ಬೆಳೆಯಿತು. ತಂದೆ ಜೆ.ಎನ್‌.ರೈ ಅವರ ಪ್ರೋತ್ಸಾಹದೊಂದಿಗೆ ಉದ್ದೀಪನಮುಕ್ತರಾಗಿ ದೇಹವನ್ನು ಬೆಳೆಸಿದರು. ಅನಂತರ ಹಲವು ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ತೊಡಗಿಕೊಂಡರು. ಹಲವು ಪ್ರಶಸ್ತಿಗಳನ್ನೂ ಗೆದ್ದರು.

ಶೋಧನ್‌ ಗೆದ್ದ ಪ್ರಶಸ್ತಿಗಳು
2022ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಐಎನ್‌ಬಿಎ ವಿಶ್ವಕಪ್‌ ಸ್ಪರ್ಧೆಯ 35+ ವಯೋಮಿತಿ ವಿಭಾಗದಲ್ಲಿ ಸ್ಪರ್ಧಿಸಿದ ಶೋಧನ್‌ ಚಿನ್ನ ಗೆದ್ದರು. ಲಾಸ್‌ ವೆಗಾಸ್‌ನಲ್ಲಿ 2022ರಲ್ಲೇ ಐಎನ್‌ಬಿಎ ನ್ಯಾಚುರಲ್‌ ಒಲಿಂಪಿಯ ನಡೆಯಿತು. ಇಲ್ಲಿ 35+ ವಯೋಮಿತಿಯಲ್ಲಿ ಸ್ಪರ್ಧಿಸಿದ ಶೋಧನ್‌ 7ನೇ ಸ್ಥಾನ ಪಡೆದರು. ಇಲ್ಲಿ ಒಟ್ಟು 500 ಸ್ಪರ್ಧಿಗಳು ವಿಶ್ವಾದ್ಯಂತ ಪಾಲ್ಗೊಂಡಿದ್ದರು.

2017ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವಕಪ್‌ ಹಾಗೂ ಆಕ್ಲೆಂಡ್‌ನ‌ಲ್ಲಿ ನಡೆದ ನ್ಯಾಚುರಲ್‌ ಯುನಿವರ್ಸ್‌ ಸ್ಪರ್ಧೆಯಲ್ಲೂ ಚಿನ್ನ ಜಯಿಸಿದ್ದಾರೆ. ಇದೇ ಕೂಟ 2018ರಲ್ಲಿ ಆಸ್ಟ್ರೇಲಿಯದ ಬ್ರಿಸ್ಬೇನ್‌ನಲ್ಲಿ ನಡೆದಾಗ ಬೆಳ್ಳಿ ಪದಕ ಗೆದ್ದರು. 2019ರಲ್ಲಿ ಅಮೆರಿಕದಲ್ಲಿ ನಡೆದ ಕೂಟದಲ್ಲೂ ಬೆಳ್ಳಿ ಜಯಿಸಿದರು.

ಏನಿದು ಸಹಜ ದೇಹದಾರ್ಢ್ಯ?
ದೇಹದಾರ್ಢ್ಯ ಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಇನ್ನೂ ಕ್ರೀಡಾ ಮಾನ್ಯತೆಯನ್ನು ನೀಡಿಲ್ಲ. ಅದನ್ನು ಪಡೆದುಕೊಳ್ಳಲು ಐಎನ್‌ಬಿಎ (ಇಂಟರ್‌ ನ್ಯಾಶನಲ್‌ ನ್ಯಾಚುರಲ್‌ ಬಾಡಿಬಿಲ್ಡಿಂಗ್‌ ಅಸೋಸಿಯೇಶನ್‌) ಶ್ರಮ ಹಾಕಿದೆ.

ಪ್ರಸ್ತುತ ದೇಹದಾರ್ಢ್ಯ ಎನ್ನುವುದು ದೇಹವನ್ನು ಬೆಳೆಸುವ ವ್ಯಾಯಾಮಕ್ರಿಯೆ ಎನ್ನುವುದು ಎಲ್ಲರ ಸಹಜ ಅಭಿಪ್ರಾಯ. ಈ ರೀತಿ ದೇಹದಾರ್ಢ್ಯ ಸ್ಪರ್ಧೆಗಳನ್ನು ಆಯೋಜಿಸುವ ಹಲವು ಸಂಸ್ಥೆಗಳು ವಿಶ್ವದಲ್ಲಿವೆ, ಭಾರತದಲ್ಲೂ ಇವೆ.

ಬಹುತೇಕ ಸಂಸ್ಥೆಗಳು ವಾಡಾದಿಂದ ನಿಷೇಧಿಸ ಲ್ಪಟ್ಟಿರುವ ಉದ್ದೀಪನ ದ್ರವ್ಯಗಳನ್ನು ಸೇವಿಸುವ ಸ್ಪರ್ಧಿಗಳಿಗೆ ಅವಕಾಶ ನೀಡುತ್ತವೆ. ಅವು ವಾಡಾ ನಿಯಮ ಗಳನ್ನು ಪಾಲಿಸುವುದಿಲ್ಲ. ಆದರೆ ಇಂತಹ ಯಾವುದೇ ಉದ್ದೀಪನಗಳನ್ನು ಸೇವಿಸದೆ, ಸಹಜವಾಗಿ ಪೌಷ್ಟಿಕ ಆಹಾರ ಬಳಸಿಯೇ ದೇಹ ಬೆಳೆಸುವ ಕ್ರಮವೊಂದಿದೆ. ಇದೇ ನ್ಯಾಚುರಲ್‌ ಬಾಡಿ ಬಿಲ್ಡಿಂಗ್‌ ಅಥವಾ ಪ್ರಕೃತಿಸಹಜ ದೇಹದಾರ್ಢ್ಯ ಕ್ರಮ. ಈ ಸಹಜ ದೇಹದಾರ್ಢ್ಯಪಟುಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಐಎನ್‌ಬಿಎ ಮಾಡುತ್ತಿದೆ.

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.